ಭೂತಾಯಿಯ ಒಡಲು ವೈವಿಧ್ಯತೆಯ ಕಡಲು


Team Udayavani, Jul 27, 2019, 9:15 AM IST

uk-tdy-2

ಹೊನ್ನಾವರ: ಬಳ್ಳಾರಿಯಂತೆ ಬರಿ ಬಂಡೆಯಲ್ಲ, ಬಯಲುಸೀಮೆ ಕಪ್ಪು ಜಿಗುಟು ಮಣ್ಣಲ್ಲ, ಮಲೆನಾಡಿನ ಕೆಂಪು ಮಣ್ಣೂ ಅಲ್ಲ. ಉತ್ತರ ಕನ್ನಡದ ಭೂ ತಾಯಿಯ ಒಡಲು ಕೆಂಪು ಮಣ್ಣು, ಚಿರೆಕಲ್ಲು, ಅಲ್ಲಲ್ಲಿ ಶಿಲೆ, ಒಡಲಿನಲ್ಲಿ ಶೇಡಿ ಮಣ್ಣು, ಹೊಯ್ಗೆ, ಹೀಗೆ ವೈವಿಧ್ಯತೆಯಿಂದ ಕೂಡಿದೆ. ಸ್ವಲ್ಪ ಅಲ್ಲಾಡಿಸಿದರೂ ಅನಾಹುತ ತಪ್ಪಿದ್ದಲ್ಲ.

ಮುರ್ಡೇಶ್ವರ, ಧಾರೇಶ್ವರ, ಗೋಕರ್ಣ ಮೊದಲಾದ ಕಡಲತೀರಗಳಿಂದ ಆರಂಭಿಸಿ ಕಾದಿಟ್ಟ ಅರಣ್ಯ ಪ್ರದೇಶದವರೆಗೂ ಬಂಡೆಗಲ್ಲನ್ನು ತಲೆ ಮೇಲೆ ಹೊತ್ತು ನಿಂತ ಬೆಟ್ಟ. ನೋಡಲು ಗಟ್ಟಿಕಂಡರೂ ಕೈತಾಕಿದರೆ ಕುಸಿಯುತ್ತದೆ. ಕಿರಿದಾದ ಕರಾವಳಿ ಭೂ ಪ್ರದೇಶದ ನಿಗೂಢತೆ ತಿಳಿದ ಬ್ರಿಟೀಷರು ಇಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದರು. ಜಾರ್ಜ್‌ ಫರ್ನಾಂಡೀಸ್‌, ರಾಮಕೃಷ್ಣ ಹೆಗಡೆ, ಮಧು ದಂಡವತೆ ಕೊಂಕಣ ರೈಲ್ವೆ ಯೋಜನೆಗೆ ಕೈಹಾಕಿ ನಾಲ್ಕು ವರ್ಷಗಳಲ್ಲಿ ಮುಗಿಯಬೇಕು ಎಂದರು. ಹೆಜ್ಜೆ ಹೆಜ್ಜೆಗೆ ಭೂ ಕುಸಿತ, ಸುರಂಗಗಳ ಕುಸಿತ, ಇಳಿಜಾರಾಗಿ ಧರೆ ಕುಸಿಯಿತು. ಇದರಿಂದ ಕಂಗೆಟ್ಟ ಕೆಆರ್‌ಸಿಎಲ್ ಯೋಜನೆ ಕೈಬಿಡುವ ಮಾತನಾಡಿತ್ತು. ವಿದೇಶಿ ತಂತ್ರಜ್ಞಾನವೂ ಇಲ್ಲಿ ಉಪಯುಕ್ತವಾಗಲಿಲ್ಲ. ಶ್ರೀಧರನ್‌ ನೇತೃತ್ವದ ಅನುಭವಿ ತಂಡ ಭಾರತೀಯ ತಂತ್ರಗಾರಿಕೆ ಬಳಸಿದ ಕಾರಣ ನಾಲ್ಕು ವರ್ಷ ತಡವಾಗಿ ಕೊಂಕಣ ರೇಲ್ವೆ ಓಡಿತು.

ಹೊನ್ನಾವರ, ಶಿರೂರುಗಳಲ್ಲಿ ಕಿಮೀ ಸುರಂಗ ರಚಿಸುವಾಗ ಶೇಡಿ ಮಣ್ಣಿನ ಕುಸಿತದಿಂದಾಗಿ ಕೆಲಸ ವಿಳಂಬವಾಯಿತು. ನಂತರ ಮಧ್ಯದಲ್ಲಿ ಸುರಂಗ ಬಾವಿ ನಿರ್ಮಿಸಿ ನಾಲ್ಕೂ ಕಡೆಯಿಂದ ಕಾಮಗಾರಿ ನಡೆಸಬೇಕಾಯಿತು. ಹೊರಗಿನ ಬಂಡೆ ನೋಡಿ ಒಳಪ್ರವೇಶಿಸಿದರೆ ಹತ್ತಡಿ ಆಳದಲ್ಲಿ ದಪ್ಪ ದೋಸೆ ಹಿಟ್ಟಿನಂತಹ ಮಣ್ಣಿನ ಪ್ರವಾಹ ಅಧಿಕಾರಿಗಳನ್ನು ಕಂಗೆಡಿಸಿತ್ತು. ಅದೇ ಸಂದರ್ಭದಲ್ಲಿ ಸುರಂಗ ಬಾವಿಯಲ್ಲಿ ಭೂಕುಸಿತ ಉಂಟಾಗಿ 11 ಕಾರ್ಮಿಕರು ಮೃತಪಟ್ಟರು. ಹೊನ್ನಾವರದ ಸುರಂಗಬಾವಿಯನ್ನು ಪ್ರಭಾತನಗರದಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಶಿರೂರು ಘಟ್ಟದಲ್ಲಿ ಹೆದ್ದಾರಿ ಮಧ್ಯೆ ಸುರಂಗ ಬಾವಿ ತ್ರಿಶಂಕು ಸ್ಥಿತಿಯಲ್ಲಿದ್ದರೆ, ಅರ್ಧ ಮೇಲಿನಿಂದ ಕಾಣುತ್ತದೆ. ಇದನ್ನು ಅಲ್ಲಾಡಿಸಲೂ ಭಯ. ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಹಾಗೆ ಇಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಕೊಂಕಣ ರೈಲು ಓಡ ತೊಡಗಿದ ಮೇಲೂ ನಾಲ್ಕಾರು ವರ್ಷ ಭೂಕುಸಿತದಿಂದ ರೈಲು ಸಂಚಾರ ನಿಲ್ಲಿಸಬೇಕಾಗಿ ಬಂತು.ಕಾಸರಕೋಡ ಕೆಳಗಿನೂರಿನಲ್ಲಿ ಈಗಲೂ ಭೂಮಿ ಗಟ್ಟಿಯಾಗಿಲ್ಲ. ದ್ವಿಪಥ ನಿರ್ಮಾಣವಾಗಿ ಎಷ್ಟೋ ವರ್ಷಗಳಾದ ಮೇಲೆ ಭೂಮಿ ಗಟ್ಟಿಯಾಗಿತ್ತು. ಚತುಷ್ಪಥ ನಿರ್ಮಾಣ ಕಾಮಗಾರಿಗೆ ಭೂ ಕುಸಿತ ಸಮಸ್ಯೆಯಾಗಿದೆ. ಕಳೆದ ವರ್ಷ ಶಿರೂರು, ಭಟ್ಕಳ, ಹೊನ್ನಾವರಗಳಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಯಿತು. ಧರೆಗೆ ಸಿಮೆಂಟ್ ಮೆತ್ತಿದ್ದು ಮಿರ್ಜಾನ್‌ ಬಳಿ ಹಪ್ಪಳದಂತೆ ಮಣ್ಣಿನೊಟ್ಟಿಗೆ ಕೆಳಗಿಳಿದು ಕೂತಿದೆ. ಇಂದು ಅಲ್ಲಿ ಜಲ್ಲಿ ರಾಶಿ ಹಾಕಿದ್ದು ಕಂಡುಬಂತು. ಕಳೆದ ಎರಡು ದಶಕಗಳಲ್ಲಿ ಅಣೆಕಟ್ಟು, ನೌಕಾನೆಲೆ, ಚತುಷ್ಪಥಗಳಿಗಾಗಿ ಅಗಾಧ ಪ್ರಮಾಣದಲ್ಲಿ ಶಿಲೆ ಮತ್ತು ಕೆಂಪು ಚಿರೆಕಲ್ಲನ್ನು ಮೇಲೆತ್ತಲಾಗಿದೆ. ಕೆಂಪು, ಶೇಡಿ ಮತ್ತು ಹೊಯ್ಗೆ ಮಿಶ್ರಿತ ಮಣ್ಣು ಸಡಿಲಾಗಿದೆ. ಎಲ್ಲ ಹಳ್ಳಿಗಾಡಿನಲ್ಲೂ ಜೆಸಿಬಿ ಬಳಸಿ ಭೂಸ್ಥಿತ್ಯಂತರ ಮಾಡಲಾಗಿದೆ. ಒಂದೂ ಜೆಸಿಬಿ ಕಾಣದ ಜಿಲ್ಲೆಯಲ್ಲಿ ಈಗ ಸಾವಿರಾರು ಖಾಸಗಿ ಜೆಸಿಬಿ, ಮಣ್ಣು ಸಾಗಿಸುವ ಟಿಪ್ಪರ್‌ಗಳು ಬಂದಿವೆ. ಬೋರ್ವೆಲ್ ಮಿಶನ್‌ಗಳು ಅಷ್ಟೇ ಸಂಖ್ಯೆಯಲ್ಲಿ ಭೂಮಿ ಕೊರೆದಿವೆ. ಪಶ್ಚಿಮದಿಂದ ಕಡಲು ಕೊರೆತ ಜೋರಾಗಿದೆ. ತೆರೆ ತಡೆಯುವ ಹೊಂಯ್ಗೆ ದಿನ್ನೆಗಳೆಲ್ಲಾ ಗಾಜು ತಯಾರಿಕೆಗೆ ಬಳಸುವ ಸಿಲಿಕಾನ್‌ ಪ್ರಮಾಣ ಹೆಚ್ಚಿದ್ದ ಕಾರಣ ಸಾಗಾಟವಾಗಿದೆ. ಖಾಲಿ ಸ್ಥಳದಲ್ಲಿ ಮನೆ ತಲೆ ಎತ್ತಿದೆ. 4000 ಮಿಮೀ ಮಳೆ ಬಿದ್ದರೂ ಅನಾಹುತವಾಗದ ದಿನಗಳು ಹೋಗಿ ಕೇವಲ 2000ಮಿಮೀ ಮಳೆ ಬಿದ್ದಾಗ ಅದರ ಧಾರಣ ಶಕ್ತಿ ಭೂಮಿಗೂ ಇಲ್ಲ, ಜನಕ್ಕೂ ಇಲ್ಲ. ನೀರು ಪ್ರಯೋಜನಕ್ಕೂ ಇಲ್ಲವಾಗಿದೆ.

 

•ಜೀಯು, ಹೊನ್ನಾವರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.