ವರಂಗ: ಈ ಕಂಬಳ ಗದ್ದೆ ನಾಟಿಗೆ ಅರ್ಧ ಶತಕ‌-ಒಂದೇ ದಿನದಲ್ಲಿ ನಾಟಿ


Team Udayavani, Jul 1, 2024, 5:51 PM IST

ವರಂಗ: ಈ ಕಂಬಳ ಗದ್ದೆ ನಾಟಿಗೆ ಅರ್ಧ ಶತಕ‌-ಒಂದೇ ದಿನದಲ್ಲಿ ನಾಟಿ

ಕಾರ್ಕಳ: ಆಧುನಿಕತೆ ಬೆಳೆದಂತೆ ಸಾಂಪ್ರಾದಾಯಿಕ ಕೃಷಿ ಚಟುವಟಿಕೆ ಮರೆಯಾಗುತ್ತಿದೆ ಎನ್ನುವ ಅಪವಾದದ ಮಧ್ಯೆಯೂ ಇಲ್ಲೊಂದು ಗದ್ದೆಯಲ್ಲಿ ನಡೆಸುವ ನಾಟಿ ಕಾರ್ಯಕ್ಕೆ ಐವತ್ತು ವರ್ಷ ತುಂಬಿದೆ. ವರಂಗ ಜೈನ ಮಠಕ್ಕೆ ಒಳಪಡುವ ವಿಟಲ ಪೂಜಾರಿಯವರ ಕಂಬಳ ಗದ್ದೆಯ 50ನೇ ವರ್ಷದ ನಾಟಿ ಕಾರ್ಯ ರವಿವಾರ ನಡೆಯಿತು. ಇದ ರೊಂದಿಗೆ ಸುದೀರ್ಘ‌ ಕಾಲದ
ಪದ್ಧತಿಯೊಂದು ಜೀವಂತಿಕೆ ಉಳಿಸಿಕೊಂಡ ಕೀರ್ತಿಯೂ ಈ ಗದ್ದೆಗೆ ಪ್ರಾಪ್ತವಾಗಿದೆ.

ವರಂಗ ಕಂಬಳ ಗದ್ದೆ ಸುಮಾರು ಎರಡೂವರೆ ಎಕ್ರೆ ಪ್ರದೇಶದಲ್ಲಿದೆ. ಸಹಜ ಪ್ರಕೃತಿ ಸೌಂದರ್ಯದ ನಡುವೆ ಕಾಣ ಬರುವ ಈ ಗದ್ದೆಯಲ್ಲಿ ನಾಟಿ ಮಾಡಲು ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸಾಕ್ಷಿಯಾಗುತ್ತಾರೆ. ವಿಟಲ ಪೂಜಾರಿಯವರ ಮನೆ ಮಂದಿ, ಇತರರೂ ಸೇರಿ ಉಳುಮೆ, ನಾಟಿ ಕಾರ್ಯದಲ್ಲಿ ಭಾಗವಹಿಸುತ್ತಾರೆ.

ಅವಿಭಕ್ತ ಕುಟುಂಬ
ಈ ಕಂಬಳ ಗದ್ದೆಯನ್ನು ನೋಡಿಕೊಳ್ಳುವ ವಿಟಲ ಪೂಜಾರಿಯವರದ್ದು ಅವಿಭಕ್ತ ಕುಟುಂಬ. ಅವರ ಮನೆಯಲ್ಲಿ ಸುಮಾರು 30 ಜನ ವಾಸಿಸುತ್ತಿದ್ದಾರೆ. ಕುಟುಂಬದ ಬಹುತೇಕ ಮಂದಿ ವಿವಿಧ ಉದ್ಯೋಗದಲ್ಲಿದ್ದಾರೆ.

ವಿದೇಶದಿಂದ ಬಂದು ಭಾಗಿ
ಕುಟುಂಬದ ಸದಸ್ಯ ದಿವಾಕರ ಎಂಬವರು ಕತಾರ್‌, ಸುಧೀರ್‌ ಎಂಬವರು ಬಹ್ರೈನ್‌ನಲ್ಲಿ ಇದ್ದಾರೆ. ಇನ್ನುಳಿದಂತೆ ಕುಟುಂಬದ ಹೆಚ್ಚಿನವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಈ ಕಂಬಳ ಗದ್ದೆಯ ನಾಟಿ ಸಮಯದಲ್ಲಿ ಅವರೆಲ್ಲರೂ ಪ್ರತೀ ವರ್ಷ ಬಂದು ಉಳುಮೆ, ನಾಟಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಬಾರಿ ವಿದೇಶದಲ್ಲಿದ್ದವರು ಕಾರಣಾಂತರಗಳಿಂದ
ಬಂದಿರಲಿಲ್ಲ. ಕಿರಿಯ ಪುತ್ರ ಪ್ರಮೋದ್‌ ಕಂಬಳ ಕೋಣಗಳ ಮೂಲಕ ಉರಲ್‌ ಹಾಡುತ್ತಾ ಗದ್ದೆ ಉಳುಮೆ ಮಾಡುತ್ತಾರೆ,
ಮಹಿಳೆಯರು ಎದುರುಗತೆ, ಹಾಡು ಹರಟೆ, ಒಗಟುಗಳು ಬಿಡಿಸಿಕೊಂಡು ನಾಟಿ ನಡೆಸುತ್ತ ಮನೆಮಂದಿ, ನಾಟಿ ನಡೆಸುವ
ಮಹಿಳೆಯರು ನಾಟಿ ಮಾಡುವ ದಿನವನ್ನು ಹಬ್ಬದಂತೆ ಆಚರಿಸಿ ಖುಷಿ ಪಡುತ್ತಾರೆ.

ಪಸರಿಸುವ ಪಾಡ್ದನದ ಕಂಪು
ನಾಟಿಯ ಸಂದರ್ಭದಲ್ಲಿ ಕಂಬಳಮನೆಯ ಸುನಂದ ಪೂಜಾರ್ತಿ, ರತ್ನಾ, ಜಲಜಾ, ಆಶಾ, ಸರಸ್ವತಿ, ಸೇರಿದಂತೆ ಹರಿಖಂಡಿಗೆ ಸಮೀಪದ ಮಹಿಳೆಯರು ಪಾಡ್ದನಗಳನ್ನು ಹಾಡಿಕೊಂಡು ನಾಟಿ ಮಾಡುತ್ತಾರೆ. ಜತೆಗೆ ಓಬೇಲೆ, ಹೊಯ್ನಾ, ಕೋಟಿ ಚೆನ್ನಯ್ಯರ ಪಾರ್ದನಗಳು, ರಾಜ ಮಹರಾಜರ ಕಥೆಗಳು, ಗುಮ್ಮನ ಕಥೆಗಳು, ಗುಡುಗುಂಟಪ್ಪನ ಕಥೆಗಳು, ಗರ್ಭಿಣಿ ಸ್ತ್ರೀಯ ತುಮುಲಗಳು, ಸೀಮಂತದ ಹಾಡುಗಳು, ಪ್ರಾಣಿ ಪಕ್ಷಿಗಳ ಹಾಡುಗಳು ಜನಪದೀಯವಾಗಿ ಸುಂದರ ಸ್ವರದಲ್ಲಿ ಮೂಡಿ ಬರುತ್ತವೆ.

ಒಂದೇ ದಿನದಲ್ಲಿ ನಾಟಿ
ದೈವತ್ವದ ಮಹತ್ವ ಹೊಂದಿರುವ ಈ ಗದ್ದೆಯಲ್ಲಿ ಕೇವಲ ಒಂದೇ ದಿನದಲ್ಲಿ ನಾಟಿಯಾಗಬೇಕು ಎಂಬುದು ಮನೆಯ ಹಿರಿಯರ ನಂಬಿಕೆ. ನಾಟಿಯಾದ ಬಳಿಕ ಈ ಗದ್ದೆಯಲ್ಲಿ ಎಲ್ಲ ಮಹಿಳೆಯರು ಒಂದೆಡೆ ಸೇರಿಕೊಂಡು ದೈವದಲ್ಲಿ ಪಾಡ್ದನ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ಗದ್ದೆ ಮಧ್ಯಭಾಗದಲ್ಲಿ ವಿವಿಧ ಪೂಜನೀಯ ಮರದ ಎಲೆಗಳನ್ನು ಸಂಗ್ರಹಿಸಿ ಹೂವುಗಳಿಂದ ಸಿಂಗರಿಸಿ ಉದ್ದ ಕೋಲಿನ ಸಹಾಯದಿಂದ ಬೊಲ್ಚಿಯನ್ನು ನಿಲ್ಲಿಸಲಾಗುತ್ತದೆ. ಪಕ್ಷಿಗಳು ಬಂದು ಇದರಲ್ಲಿ ಕುಳಿತು ಕೀಟಗಳನ್ನು ನಾಶ ಪಡಿಸುವುದಕ್ಕೆಂದೆ ಇದನ್ನು ನಿಲ್ಲಿಸಲಾಗುತ್ತಿದೆ.

ವರಂಗ ಕಂಬಳ ನಡೆಯುವ ಗದ್ದೆ
ಪ್ರತೀ ವರ್ಷ ಕೊಯ್ಲು ಮುಗಿದ ಬಳಿಕ ವರಂಗ ಕಂಬಳ ನಡೆಯುವುದು ಇದೇ ಗದ್ದೆಯಲ್ಲಿ. ಕೋಣಗಳನ್ನು ಉಳುಮೆಗೆ ಬಳಸುವುದಲ್ಲದೆ ಕಂಬಳಕ್ಕೂ ಬಳಸುತ್ತಾರೆ. ಈ ಗದ್ದೆಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಕಂಬಳ ಕೂಟದಲ್ಲಿ ಬೈಂದೂರು, ಕುಂದಾಪುರ, ಹಾಲಾಡಿ, ಕಾರ್ಕಳ, ಕೆರ್ವಾಶೆ ಸೇರಿದಂತೆ ವಿವಿಧ ಕಡೆಯ ಸುಮಾರು ಐವತ್ತಕ್ಕೂ ಹೆಚ್ಚು ಕಂಬಳ ಕೋಣಗಳು ಭಾಗವಹಿಸುತ್ತವೆ. ವಿಶೇಷ ಹಳ್ಳಿಯ ಸೊಗಡನ್ನು ಹೊಂದಿರುವ ಈ ಕಂಬಳವನ್ನು ನೋಡಲು ಸಹಸ್ರಾರು ಮಂದಿ ಆಗಮಿಸುತ್ತಾರೆ.

ನಾಟಿ ಕಾರ್ಯ ಹಬ್ಬದಂತೆ
ತುಳುನಾಡಿನ ಸಾಂಪ್ರಾದಾಯಿಕ ಆಚರಣೆ ಉಳಿಸಿ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ. ಕಂಬಳ ಗದ್ದೆಯ ನಾಟಿ ನಮ್ಮ ಕುಟುಂಬದ ಮಂದಿಗಲ್ಲದೆ ನಾಟಿ ಕಾರ್ಯಕ್ಕೆ ಬರುವ ಎಲ್ಲರಿಗೂ ಒಂದು ಹಬ್ಬದಂತೆ. ಸುಧೀರ್ಘ‌ ಅವಧಿಯಿಂದ ನಡೆಸಿಕೊಂಡು ಬಂದ ನಾಟಿ ಕಾರ್ಯ ಈ ಬಾರಿ ಅದು 50 ವರ್ಷ ಪೂರೈಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಇದು ಮುಂದುವರಿಯಲಿದೆ.
-ವಿಟಲ ಪೂಜಾರಿ ವರಂಗ

ಟಾಪ್ ನ್ಯೂಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Bridges collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bridges Collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

ICC T20I Rankings: ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

Chamarajanagar ನೂತನ ಎಸ್ಪಿ ಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ

1-sadsdadsads

Bihar DCM ಶಪಥ ಪೂರ್ಣ; ಅಯೋಧ್ಯೆ ರಾಮನಿಗೆ ಪೇಟ ಅರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್ಕಳ: ಪಿಎಂ ಆವಾಸ್‌ ಮನೆಗಳಿಗೆ ಬೇಡಿಕೆಯೇ ಇಲ್ಲ-250ರಲ್ಲಿ 90 ಮನೆಗಳಿಗಷ್ಟೇ ಅರ್ಜಿ!

ಕಾರ್ಕಳ: ಪಿಎಂ ಆವಾಸ್‌ ಮನೆಗಳಿಗೆ ಬೇಡಿಕೆಯೇ ಇಲ್ಲ-250ರಲ್ಲಿ 90 ಮನೆಗಳಿಗಷ್ಟೇ ಅರ್ಜಿ!

Agriculture-Tracator

Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ

4-manipal

Manipal: ಅನಾಮಧೇಯ ಆ್ಯಪ್‌ ಡೌನ್‌ಲೋಡ್‌ ಮಾಡಿ ವಂಚನೆಗೊಳಗಾದ ಮಹಿಳೆ!

Court-Symbol

Udupi Pocso Court: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ; ಆರೋಪದಿಂದ ತಂದೆ ದೋಷಮುಕ್ತ

Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ

Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ

MUST WATCH

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

ಹೊಸ ಸೇರ್ಪಡೆ

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

3-chikkamagaluru

ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Bridges collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bridges Collapse: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ… 15 ದಿನದಲ್ಲಿ 7ನೇ ಪ್ರಕರಣ

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

Bollywood: 8 ವರ್ಷದ ಬಳಿಕ ಬಾಲಿವುಡ್‌ಗೆ ಪಾಕ್‌ ನಟ‌ ಫವಾದ್‌ ಖಾನ್ ಕಂಬ್ಯಾಕ್

2-dandeli

Dandeli: ಅರಣ್ಯ ಪ್ರದೇಶದಲ್ಲಿ ಆನೆ ದಾಳಿ : ಓರ್ವನಿಗೆ ಗಾಯ, ಚಿಕಿತ್ಸೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.