Udupi ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವು
Team Udayavani, Aug 5, 2023, 10:59 PM IST
ಉಡುಪಿ: ಕರಾವಳಿ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ.
ಸಂತೆಕಟ್ಟೆಯ ನಿವಾಸಿ ಶಶಿರಾಜ್ ಅವರು ಕರಾವಳಿ ಜಂಕ್ಷನ್ ಬಳಿಯ ಶಾರದಾ ಹೊಟೇಲ್ ರಸ್ತೆಯಲ್ಲಿರುವ ಶ್ರೀಮಾತ ಹೆಸರಿನ ಮನೆಯಲ್ಲಿ ವಾಸವಾಗಿದ್ದರು. ಜು. 7ರಂದು ಮಗಳನ್ನು ಭೇಟಿಯಾಗಲೆಂದು ಅಮೆರಿಕಕ್ಕೆ ತೆರಳಿದ್ದರು.
ಜು. 31ರಿಂದ ಆ. 4ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಶಶಿರಾಜ್ ಅವರ ಮಾವನ ಮನೆಯ ಮುಂದಿನ ಬಾಗಿಲನ್ನು ಆಯುಧದಿಂದ ಮುರಿದು ಒಳಪ್ರವೇಶಿಸಿ ಬೆಡ್ರೂಮಿನ ಕಪಾಟಿನ ಬೀಗ ಮುರಿದು ಅದರಲ್ಲಿದ್ದ 15,000 ರೂ. ನಗದು, 8,000 ರೂ. ಮೌಲ್ಯದ ಬೆಳ್ಳಿ ಚೆಂಬು, 11,000 ರೂ. ಮೌಲ್ಯದ 2 ಸಣ್ಣ ಬೆಳ್ಳಿ ಕಾಲು ದೀಪ, 12,000 ರೂ. ಮೌಲ್ಯದ ದೊಡ್ಡ ಗಾತ್ರದ 2 ಬೆಳ್ಳಿ ಕಾಲು ದೀಪ, 15,000 ರೂ. ಮೌಲ್ಯದ ಬೆಳ್ಳಿಯ ತಟ್ಟೆಯ ಮೇಲೆ ಬೆಳ್ಳಿಯ ದೀಪ , 3,000 ರೂ. ಮೌಲ್ಯದ ಮಗುವಿನ ಕಾಲುಗೆಜ್ಜೆ 2, 1000 ರೂ. ಮೌಲ್ಯದ ಬೆಳ್ಳಿ ಬಳೆ, 55,000 ರೂ. ಮೌಲ್ಯದ ಉಂಗುರವನ್ನು ಕಳವುಗೈದಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1,20,000 ರೂ. ಆಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.