ರಾಮನ ತಣ್ತೀ ಅಳವಡಿಸಿಕೊಂಡಾಗ ಜೀವನ ಆರಾಮ
Team Udayavani, Mar 15, 2017, 3:29 PM IST
ಮರವಂತೆ (ಉಪ್ಪುಂದ): ದೇವರಿಗೆ ಆಭರಣಗಳನ್ನು ಶೃಂಗರಿಸಿದಾಗ ಶಕ್ತಿ ಹೆಚ್ಚುವುದಿಲ್ಲ. ಅದು ನಮಗಿರುವ ಅರ್ಪಣಾ ಮನೋಭಾವನೆಯನ್ನು ತೋರಿಸುತ್ತದೆ. ಯಾವುದೇ ವಸ್ತುಗಳಿಂದ ಏನನ್ನೂ ಮಾಡಲಾಗದು ಅಂದ ಮೇಲೆ ಆತನಿಗೆ ಪ್ರಭಾವಳಿ ಬೇಕಾಗಿರುವುದಿಲ್ಲ. ಶ್ರೀರಾಮನ ಶಕ್ತಿ ಅನಂತವಾದುದು. ಆತನ ನಾಮ ಸ್ಮರಣೆಯಿಂದ ಶ್ರದ್ಧಾ, ಭಕ್ತಿ ಇನ್ನಷ್ಟು ಪ್ರಕಾಶಿಸುತ್ತದೆ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಶ್ರೀಮತ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ನಾಗೂರು ಗಂಗೆಬೈಲು ಶ್ರೀ ರಾಮಭಜನಾ ಮಂದಿರದ 25ನೇ ವಾರ್ಷಿಕೋತ್ಸವ ಹಾಗೂ ಹೈಗಳಿ, ಶ್ರೀನಾಗದೇವರ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿ ಉತ್ಸವದಲ್ಲಿ ಮಾ. 13ರಂದು ಸಂಜೆ ಆಶೀರ್ವಚನ ನೀಡಿ ಮಾತನಾಡಿದರು.
ದೇವರಿಗೆ ಆರತಿ ಮಾಡುವುದು ನಮ್ಮೊಳಗಿನ ಅಂಧಕಾರ ತೊಲಗಿಸಿ ಬೆಳಕು ಮೂಡಿಸುವ ಪ್ರತೀಕವಾಗಿದೆ. ಜೀವನದಲ್ಲಿ ಶ್ರೀರಾಮನ ತಣ್ತೀಗಳನ್ನು, ಉದಾರ ಮನೋಭಾವನೆಗಳನ್ನು ಅಳವಡಿಸಿಕೊಂಡಾಗ ಜೀವನ ಆರಾಮ ವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಶ್ರೀರಾಮ ದೇವರಿಗೆ ಗಂಗೆಬೈಲು ಗೌರಜ್ಜಿಮನೆ ಮುತ್ತು ಇವರು ನೀಡಿರುವ ರಜತ ಮುಖವಾಡ ಮತ್ತು ಪ್ರಭಾವಳಿ ಸಮರ್ಪಣೆಯನ್ನು ಶ್ರೀಸ್ವಾಮಿಗಳು ನೆರವೇರಿಸಿದರು.ಪುಣೆ ಉದ್ಯಮಿ ಗಂಗೆಬೈಲು ಗೋಪಾಲ ಖಾರ್ವಿ ಸ್ವಾಗತ ಗೋಪುರವನ್ನು ನೀಡಿದರು. ಮಂಜುನಾಥ ಖಾರ್ವಿ ಸ್ವಾಗತಿಸಿದರು. ಗೋವಿಂದ ಖಾರ್ವಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್
Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ
Manipal ಆನ್ಲೈನ್ ವಂಚಕರ ಬಲೆಗೆ ಬಿದ್ದ ಪಿಎಚ್.ಡಿ. ವಿದ್ಯಾರ್ಥಿನಿ!
Rain ಕಬ್ಬಿನಾಲೆ, ಸಿದ್ದಾಪುರ: ಸುಂಟರಗಾಳಿಗೆ ಅಪಾರ ಹಾನಿ
Railway ಕರಾವಳಿ ರೈಲ್ವೇ ಸಮಸ್ಯೆ ಪರಿಹಾರಕ್ಕೆ ಸಂಸದರ ಮನವಿ
MUST WATCH
ಹೊಸ ಸೇರ್ಪಡೆ
Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್
Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್ – ಶಿವಣ್ಣ
Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ
Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್
Herbal: ಪಂಕಜ ಕಸ್ತೂರಿ ಹರ್ಬಲ್ ಗೆ ಅತ್ತ್ಯುತ್ತಮ ಹೆಲ್ತ್ ಕೇರ್ ಬ್ರ್ಯಾಂಡ್ ಮನ್ನಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.