Udupi ಗೀತಾರ್ಥ ಚಿಂತನೆ-6: ವೇದವ್ಯಾಸರಿಗೆ ಹೆಸರು ಅನ್ವರ್ಥ
Team Udayavani, Aug 14, 2024, 12:42 AM IST
ಧರ್ಮಜ್ಞಾನಕ್ಕಾಗಿ ಅವತರಿಸಲು ಭಗವಂತನನ್ನು ಪ್ರಾರ್ಥಿಸುವಾಗ ದೇವತೆಗಳ ಗಡಣದಲ್ಲಿ ಬ್ರಹ್ಮರುದ್ರಾದಿಗಳು ಇದ್ದರು, ಗರುಡ, ಶೇಷನಂತಹ ದೇವತೆಗಳು ಇರಲಿಲ್ಲ. ಇದನ್ನು ಹೀಗೆ ಅರ್ಥೈಸಬಹುದು. ಗರುಡ ಮತ್ತು ಶೇಷ ಅವರು ಸೇವಾ ವಿಭಾಗಕ್ಕೆ (ವಾಹನ ಮತ್ತು ಶಯನ) ಸಂಬಂಧಿಸಿದವರು.
ಬ್ರಹ್ಮರುದ್ರಾದಿಗಳೆಂದರೆ ಲೋಕ ಪರಿಪಾಲನೆ ಮಾಡುವವರು. ಬ್ರಹ್ಮ ಸಕಲ ಜೀವರಾಶಿಗಳಿಗೆ ಮುಖ್ಯಸ್ಥ, ರುದ್ರದೇವರು ಸಂಹಾರಕರ್ತರು, ಇಂದ್ರ ಮೂರು ಲೋಕದ ಅಧಿಪತಿ. ಭಗವಂತನನ್ನು ಪ್ರಾರ್ಥಿಸುವಾಗ ಧರ್ಮದ ಜ್ಞಾನ ಲುಪ್ತವಾಗುತ್ತಿದೆ, ಲೋಕದ ಆಡಳಿತವನ್ನು ನಡೆಸುವುದು ಕಷ್ಟವಾಗುತ್ತಿದೆ ಎಂದು ಅದಕ್ಕೆ ಸಂಬಂಧಪಟ್ಟವರೇ ಹೇಳುವುದು ಸಮುಚಿತ. ಭಗವಂತನೇ ಏಕೆ ಅವತರಿಸಬೇಕು? ದೇವತೆಗಳು ಸಾಲದೆ? ಎಲ್ಲ ದೇವತೆಗಳಿಗೂ ಜ್ಞಾನದ ಅಗತ್ಯವಿರುವುದರಿಂದ ದೇವತೆಗಳಿಗೂ ಮುಖ್ಯಸ್ಥನಾದ ಭಗವಂತನನ್ನು ದೇವತೆಗಳು ಪ್ರಾರ್ಥಿಸಿದರು. ವೇದವ್ಯಾಸರ ನಾಮಕರಣದ ಹೆಸರು “ಕೃಷ್ಣ ದ್ವೈಪಾಯನ’ ಎಂದು, ಬಾದರಾಯಣ ಎಂದೂ ಕರೆಯುತ್ತಾರೆ. ವೇದವ್ಯಾಸ ಎಂಬ ಹೆಸರು ಕೆಲಸದ ಆಧಾರದಲ್ಲಿ ಈ ಹೆಸರು ಬಂದಿದೆ.
“ವ್ಯಾಸ’ ಅಂದರೆ ವ್ಯವಸ್ಥಾಪಕ. ಪ್ರತ್ಯೇಕಿಸುವುದು, ವಿಭಾಗಿಸುವುದು, ಸರಿಪಡಿಸುವುದು ಎಂಬ ಅರ್ಥವಿದೆ. ಗೊತ್ತಿದ್ದವರಿಗೆ ಮಾತ್ರ ಇದು ಸಾಧ್ಯ. ಒಂದೇ ಆಗಿದ್ದ ವೇದವನ್ನು ಪ್ರತ್ಯೇಕಿಸಿ ಕೊಟ್ಟದ್ದರಿಂದ ವೇದವ್ಯಾಸರೆಂದಾದರು. ವ್ಯಾಸವೆನ್ನುವುದು ಹವ್ಯಾಸ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe ಸೈಂಟ್ಮೇರೀಸ್ ದ್ವೀಪದಲ್ಲಿ ಸ್ವತ್ಛತೆ
Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ಗೆ ಹಾನಿ
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.