ಕೆಸರು ಗದ್ದೆಯಾದ ಉಡುಪಿ ನರ್ಮ್ ಬಸ್ ನಿಲ್ದಾಣ
Team Udayavani, Mar 15, 2018, 6:30 AM IST
ಉಡುಪಿ: ಧೂಳಿನಿಂದಾವೃತವಾಗಿದ್ದ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ನರ್ಮ್ ಬಸ್ ನಿಲ್ದಾಣ ಇದೀಗ ಕೆಸರು ಮಯವಾಗಿದೆ.
ಧೂಳು ನಿಯಂತ್ರಿಸಲು ನೀರು ಸುರಿದಿದ್ದರಿಂದ ಪ್ರಯಾಣಿಕರು ಬಸ್ ಹತ್ತಲು ಸಂಕಷ್ಟ ಪಡುವಂತಾಗಿದೆ. ಸುಮಾರು ನೂರು ಅಡಿ ಉದ್ದ ಮತ್ತು 50 ಅಡಿ ಅಗಲದ ನರ್ಮ್ನ ತಾತ್ಕಾಲಿಕ ಬಸ್ ನಿಲ್ದಾಣದಿಂದಾಗಿ ಬಸ್ ಚಾಲಕರು ಮತ್ತು ಪ್ರಯಾಣಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಫುಟ್ಪಾತ್ ಏರಿ ಈ ಜಾಗಕ್ಕೆ ಬಸ್ಗಳು ಬರಬೇಕಿದೆ. ಆದರೆ ಲೋಫ್ಲೋರ್ ಹೊಂದಿರುವ ಈ ಬಸ್ಗಳ ಅಡಿ ಭಾಗ ಫುಟ್ಪಾತ್ಗೆ ತಾಗುತ್ತದೆ. ಇದನ್ನು ತಡೆಯಲು ಮಣ್ಣು ಹಾಕಿ ಎತ್ತರಿಸಲಾಗಿದೆ. ಇದು ಸಾಕಷ್ಟು ಧೂಳಿಗೆ ಕಾರಣವಾಗಿದೆ.
ನಾಲ್ಕು ಬಸ್ಗಳು ಮಾತ್ರ
ಈ ಪುಟಾಣಿ ನಿಲ್ದಾಣದಲ್ಲಿ ನಾಲ್ಕು ನರ್ಮ್ ಬಸ್ಗಳಿಗೆ ಮಾತ್ರ ಅವಕಾಶ. ಬೇರೆ ಬಸ್ ಬಂದರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲೂ ಜಾಗವಿಲ್ಲದಾಗಿದೆ. ಅಲ್ಲದೇ ಈ ಸ್ಥಳದಲ್ಲಿ ತಿರುಗಿಸುವುದು, ಪಾರ್ಕಿಂಗ್ ಮಾಡುವುದಕ್ಕೂ ಅತಿ ಜಾಗರೂಕತೆ ವಹಿಸಬೇಕಿದೆ ಎನ್ನುತ್ತಾರೆ ಬಸ್ ಚಾಲಕರು ಸಿಟಿ ಬಸ್ ನಿಲ್ದಾಣಕ್ಕೆ ಪ್ರವೇಶವಿಲ್ಲ ಸಿಟಿ ಬಸ್ ನಿಲ್ದಾಣದಲ್ಲಿ ಸದ್ಯ ನರ್ಮ್ ಬಸ್ಗಳಿಗೆ ಅವಕಾಶ ನೀಡುತ್ತಿಲ್ಲ. ನರ್ಮ್ ಬಸ್ಗಳು ಸಮಯ ಪಾಲನೆ ಮಾಡುತ್ತಿಲ್ಲ ಎಂಬ ತಗಾದೆ ಖಾಸಗಿಯವರದ್ದು. ಸಿಟಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿದರೆ, ಧೂಳು, ಜಾಗದ ಕೊರತೆ ಸಮಸ್ಯೆ ಬಹುತೇಕ ನೀಗುತ್ತದೆ.
ಕಾಮಗಾರಿ ಮುಕ್ತಾಯವರೆಗೂ ಕಿರಿಕ್!
ವಿದ್ಯಾಂಗ ಉಪನಿರ್ದೇಶಕ ಕಚೇರಿ ಆವರಣ ತೆರವುಗೊಳಿಸಿ ಅದೇ ಸ್ಥಳದಲ್ಲಿ ಹೊಸ ನರ್ಮ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಕಾಮಗಾರಿ ನಡೆಯುತ್ತಲೇ ಇದೆ. ಸುಮಾರು ನಾಲ್ಕು ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಕಳೆದ ಸೆಪ್ಟಂಬರ್ನಲ್ಲಿ ಶಿಲಾನ್ಯಾಸ ನೆರವೇರಿದ್ದು, ಕೆಲಸ ಪೂರ್ಣವಾಗುವ ವರೆಗೂ ಧೂಳು-ಕೆಸರಿನಿಂದ ಜನರಿಗೆ ಮುಕ್ತಿ ಇಲ್ಲ ಎನ್ನುವಂತಾಗಿದೆ. ಇನು ಮಳೆಗಾಲದ ಸಂದರ್ಭದಲ್ಲಂತೂ ಪ್ರಯಾಣಿಕರು ಮತ್ತಷ್ಟು ಕಷ್ಟಪಡುವ ಸಾಧ್ಯತೆಗಳೇ ಅಧಿಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
World Rabies Day 2024: ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿವಳಿಕೆ ಕೊರತೆ!
Tour: ಹೊಳೆ ಆಂಜನೇಯ,ಸೋಮನಾಥಪುರ ದೇವಾಲಯ… ಸ್ನೇಹಿತರೊಂದಿಗಿನ ಏಕದಿನದ ನವೋಲ್ಲಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.