Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ
Team Udayavani, Oct 5, 2024, 12:30 AM IST
“ಧೀಮಾನ್’ ಆದ ದೃಷ್ಟದ್ಯುಮ್ನ ವ್ಯವಸ್ಥಿತವಾಗಿ ಸೇನಾ ವ್ಯೂಹವನ್ನು ರಚಿಸಿದ್ದಾನೆಂದು ದುರ್ಯೋಧನ ದ್ರೋಣಾಚಾರ್ಯರಲ್ಲಿ ಬಣ್ಣಿಸುತ್ತಾನೆ. ಧೀಶಕ್ತಿ, ಧೀಮಾನ್ಗೂ ಬುದ್ಧಿವಂತಿಕೆಗೂ ವ್ಯತ್ಯಾಸವಿದೆ. ಧೀ= ಪ್ರತಿಭೆ= ತತ್ಕ್ಷಣ ಸ್ಫುರಣೆ. ಗಾಯತ್ರೀ ಮಂತ್ರದಲ್ಲಿ “ಧಿಯೋ ಯೋನಃ ಪ್ರಚೋದಯಾತ್’ ಎನ್ನುವುದೂ ಇದನ್ನೇ. ಆ ಕ್ಷಣದಲ್ಲಿ ಹೊಳೆಯಬೇಕು.
ಬುದ್ಧಿಮಾನ್, ಬುದ್ಧಿವಂತ ಅಂದರೆ ವಿಚಾರ ಮಾಡಿ ತಳೆಯುವ ನಿರ್ಣಯ. ಧೀಶಕ್ತಿ ಎನ್ನುವುದು ಯಾರ ಕೈಯಲ್ಲೂ ಇಲ್ಲ. ಆಂಜನೇಯನಿಗೆ ಆ ಶಕ್ತಿ ಇತ್ತು. ಈತ ಧೀಶಕ್ತಿಗೆ ಉತ್ತಮ ಉದಾಹರಣೆ. ಸುರಸೆ ಎಂಬ ರಾಕ್ಷಸಿ ಬಂದಾಗ ಆತ ಕ್ರಿಮಿ ರೂಪದಲ್ಲಿ ಒಳಗೆ ಹೋಗಿ ಹೊರಗೆ ಬಂದದ್ದು, ಬಾಲಕ್ಕೆ ಬೆಂಕಿ ಹಚ್ಚಿಕೊಂಡು ಲಂಕೆಯನ್ನೇ ದಹಿಸಿದ್ದು, ಸಿಂಹಿಕೆ ಘಟನೆ ಇವು ಉದಾಹರಣೆಗಳು. ಆತ ಕೈಗೊಂಡ ಸೀತಾ ಪತ್ತೆ ಕಾರ್ಯವೇ ಅಮೋಘ. ಆತ ಸೀತೆಯನ್ನು ಕಂಡಿರಲೇ ಇಲ್ಲ. ಕಾಣದೆ ಇದ್ದ ಒಬ್ಬ ಸ್ತ್ರೀಯನ್ನು ಬ್ರಹ್ಮಚಾರಿಯಾದ ಈತ ಪತ್ತೆ ಹಚ್ಚಿದ್ದು ಸಾಮಾನ್ಯವೇ? ಸುಂದರಕಾಂಡದಲ್ಲಿ ಹೆಜ್ಜೆ ಹೆಜ್ಜೆಗೆ ಧೀಶಕ್ತಿ ತೋರುತ್ತದೆ. ಇಲ್ಲಿ ದ್ರೋಣಾಚಾರ್ಯರನ್ನು ಕೊಲ್ಲಲು ಹುಟ್ಟಿದ ದೃಷ್ಟದ್ಯುಮ್ನ ದ್ರೋಣರಲ್ಲಿಯೇ ಬಂದು ಶಿಷ್ಯತ್ವವನ್ನು ತೆಗೆದುಕೊಂಡದ್ದು ಧೀಮಂತಿಕೆಯಲ್ಲವೆ? ಆತ ತನ್ನನ್ನೇ ಕೊಲ್ಲಲು ಹುಟ್ಟಿದ್ದು ಎನ್ನುವುದು ದ್ರೋಣರಿಗೂ ಗೊತ್ತು. ಅವರಿಂದಲೇ ವಿದ್ಯೆಯ ಗುಟ್ಟು ತಿಳಿದದ್ದು ಧೀಶಕ್ತಿಯ ಪ್ರತೀಕ ಎಂದು ದುರ್ಯೋಧನ ಕೆಣಕಿದಂತೆ ಹೇಳುತ್ತಾನೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಹೊಟೇಲ್ ಮ್ಯಾನೇಜರ್ಗೆ ವಂಚಿಸಿದ ವೈಟರ್
Hiriydaka: ಅಕ್ರಮ ಮರಳುಗಾರಿಕೆ ಟಿಪ್ಪರ್ ಸಹಿತ ಇಬ್ಬರು ಆರೋಪಿಗಳು ವಶಕ್ಕೆ
Udupi: ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ಸೇವೆ ಸ್ತಬ್ಧ, ಕಚೇರಿಗಳು ಬಂದ್… ನೌಕರರ ಮುಷ್ಕರ
Udupi: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ
Kaup ಹೊಸ ಮಾರಿಗುಡಿ: ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ
Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್: ಕಾಡಾನೆಗಳ ದರ್ಶನ
Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.