
ಜಲಸಂರಕ್ಷಣೆ ಇಂದಿನ ಗರಿಷ್ಠ ಆದ್ಯತೆಯಾಗಲಿ
ಅಂತರ್ಜಲ ಮಟ್ಟ ಕುಸಿತ ತಡೆ ಯತ್ನ ಅಗತ್ಯ
Team Udayavani, Jul 19, 2019, 5:19 AM IST

ಉಡುಪಿ: ನೀರಿನ ಪ್ರತಿ ಹನಿಯೂ ಅಮೂಲ್ಯ. ನೀರಿನ ಜಲಸಂಪನ್ಮೂಲ ರಕ್ಷಣೆ, ಪೋಲಾಗದಂತೆ ಬಳಸುವುದರಲ್ಲೇ ಭೂಮಿಯ ಭವಿಷ್ಯ ಅಡಗಿದೆ.
ನಿತ್ಯ ನೀರು ಲಭ್ಯತೆಗೆ ಸಮಾಜದ ಪ್ರತಿಯೊಬ್ಬರೂ ಮಳೆನೀರನ್ನು ತಡೆಹಿಡಿದು ಸಂಗ್ರಹಿಸುವ ಅಥವಾ ಭೂಗರ್ಭದಲ್ಲಿ ಇಂಗಿಸುವ ವ್ಯವಸ್ಥೆಯನ್ನು ಮಾಡಬೇಕಿದೆ.
ನೀರಿನ ಬೇಡಿಕೆ
ರಾಜ್ಯ ಜಲ ನೀತಿ ಪ್ರಕಾರ ಗ್ರಾಮಾಂತರದ ಓರ್ವ ವ್ಯಕ್ತಿಗೆ ದಿನಕ್ಕೆ 55ಲೀ., ಪಟ್ಟಣದಲ್ಲಿ ರುವವನಿಗೆ 70 ಲೀ., ನಗರ ಪ್ರದೇಶದಲ್ಲಿರು ವವನಿಗೆ 100 ಲೀ., ಮಹಾನಗರದಲ್ಲಿರುವವರಿಗೆ 135 ಲೀ. ನೀರು ಅಗತ್ಯವಿದೆ. ಭೂಮಿಯಲ್ಲಿ ಶೇ. 97ರಷ್ಟು ನೀರು ಉಪ್ಪುಗಿದ್ದು, ಶೇ. 2ರಷ್ಟು ನೀರು ಮಂಜುಗಡ್ಡೆ ಹಾಗೂ ನೀರ್ಗಲ್ಲುಗಳ ರೂಪದಲ್ಲಿದೆ. ಅಂದರೆ ಮಾನವನ ಬಳಕೆಗೆ ಸಿಗುವ ನೀರು ಕೇವಲ ಶೇ. 1ರಷ್ಟು ಮಾತ್ರ!
ನೀರಿನ ಅಭಾವ ತೀವ್ರವಾಗಲು ಕಾರಣಗಳು
– ನಗರೀಕರಣದ ನೆವದಲ್ಲಿ ಮಳೆ ಆಕರ್ಷಿಸುವ ಕಾಡು ನಾಶ, ಭೂಮಿ ತಂಪಾಗಿರಿಸುವ ಮರಗಿಡಗಳ ನಾಶ, ಜನಸಂಖ್ಯೆ ಹೆಚ್ಚಳದೊಂದಿಗೆ ಹೆಚ್ಚಿದ ನೀರಿನ ಬೆೇಡಿಕೆ, ಜಾಗತಿಕ ತಾಪಮಾನ ಏರಿಕೆ ಮುಂತಾದ ಕಾರಣಗಳು ನೀರಿನ ಅಭಾವ ಹೆಚ್ಚಲು ಕಾರಣವಾಗಿದೆ.
– ಕೃಷಿ ಹಾಗೂ ಸಾಮಾನ್ಯ ಬಳಕೆಗೆ ಉಪಯೋಗವಾಗುತ್ತಿದ್ದ, ಅಂತರ್ಜಲ ಹೆಚ್ಚಲು ಕಾರಣವಾಗುತ್ತಿದ್ದ ಕೆರೆಗಳು, ಗದ್ದೆಗಳನ್ನು ಕೃಷಿ ಮಾಡುವುದನ್ನು ನಿಲ್ಲಿಸಿ, ಸಮುಚ್ಚಯಗಳು, ನಗರ ವಿಸ್ತರಣೆ ಇತ್ಯಾದಿ ಆಗಿದ್ದರಿಂದ ನೀರು ಇಂಗುತ್ತಿಲ್ಲ. ನೀರಿಗಾಗಿ ಎಲ್ಲೆಡೆ ಕೊಳವೆಬಾವಿ ಕೊರೆದು ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ.
– ಹೆಚ್ಚಿದ ಕೈಗಾರಿಕೆ, ಮನುಷ್ಯ ಉಂಟುಮಾಡಿದ ತ್ಯಾಜ್ಯದಿಂದ ನೀರು ಕಲುಷಿತವಾಗುತ್ತಿರುವುದು, ನೈಸರ್ಗಿಕ ಸಂಪನ್ಮೂಲವಾದ ನೀರಿನ ಬೇಕಾಬಿಟ್ಟಿ ಬಳಕೆಯಿಂದಲೂ ಅಭಾವವಾಗಿದೆ.
ಜಲ ಸಂರಕ್ಷಣೆ ಅಭಿಯಾನದ ಭಾಗವಾಗಿ ಮಳೆಕೊಯ್ಲು ಮಾಹಿತಿ ಕಾರ್ಯಾಗಾರವನ್ನು ‘ಉದಯವಾಣಿ’ಯು ಜಿಲ್ಲಾಡಳಿತ, ಜಿ.ಪಂ.,
ನಿರ್ಮಿತಿ ಕೇಂದ್ರ, ಎಂಜಿಎಂಕಾಲೇಜಿನ ಸಹಭಾಗಿತ್ವದಲ್ಲಿ ಜು. 20ರ ಬೆಳಗ್ಗೆ
9.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ
ನಡೆಸಲಿದ್ದು, ಸಾರ್ವಜನಿಕರು ಭಾಗವಹಿಸಬಹುದು.
ಜಾಗೃತಿ ಅಗತ್ಯ
ನೀರಿನ ಹಿತಮಿತ ಬಳಕೆಯ ಬಗ್ಗೆ ಜನರಲ್ಲಿ ಈ ಕ್ಷಣದಿಂದಲೇ ಅರಿವು ಮೂಡಬೇಕು. ಮಳೆನೀರನ್ನು ಶೇಖರಿಸಿಟ್ಟುಕೊಳ್ಳುವ ಪರಿಪಾಠ ಬೆಳೆಸಿಕೊಂಡರೆ ಬೇಸಗೆ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ನೀರು ಶೇಖರಣೆಯಲ್ಲಿ ಹಲವಾರು ವಿಧಾನಗಳಿದ್ದು, ವೆಚ್ಚವೂ ಅತ್ಯಲ್ಪವಾಗಿದೆ. ಈ ಬಗ್ಗೆ ಪ್ರತಿ ಮನೆಯಲ್ಲೂ ಜಾಗೃತಿಯಾಗಬೇಕು.
-ಜೋಸೆಫ್ ಜೆ.ಎಂ. ರೆಬೆಲ್ಲೊ, ಜಲತಜ್ಞರು
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.