Udupi;ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ ʼನಿʼ-ಶತಾಭಿವಂದನಂ
Team Udayavani, Oct 12, 2024, 5:46 PM IST
ಕೆಮ್ಮಣ್ಣು: ಶತಮಾನೋತ್ಸವ ಸಂಭ್ರಮದಲ್ಲಿರುವ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ʼಶತಾಭಿವಂದನಂʼ ಸಮಾರೋಪ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ (ಅ11) ಬಿಡುಗಡೆಗೊಳಿಸಲಾಯಿತು.
ಖಂಡಿಗೆ ರಾಜಗೋಪಾಲ ಭಟ್ ಸಭಾಂಗಣದಲ್ಲಿ ವಾಗ್ಮಿ, ಸಾಮಾಜಿಕ ಚಿಂತಕ ದಾಮೋದರ ಶರ್ಮ ಬಾರ್ಕೂರು ಹಾಗೂ ಮುಂಬೈಯ ಉದ್ಯಮಿ ಬಿ.ರಮಾನಂದ ರಾವ್ ದಂಪತಿಗಳು ಬಿಡುಗಡೆಗೊಳಿಸಿದರು.
ದಾಮೋದರ ಶರ್ಮ ಮಾತನಾಡಿ, ನೂರು ವರ್ಷಗಳ ಹಿಂದೆ ಹಿಂದೂ, ಮುಸ್ಲಿಂ ಮಹನೀಯರಿಬ್ಬರಿಂದ ಪ್ರಾರಂಭಿಸಲ್ಪಟ್ಟು ಸೊಸೈಟಿಯ ಶತಮಾನೋತ್ಸವ ಸಂದರ್ಭದಲ್ಲಿ ಶತಾಯುಷಿ ಕ್ರಿಶ್ಚಿಯನ್ ಮಹಿಳೆಯನ್ನು ಗುರುತಿಸಿ, ಸನ್ಮಾನಿಸಿ, ʼಶತಾಭಿವಂದನಂʼ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಪುಣ್ಯದ ಕ್ಷಣವೆಂದರು.
ಹಿರಿಯ ಚೇತನಗಳನ್ನು ನೆನಪಿಸಿ ಪ್ರಧಾನ ಕಚೇರಿಗೆ ಸ್ಥಳದಾನ ಮಾಡಿದ ಮಹಾದಾನಿ ಖಂಡಿಗೆ ರಾಜಗೋಪಾಲ ಭಟ್ ಅವರ ಮಗಳಾದ ಲಕ್ಷ್ಮೀ ಹಾಗೂ ಅಳಿಯ ಬಿ.ರಮಾನಂದ ರಾವ್ ಅವರು ಈ ಸಂದರ್ಭದಲ್ಲಿ ಭಾಗವಹಿಸಿರುವುದು ಸಮಯೋಚಿತವೆಂದು ಹೇಳಿದರು.
ಸಂತೆಕಟ್ಟೆ, ಕರಾವಳಿ ಕೆಡ್ರಿಟ್ ಕೋ. ಅಪರೇಟಿವ್ ಸೊಟೈಟಿ ಅಧ್ಯಕ್ಷ, ಗ್ರಾಹಕ ಉಮೇಶ್ ಶೆಟ್ಟಿ ಶುಭ ಹಾರೈಸಿದರು.ಸಂಘದ ನಿವೃತ್ತ ಮುಖ್ಯ ನಿರ್ವಹಣಾಧಿಕಾರಿ ತೇಜಪ್ಪ ಅಮೀನ್, ಉಪಾಧ್ಯಕ್ಷ ಬಿ. ಅಫ್ಜಲ್ ಸಾಹೇಬ್ ಉಪಸ್ಥಿತರಿದ್ದರು. ಗಣಪತಿ ವ್ಯವಸಾಯಕ ಸಂಘದ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಪ್ರಸ್ತಾವಿಸಿ, ಸ್ವಾಗತಿಸಿದರು.
ನಿರ್ದೇಶಕರಾದ ನಾರಾಯಣ ಬಂಗೇರ, ಟಿ. ಗೋಪಾಲಕೃಷ್ಣ ಹೆಗ್ಡೆ, ಹ್ಯೂಬರ್ಟ್ ಸಂತಾನ್ ಲೂವಿಸ್, ರಾಘವೇಂದ್ರ ಪ್ರಸಾದ್, ಉಮೇಶ್ ಅಮೀನ್, ಪುರುಷೋತ್ತಮ್ ಸಾಲ್ಯಾನ್, ಶ್ಯಾಮ್ ಎನ್., ಹರೀಶ್ ಶೆಟ್ಟಿ, ಲೇನಿ ಫರ್ನಾಂಡಿಸ್, ಲತಾ ಪಿ. ರಾವ್, ಲಕ್ಷ್ಮೀ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲ್ಯಾನ್ ವಂದಿಸಿ, ಸತೀಶ್ವಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hiriydaka: ಹಿರಿಯಡಕ ನಿವಾಸಿ, ಬೆಂಗಳೂರು ಉದ್ಯಮಿ ತೀರ್ಥಳ್ಳಿಯಲ್ಲಿ ಆತ್ಮಹತ್ಯೆ
KBC: ಕೆಬಿಸಿಯಲ್ಲಿ 12.5 ಲ.ರೂ.ಗೆದ್ದ ಕಾರ್ಕಳ ಮೂಲದ ಡಾ| ಶ್ರೀಶ್ ಶೆಟ್ಟಿ
Kaup: ದಿವ್ಯಾಂಗರ ಸಹಾಯಕ್ಕೆ ಟೀಮ್ ಮಾರುತಿ ಕುಣಿತ
Udupi Uchila Dasara 2024: ವೈಭವದ ಶೋಭಾಯಾತ್ರೆಗೆ ಅಂತಿಮ ಸಿದ್ಧತೆ
Malpe: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ; ನಕಲಿ ಆಧಾರ್ ಕಾರ್ಡ್ ವಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hiriydaka: ಹಿರಿಯಡಕ ನಿವಾಸಿ, ಬೆಂಗಳೂರು ಉದ್ಯಮಿ ತೀರ್ಥಳ್ಳಿಯಲ್ಲಿ ಆತ್ಮಹತ್ಯೆ
Tax Injustice: ತೆರಿಗೆ ಹಂಚಿಕೆಯಲ್ಲಿ ಕಡೆಗಣಿಸಲು ಕರ್ನಾಟಕವೇನು ಅನ್ಯಾಯ ಮಾಡಿದೆ?: ಸಿಎಂ
Terrorist ಪಕ್ಷ ದೇಶವಾಳುತ್ತಿದೆ…: ಮಲ್ಲಿಕಾರ್ಜುನ ಖರ್ಗೆ ಕಿಡಿ
Hubli ಗಲಭೆ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವುದು ದೊಡ್ಡ ದುರಂತ: ಶೆಟ್ಟರ್ ಕಿಡಿ
Davanagere: ಮಹಿಷಮರ್ದನ ರೀತಿಯಲ್ಲೇ ರಾಜ್ಯ ಸರ್ಕಾರದ ಮರ್ದನ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.