ಕೋವಿಡ್ ಔಷಧ ನಿಧಿಗಾಗಿ ಯುವಕರ ಬೈಕ್ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ
Team Udayavani, Dec 1, 2020, 11:41 AM IST
ಕುಂದಾಪುರ, ನ. 30: ಕೋವಿಡ್ ಔಷಧ ನಿಧಿಗಾಗಿ 3 ಕೋ.ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡು ಬೈಕ್ ಯಾತ್ರೆ ನಡೆಸುವ ಸಾಹಸಕ್ಕೆ ಇಲ್ಲಿನ 23 ಮಂದಿ ಯುವಕರ ತಂಡವೊಂದು ಮುಂದಾಗಿದೆ.
ಡಿ. 1ರಂದು ಬೈಕ್ ಯಾನ ಆರಂಭವಾಗಲಿದ್ದು, 18 ದಿನಗಳ ಪರ್ಯಂತ 4 ಸಾವಿರ ಕಿ.ಮೀ. ದೂರ ಕ್ರಮಿಸಿ 6 ರಾಜ್ಯ, 13 ನಗರ, 11 ರೋಟರಿ ಜಿಲ್ಲೆಗಳನ್ನು ಹಾದು ಹೋಗಲಿದ್ದಾರೆ. ಈ ಸಂದರ್ಭ 100ರಷ್ಟು ಕ್ಲಬ್ಗಳಿಗೆ ಭೇಟಿ ನೀಡಿ ನಿಧಿ ಸಂಗ್ರಹಿಸಲಿದ್ದಾರೆ. ರಾಜ್ಯದ 12 ಕ್ಲಬ್ಗಳ ಸದಸ್ಯರ ತಂಡ ಬೆಂಗಳೂರು, ನೆಲ್ಲೂರು, ವಿಜಯವಾಡ, ಹೈದರಾಬಾದ್, ಸೊಲ್ಹಾಪುರ, ಶಿರ್ಡಿ, ಮುಂಬಯಿ, ಪುಣೆ, ರತ್ನಗಿರಿ, ಗೋವಾ, ಉಡುಪಿ, ಕೋಯಿಕ್ಕೋಡ್, ಮೈಸೂರು ಮೂಲಕ ಸಾಗಿ ಮತ್ತೆ ಡಿ. 18ರಂದು ಬೆಂಗಳೂರು ತಲುಪಲಿದೆ. 20 ಬೈಕ್, ಒಂದು ಕಾರು ಯಾತ್ರೆ ತೆರಳಲಿವೆ. ತಂಡದಲ್ಲಿ ನಾಲ್ವರು ವೈದ್ಯರಿದ್ದಾರೆ. ಮೆಡಿಕಲ್ ಕಿಟ್ಗಳನ್ನು ಇರಿಸಿಕೊಳ್ಳಲಾಗಿದೆ.
ತಂಡದಲ್ಲಿ ಕುಂದಾಪುರದ ರೋಟರಿ ಕ್ಲಬ್ ರಿವರ್ಸೈಡ್ನ ಅಧ್ಯಕ್ಷ ಕೌಶಿಕ್ ಯಡಿಯಾಳ್ ಇರಲಿದ್ದಾರೆ. ಡಿ. 13ರಂದು ಯಾತ್ರೆ ಕುಂದಾಪುರ ತಲುಪಲಿದೆ. ಸಂಗ್ರಹಿಸಿದ ನಿಧಿಯನ್ನು ಸರಕಾರದ ಕೋವಿಡ್ ಔಷಧ ನಿಧಿಗೆ ನೀಡಲಾಗುತ್ತದೆ. ಅನುದಾನ ನೀಡಿದ ಸಂಘ ಸಂಸ್ಥೆಯವರಿಗೆ ಸರಕಾರ ಲಸಿಕೆಗಳನ್ನು ನೀಡಲಿದೆ. ಬಿಪಿಎಲ್ ಕಾರ್ಡ್ದಾರರಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲು ಸರಕಾರದಿಂದ ಔಷಧ ಖರೀದಿಯನ್ನು ಕೂಡ ನಡೆಸಲಾಗುವುದು ಎಂದು ಕೌಶಿಕ್ ಯಡಿಯಾಳ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ
ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ
Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್
Deepavali: ಹಬ್ಬದ ಋತುವಿನಲ್ಲಿ ಹೊಸ ಸ್ಟಾಕ್ನೊಂದಿಗೆ ಸಿದ್ಧವಾಗಿದೆ ವಸ್ತ್ರೋದ್ಯಮ
Kundapura: ಕೋಣಿ ಬ್ಯಾಂಕ್ ಕಳ್ಳತನ ಯತ್ನ; ಅಂತರ್ ರಾಜ್ಯ ಕಳ್ಳರಿಬ್ಬರ ಬಂಧನ
MUST WATCH
ಹೊಸ ಸೇರ್ಪಡೆ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.