ಉಡುಪಿ: ಮಣ್ಣಿನಲ್ಲಿ ಅಧಿಕ ಆಮ್ಲೀಯತೆ- ಫ‌ಸಲು ಪ್ರಮಾಣ ಕುಂಠಿತ


Team Udayavani, Jun 11, 2024, 6:09 PM IST

ಉಡುಪಿ: ಮಣ್ಣಿನಲ್ಲಿ ಅಧಿಕ ಆಮ್ಲೀಯತೆ- ಫ‌ಸಲು ಪ್ರಮಾಣ ಕುಂಠಿತ

ಉಡುಪಿ: ಕಳೆದ ಬಾರಿ ಸುರಿದ ಅತಿಯಾದ ಮಳೆ ಸಹಿತ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಮಣ್ಣಿನ ಆಮ್ಲೀಯತೆ ಪ್ರಮಾಣ
ಹೆಚ್ಚಳವಾಗಿದ್ದು, ಪರಿಣಾಮ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಫ‌ಸಲು ನೀಡುತ್ತಿಲ್ಲ. ಮಣ್ಣಿನಲ್ಲಿ ಆಮ್ಲೀಯತೆ ಪ್ರಮಾಣವಿರುವ ಕಾರಣ ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿನ ಮಣ್ಣಿಗೆ ಕೃಷಿ ಸುಣ್ಣ ಹಾಕುವಂತೆ ಮಣ್ಣು ಆರೋಗ್ಯ ತಜ್ಞರು ಸೂಚನೆ ನೀಡಿದ್ದಾರೆ. ಆದಿಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣ್ಣು ಆರೋಗ್ಯ ಕೇಂದ್ರದಲ್ಲಿ ಮಾ.23ಕ್ಕೆ
ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ 4,500 ಮಾದರಿಗಳ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿತ್ತು. ಈ ಎಲ್ಲ
ಪರೀಕ್ಷೆಗಳಲ್ಲಿ ಆಮ್ಲೀಯತೆ ಪ್ರಮಾಣ ಹೆಚ್ಚಳವಾಗಿರುವ ಅಂಶ ಬೆಳಕಿಗೆ ಬಂದಿದೆ.

ಕಾರಣವೇನು?
ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಭಾರೀ ಮಳೆಯಾಗುವುದರಿಂದ ಇಲ್ಲಿನ ಮಣ್ಣು ಆಮ್ಲೀಯ ವಾಗಿರುತ್ತದೆ. ಇದರಿಂದ ಬೆಳೆ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಈ ಕಾರಣಕ್ಕೆ ಮಣ್ಣೆಗೆ ಕೃಷಿ ಸುಣ್ಣ ಬಳಕೆ ಮಾಡುವುದು ಅನಿವಾರ್ಯವಾಗಿದೆ.

ಏನು ಮಾಡಬಹುದು?
ಜೂನ್‌ ಮತ್ತು ಜುಲೈನಲ್ಲಿ ನಿರೀಕ್ಷಿತ ಮಳೆ ಕಡಿಮೆಯಾದ ಅನಂತರ ರೈತರು ಪ್ರತೀ ಎಕರೆ ಕೃಷಿ ಭೂಮಿಗೆ ಸುಮಾರು 2 ಕ್ವಿಂಟಾಲ್‌ ಕೃಷಿ ಸುಣ್ಣವನ್ನು ಅನ್ವಯಿಸಬೇಕು. ಅತಿವೃಷ್ಟಿ ಕಡಿಮೆಯಾದ ಅನಂತರ ರೈತರು ಸುಮಾರು 2-3 ವರ್ಷಗಳ ಕಾಲ ಈ ಪದ್ಧತಿಯನ್ನು ಮುಂದುವರಿಸಬೇಕು. ಅನಂತರ ಹೊಲದಿಂದ ತೆಗೆದ ಮಣ್ಣಿನ ಮಾದರಿಗಳನ್ನು ಅದರ ಪಿಎಚ್‌ ಮೌಲ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿದೆಯೇ ಎಂದು ತಿಳಿಯಲು ಪರೀಕ್ಷಿಸಬೇಕು. ಈ ವೇಳೆ ಇದು ಇನ್ನೂ ಆಮ್ಲಿಯವಾಗಿರುವುದು ಕಂಡುಬಂದರೆ ಎರಡು ವರ್ಷಗಳ ಕಾಲ ಕೃಷಿ ಸುಣ್ಣ ಅನ್ವಯಿಸುವುದನ್ನು ಮುಂದುವರಿಸಬೇಕು.

ರೈತ ಕೇಂದ್ರಗಳಲ್ಲಿ ಲಭ್ಯ
ಜಿಲ್ಲಾದ್ಯಂತ ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಸುಣ್ಣ ಲಭ್ಯವಿದೆ. ರೈತರು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಮೂಲಕ ಮಣ್ಣಿನ ಫ‌ಲವತ್ತತೆಯನ್ನು ಹೆಚ್ಚಿಸುವ ಜತೆಗೆ ಮಣ್ಣಿನ ಆಮ್ಲೀಯತೆ ಯನ್ನೂ ವೃದ್ಧಿಸಬೇಕು. ಇದರಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಫ‌ಸಲು ಹೊಂದಿಸಿ ಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಮಣ್ಣಿನ ಆರೋಗ್ಯ ಪರಿಣತರಾದ ಅನಂತ ಪ್ರಭು.

ಪ್ರಮಾಣ ಎಷ್ಟಿದೆ?
ಪರೀಕ್ಷೆಗೊಳಪಡಿಸಿದ ಮಣ್ಣಿನ ಮಾದರಿಗಳಲ್ಲಿ ಶೇ.96.61 ರಷ್ಟು ಪೊಟೆನ್ಶಿಯಲ್‌ ಆಫ್ ಹೈಡ್ರೋಜನ್‌(ಪಿಎಚ್‌) ಮಟ್ಟವು ಆಮ್ಲೀಯವಾಗಿದೆ ಎಂದು ತೋರಿಸಿದೆ. ಪರೀಕ್ಷಿಸಿದ ಮಾದರಿಗಳಲ್ಲಿ ಪಿಎಚ್‌ ಮಟ್ಟವು 3.38ರಷ್ಟಿದೆ. ಮಣ್ಣಿನ ಪಿಎಚ್‌ ಮಟ್ಟವು
6.5ಕ್ಕಿಂತ ಕಡಿಮೆಯಿದ್ದರೆ ಅದನ್ನು ಆಮ್ಲಿಯ ಎಂದು ಕರೆಯಲಾಗುತ್ತದೆ. 6.5ರಿಂದ 7.5ರ ನಡುವೆ ಇದ್ದರೆ ಅದು ತಟಸ್ಥ ಮಣ್ಣು. 6.5 ಮತ್ತು 7.5ರ ನಡುವೆ ಇದ್ದರೆ ಕ್ಷಾರೀಯ ಮಣ್ಣು ಎಂದುಪರಿಗಣಿಸಲಾಗುತ್ತದೆ. ಇದು ಉತ್ತರ ಕನ್ನಡ ಭಾಗದಲ್ಲಷೇ ಕಾಣಸಿಗುತ್ತದೆ ಎನ್ನುತ್ತಾರೆ ತಜ್ಞರು.

ಮಣ್ಣು ತಪಾಸಣೆ ಅಗತ್ಯ
ಬೆಳೆ ಪ್ರಮಾಣ ಕುಸಿತ ಉಂಟಾಗಲು ಮಣ್ಣಿನಲ್ಲಿ ಉಂಟಾಗುವ ಆಮ್ಲೀಯತೆಯೂ ಒಂದು ಕಾರಣವಾಗಿದೆ. ನಿಯಮಿತವಾಗಿ ಮಣ್ಣು ತಪಾಸಣೆ ಮಾಡುವ ಮೂಲಕ ಇದನ್ನು ತಿಳಿದುಕೊಳ್ಳಬಹುದು. ಮಣ್ಣಿಗೆ ಕೃಷಿ ಸುಣ್ಣ ಬಳಕೆ ಮಾಡು ವುದರಿಂದ ಫ‌ಲವತ್ತತೆಯನ್ನು ಹತೋಟಿಗೆ ತರಬಹುದು.
*ಶಿವಪ್ರಸಾದ್‌,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ

*ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

vidhana-Soudha

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

FKCCI

Digitization: ರಾಜ್ಯದ ಎಲ್ಲ ಎಪಿಎಂಸಿ ಡಿಜಿಟಲೀಕರಣ: ಸಚಿವ ಶಿವಾನಂದ ಪಾಟೀಲ್‌

cOurt

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Congress-Symbol

Congress: ಪಕ್ಷದ ನಿಲುವಿಗೆ ಭಿನ್ನ ಹೇಳಿಕೆ ನೀಡಿದರೆ ಸಹಿಸುವುದಿಲ್ಲ: ಕೆಪಿಸಿಸಿ

Isrel 2

Israel ಮೇಲೆ ಹೌಥಿ ಉಗ್ರರಿಂದ ಡ್ರೋನ್‌ ದಾಳಿ!

Kodihalli

Electrical system: ಕೃಷಿ ಪಂಪ್‌ಸೆಟ್‌-ಆಧಾರ್‌ ಜೋಡಣೆ ಕೂಡಲೇ ಕೈಬಿಡಲಿ: ಕೋಡಿಹಳ್ಳಿ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫ‌ಲ ಬಿಡಬಹುದು

Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫ‌ಲ ಬಿಡಬಹುದು

Fishing: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ

Fishing: ಬುಲ್‌ಟ್ರಾಲ್‌ ನಿಷೇಧ ಕಟ್ಟುನಿಟ್ಟು ಮಾಡಿ: ಸಚಿವರಿಗೆ ಮನವಿ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

4

Malpe: ಬೋಟಿನಲ್ಲಿ ಅಡುಗೆ ಮಾಡುವ ವೇಳೆ ಬಾಣಲೆಗೆ ಬಿದ್ದು ಮೀನುಗಾರ ಸಾವು

1

Udupi: ಕಾರು ಮಾರಾಟದ ಹೆಸರಿನಲ್ಲಿ ವಂಚನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidhana-Soudha

Chikkamagaluru: ಸೇತುವೆ ನಿರ್ಮಾಣಕ್ಕೆ 1.80 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ

FKCCI

Digitization: ರಾಜ್ಯದ ಎಲ್ಲ ಎಪಿಎಂಸಿ ಡಿಜಿಟಲೀಕರಣ: ಸಚಿವ ಶಿವಾನಂದ ಪಾಟೀಲ್‌

1-kamindu

Test; ಬ್ರಾಡ್‌ಮನ್‌ ದಾಖಲೆ ಸರಿದೂಗಿಸಿದ ಮೆಂಡಿಸ್‌

cOurt

Belagavi: ಮೂರು ವರ್ಷದ ಮಗುವಿನ “ಹತ್ಯಾಚಾರಿ’ಗೆ ಗಲ್ಲು ಶಿಕ್ಷೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.