ಆಚಾರ್ಯ ಶಂಕರರ ಬಗ್ಗೆ ಉಪೇಕ್ಷೆ ಸಲ್ಲ
Team Udayavani, May 9, 2019, 4:35 PM IST
ಶಿರಸಿ: ಆಚಾರ್ಯ ಶಂಕರ ಭಗವತ್ಪಾದರ ಬಗ್ಗೆ ನಮ್ಮ ದೇಶದಲ್ಲಿ ಉಪೇಕ್ಷೆ ಇದೆ. ತಾಟಸ್ಥ್ಯವೂ ಇದೆ. ಇದು ಸರಿಯಲ್ಲ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಯೋಗ ಮಂದಿರದಲ್ಲಿ ಬುಧವಾರ ಶಂಕರ ಜಯಂತಿ ಹಿನ್ನೆಲೆಯಲ್ಲಿ ನೆಲಮಾವ ವೇದವಿದ್ಯಾ ಸಂಸ್ಕಾರ ಮತ್ತು ಸಂಶೋಧನಾ ಕೇಂದ್ರ ನೀಡುವ ಆಚಾರ್ಯ ಶಂಕರಶ್ರೀ ಪ್ರಶಸ್ತಿಯನ್ನು ವಿದ್ವಾನ್ ಮಂಜುನಾಥ ಭಟ್ಟ ಕೊಡ್ಲೇಕೆರೆ ಅವರಿಗೆ ಪ್ರದಾನ ಮಾಡಿ ಅವರು ಆಶೀರ್ವಚನ ನುಡಿದರು.
ರಾಜ್ಯ ಸರಕಾರ ಹದಿನೈದು ವರ್ಷಗಳ ನಿರಂತರ ಆಗ್ರಹದಿಂದ ಶಂಕರ ಜಯಂತಿಯನ್ನು ದಾರ್ಶನಿಕರ ದಿನ ಎಂದು ಆಚರಿಸುತ್ತಿದೆ. ಇದು ಒಂದಡೆಗೆ ಖುಷಿ ತಂದರೂ ನಮ್ಮಲ್ಲಿ ಶಂಕರರ ಬಗ್ಗೆ, ಅವರ ಶ್ರೀಶೈಲದ ಬಗ್ಗೆ ಇರುವ ಉಪೇಕ್ಷೆ ಬೇಸರ ತರಿಸುತ್ತದೆ ಎಂದ ಅವರು, ರಾಮಕೃಷ್ಣ ಪರಮಹಂಸರೇ ಹಿಂದೆ ಲೋಕ ಶಿಕ್ಷಣ ನೀಡಲು ಭಗವಂತನಿಂದಲೇ ಶಕ್ತಿ ಹಾಗೂ ಪ್ರೇರಣೆ ಪಡೆದು ಬಂದವರು ಎಂದು ಶಂಕರರ ಬಗ್ಗೆ ಹೇಳಿದ್ದಾರೆ. ರಾಮಕೃಷ್ಣರು ಇನ್ನಾರ ಬಗ್ಗೆಯೂ ಈ ಮಾತು ಆಡಿಲ್ಲ. ಅದಕ್ಕೆ ಶಂಕರರ ಮೇರು ಸದೃಶ್ಯ ವ್ಯಕ್ವಿತ್ವ ಕಾರಣ ಎಂದರು.
ಆಚಾರ್ಯರು ಎಂದರೆ ವೇದ ಶಾಸ್ತ್ರಗಳ ಜ್ಞಾನವನ್ನು ಗಳಿಸುತ್ತಲೇ ಇರುವವನು. ಅದನ್ನು ಶಿಷ್ಯರಿಗೆ ಆಚರಿಸಲು ಹೇಳುತ್ತಲೇ ಇರುವವನು ಹಾಗೂ ಸ್ವತಃ ಆಚರಿಸುವವನು. ಅಂತರ ಸಾಧಕರು ಶಂಕರರಾಗಿದ್ದರು ಎಂದೂ ಬಣ್ಣಿಸಿದರು.
ಬೆಂಗಳೂರಿನ ರಾಮಕೃಷ್ಣ ವಿದ್ಯಾರ್ಥಿ ಮಂದಿರದ ಮುಖ್ಯಸ್ಥ ಶ್ರೀ ಸ್ವಾಮಿ ಶ್ರೀ ತದ್ಯುಕ್ತಾನಂದಜಿ ಮಹಾರಾಜ್ ಮಾತನಾಡಿ, ಭಾರತ ದೇಶದ ಸನಾತನ ಸಂಸ್ಕೃತಿ, ಸಂಸ್ಕೃತ ಭಾಷೆಯ ಪುನರುತ್ಥಾನವನು ಆಚಾರ್ಯ ಶಂಕರಾಚಾರ್ಯರು ಮಾಡಿದ್ದರು. ನಾಲ್ಕು ದಿಕ್ಕುಗಳಲ್ಲಿ ಮಠ ಸ್ಥಾಪಿಸಿ ವೇದಗಳು ಸಮಾಜದಿಂದ ಕಣ್ಮರೆಯಾಗದಂತೆ ನೋಡಿಕೊಂಡರು. ಶಂಕರರು 32ವರ್ಷ ಬದುಕಿದರೂ ಸಾವಿರ ವರ್ಷ ಬದುಕಿದರೆನೋ ಎನ್ನುವಷ್ಟು ರೀತಿಯಲ್ಲಿ ಕಾರ್ಯ ಮಾಡಿದರು. ಪೀಠಗಳ ಸ್ಥಾಪನೆಯಿಂದ ಮನುಕುಲಕ್ಕೆ ಬೇಕಾದ ವೇದಗಳು ನಿರಂತರವಾಗಿ ಮುನ್ನಡೆದುಕೊಂಡು ಬಂದವು. ಅವರು ಸ್ಥಾಪಿಸಿದ ವೇದಾಂತ ತತ್ವ 1300ವರ್ಷಗಳ ನಂತರವೂ ದೇಶವಷ್ಟೇ ಅಲ್ಲದೇ ಜಗತ್ತಿನಾದ್ಯಂತ ಐಕ್ಯತೆಗೆ ಪ್ರಸ್ತುತವಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಜಿ.ಎನ್.ಭಟ್ಟ ಹರಿಗಾರ ಪ್ರಸ್ತಾವಿಕ ಮಾತನಾಡಿದರು. ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಇದ್ದರು. ಶ್ರೀ ಸ್ವರ್ಣವಲ್ಲೀ ಸಂಸ್ಥಾನ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಯೋಗ ಮಂದಿರ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ
Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ
ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!
Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.