Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…
Team Udayavani, Oct 29, 2024, 2:59 AM IST
ನೀವು ನಿಮ್ಮ ಪ್ರಯತ್ನ ಮಾಡಿ, ನನ್ನ ಫಲವನ್ನು ನಿರೀಕ್ಷಿಸಬೇಡಿ ಎನ್ನುತ್ತಾನೆ ಭಗವಂತ. ನನ್ನ ಫಲ ನೋಡಿ ನೀವು ಪ್ರಯತ್ನ ಮಾಡುವುದಲ್ಲ. ಅದು ನಿಮ್ಮ ಡ್ನೂಟಿ, ಇದು ನನ್ನ ಡ್ನೂಟಿ. ಒಬ್ಬನಿಗೆ ರೋಗವೋ? ಇನ್ನಾವುದೋ ಒಂದು ಸ್ಥಿತಿ ಬಂತೆಂದುಕೊಳ್ಳುವ. ಇದನ್ನು ನಾವು ದೇವರು ಕೊಟ್ಟ ಶಿಕ್ಷೆ ಎನ್ನಬಹುದು. ಹಾಗಿದ್ದರೆ ಆ ಸಂತ್ರಸ್ತನಿಗೆ ನಾವು ನೆರವಾಗುವುದು ತಪ್ಪೆ? ಅಲ್ಲ, ಹಾಗಲ್ಲ. ದೇವರ ಕೆಲಸ ದೇವರಿಗೆ, ನಮ್ಮ ಕೆಲಸ ನಮಗೆ. ಕಷ್ಟದಲ್ಲಿದ್ದವರಿಗೆ ನೆರವಾಗುವುದು ನಮ್ಮ ಕೆಲಸ. ಅವರವರ ಕೆಲಸ ಅವರವರಿಗೆ. ಅವನ ಕಷ್ಟವನ್ನು ನಿವಾರಣೆ ಮಾಡುವುದಕ್ಕಿಂತ ಪುಣ್ಯ ಸಂಪಾದನೆ ಮುಖ್ಯ ಗುರಿಯಾಗಬೇಕು. ಈ ಆಯಾಮದಲ್ಲಿ ನೋಡುವುದಾದರೆ ದುಷ್ಟರು ಇರುವುದು ಸಜ್ಜನರಿಗೆ ಒಂದು ಅವಕಾಶವೇ. ದುಷ್ಟರೇ ಇಲ್ಲದಿದ್ದರೆ ಸಜ್ಜನರಿಗೆ ಫಲವೇ ಇಲ್ಲವಾಗುತ್ತದೆ. ದೇವರು ಏಕೆ ಕಷ್ಟ ಉಂಟು ಮಾಡುತ್ತಾರೆ. ಕಾಯಿಲೆಗಳು, ವೈದ್ಯರು, ರೋಗಿಗಳು, ರೋಗಾಣುಗಳು ಎಲ್ಲವನ್ನೂ ಸಮತೋಲನ ಮಾಡುವುದು ದೇವರ, ನಿಸರ್ಗದ ಇಚ್ಛೆ. ನಮಗೆ ಕಾಣುವುದು ನಮ್ಮ ಚಿಂತನೆಯ ಮಟ್ಟ. ನಮ್ಮ ದೃಷ್ಟಿಕೋನದಂತೆ ಸುಖದುಃಖಗಳು ಕಂಡು ಬರುತ್ತವೆ. ಭಗವಂತನ ಉದ್ದೇಶ ತಮ್ಮ ತಮ್ಮ ಸ್ವಭಾವಕ್ಕೆ ಸರಿಯಾಗಿ ಜೀವಿಗಳು ಇರಬೇಕು. ಕಳ್ಳರು ಕಳ್ಳರಾಗಿಯೇ ಇರಬೇಕು. ಕಳ್ಳರು ಸುಭಗರ ವೇಷ ತೊಟ್ಟರೆ ತೊಂದರೆಯಾಗುತ್ತದೆ. ಸುಭಗರೂ ಕಳ್ಳರಂತಿರಬಾರದು, ಅಂತಹ ಅವಕಾಶಕ್ಕೆ ಎಡೆಕೊಡಬಾರದು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TVK Party: ವಿಜಯ್ ಪಕ್ಷದ ಸಿದ್ಧಾಂತಗಳು ನಕಲು: ಡಿಎಂಕೆ, ಎಐಡಿಎಂಕೆ
Udupi; ಗೀತಾರ್ಥ ಚಿಂತನೆ 78: ಕಷ್ಟನಿವಾರಣೆಯೂ ಪುಣ್ಯ ಸಂಪಾದನೆಯೂ…
Deepavali Festival: ಕೆಎಸ್ಸಾರ್ಟಿಸಿಯಿಂದ ಹೆಚ್ಚುವರಿ ಬಸ್
SDM Ujire: ರಚನಾತ್ಮಕ ಚಿಂತನೆಯಿಂದ ನವ ಮನ್ವಂತರ: ಡಾ.ಡಿ.ವೀರೇಂದ್ರ ಹೆಗ್ಗಡೆ
Cast Census: ಬಿ.ಕೆ.ಹರಿಪ್ರಸಾದರಿಂದ ಹಿಂದೂ ಭಾವನೆಗೆ ಧಕ್ಕೆ: ಶಾಸಕ ಹರೀಶ್ ಪೂಂಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.