Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ
ದೈವರಾಧನೆಗೆ ಮನರಂಜನೆ ಕ್ಷೇತ್ರದಿಂದ ಸಾಂಸ್ಕೃತಿಕ ಆಪತ್ತು
Team Udayavani, Sep 16, 2024, 5:09 PM IST
ಉಡುಪಿ: ಇತ್ತೀಚೆಗೆ ತೆರೆಕಂಡ ಕಲ್ಜಿಗ ಸಿನೆಮಾದಲ್ಲಿ ಬರುವ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಮತ್ತು ಈ ದೃಶ್ಯದಿಂದ ದೈವರಾಧನೆ ಪದ್ಧತಿಗೆ ಚ್ಯುತಿಯಾಗಿದೆ ಎಂಬ ಆರೋಪವನ್ನು ತುಳುನಾಡ ದೈವರಾಧನೆ ಸಂರಕ್ಷಣೆ ವೇದಿಕೆ ಆರೋಪ ಮಾಡಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಗೌರವಾಧ್ಯಕ್ಷ ದಿಲ್ರಾಜ್ ಆಳ್ವ, ದೈವರಾಧನೆ ತುಳುವ ಮಣ್ಣಿನ ಅಸ್ಮಿತೆ ಮತ್ತು ದೈವಗಳು ನಮ್ಮ ಮೂಲ ನಂಬಿಕೆಯಾಗಿದೆ. ಇತ್ತೀಚೆಗೆ ನಮ್ಮ ದೈವರಾಧನೆಗೆ ಮನರಂಜನೆ ಕ್ಷೇತ್ರದಿಂದ ಸಾಂಸ್ಕೃತಿಕ ಆಪತ್ತು ಎದುರಾಗಿದೆ. ಮೊದಲಿಗೆ ಕಾಂತಾರದಿಂದ ಆರಂಭಗೊಂಡಿದ್ದು, ನಾವು ಇದನ್ನು ಹೆಮ್ಮೆ ಪಟ್ಟುಕೊಂಡೆವು. ಅನಂತರ ಇದು ಬೆಂಗಳೂರು, ಮೈಸೂರಿನಲ್ಲಿ ದೈವಗಳ ಪ್ರತಿಷ್ಠಾಪನೆ, ನೇಮ ಎಂಬ ಘಟನೆಗಳು ನಡೆಯಲು ಆರಂಭಗೊಂಡಿತು. ಈ ಬಳಿಕ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂಬ ನೆಲೆಯಲ್ಲಿ ವೇದಿಕೆ ವತಿಯಿಂದ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಕಲ್ಜಿಗ ಸಿನಿಮಾಗೆ ಸಂಬಂಧಿಸಿ ನಾವು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ತುಳು ಸಿನಿಮಾ ಎಲ್ಲರೂ ನೋಡಬೇಕು. ಯಶಸ್ವಿಯಾಗಬೇಕು. ಆದರೆ ದೈವರಾಧನೆ ದೃಶ್ಯವನ್ನು ತೆಗೆಯಬೇಕು ಎಂದರು.
ವೇದಿಕೆ ಸದಸ್ಯೆ ಸಹನಾ ಕುಂದರ್ ಸೂಡ ಮಾತನಾಡಿ, ಮನರಂಜನೆಗಾಗಿ ಕಟ್ಟುಕಟ್ಟಳೆಗಳನ್ನು ಮೀರಿ ದೈವರಾಧನೆ ಎಲ್ಲೆಂದರಲ್ಲಿ ಚಿತ್ರೀಕರಿಸುವುದು ಸರಿಯಾದ ಕ್ರಮವಲ್ಲ. ದೈವರಾಧನೆ ಸಾಂಸ್ಕೃತಿಕ ಜಗತ್ತಿಗೆ ಕಾಲಿಟ್ಟರೆ ನಂಬಿಕೆ ಬೆಲೆ ಇಲ್ಲದಂತಾಗುತ್ತದೆ. ಈಗ ಅಪರೂಪವಾಗಿರುವ ದೈವ ನಿಂದನೆಯ ಘಟನೆಗಳು ಮುಂದಿನ ದಿನಗಳಲ್ಲಿ ಸಮಾನ್ಯವಾಗಲಿದೆ. ಇದೇ ರೀತಿ ಇದ್ದರೆ ಕಾಂತಾರ ಸೀಕ್ವೆಲ್ ಸಿನೆಮಾವನ್ನು ನಾವು ವಿರೋಧಿಸುತ್ತೇವೆ. ಕಲ್ಜಿಗ ಸಿನೆಮಾದಲ್ಲಿ ಕತ್ತರಿ ಹಾಕಿ ಅನಂತರ ಚಿತ್ರ ಬಿಡುಗಡೆಗೊಳಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ ಎಂದರು. ವೇದಿಕೆ ಮಂಗಳೂರು ಜಿಲ್ಲಾಧ್ಯಕ್ಷ ಭರತ್ರಾಜ್, ಸದಸ್ಯರಾದ ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ: Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Viral Disease: ಕೇರಳದಲ್ಲಿ ಎಂ ಫಾಕ್ಸ್ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.