ಕುಮಟಾ: ಹೊಸಾಡ ಗೋ ಬ್ಯಾಂಕ್ ನಲ್ಲಿ ಆಲೆಮನೆ ಹಬ್ಬಕ್ಕೆ ಚಾಲನೆ
Team Udayavani, Mar 10, 2022, 3:16 PM IST
ಕುಮಟಾ: ತಾಲೂಕಿನ ಹೊಸಾಡಿನಲ್ಲಿರುವ ವಿಶ್ವದ ಮೊಟ್ಟ ಮೊದಲ ಗೋಬ್ಯಾಂಕ್ ನಲ್ಲಿ ” ಆಲೆಮನೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹಿರಿಯ ಶಿಕ್ಷಣ ತಜ್ಞ ಅರುಣ ಉಭಯಕರ್ ಕಬ್ಬಿನ ಗಾಣಕ್ಕೆ ಕಬ್ಬು ಕೊಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗೋ ಸಂರಕ್ಷಣೆಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಗೋವಿದ್ದರೆ ನಾವು ಎಂಬಂತೆ ಅವುಗಳಿಗಾಗಿ ನಮ್ಮ ಕೈಲಾದ ಸೇವೆಯನ್ನು ನೀಡಬೇಕು. ಗೋವುಗಳಿಂದ ಹಲವಾರು ಪ್ರಯೋಜನ ಪಡೆದುಕೊಳ್ಳುವ ನಾವು ಅವುಗಳ ಉಳಿವಿಗೆ ಕೈಜೋಡಿಸಬೇಕು ಎಂದ ಅವರು ಶ್ರೀಮಠದ ಕಾರ್ಯಗಳನ್ನು ಕೊಂಡಾಡಿದರು.
ಗೋ ಬ್ಯಾಂಕ್ ನ ಅಧ್ಯಕ್ಷರಾದ ಮುರಳೀಧರ ಪ್ರಭು ಮಾತನಾಡಿ ಆಲೆಮನೆ ಹಬ್ಬ ಮಾರ್ಚ್ 13 ರ ವರೆಗೆ ನಡೆಯಲಿದ್ದು ಸಂಜೆ 4 ರಿಂದ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ರವಿವಾರ ಪೂರ್ಣ ದಿನ ಅವಕಾಶವಿದೆ. ದಿನಾಂಕ 12 ರಂದು ವಿಶೇಷ ಗೋ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯದರ್ಶಿಗಳಾದ ಸುಬ್ರಾಯ ಭಟ್ಟ, ಕುಮಟಾ ಮಂಡಲ ಅಧ್ಯಕ್ಷರಾದ ಜಿ.ಎಸ್.ಹೆಗಡೆ. ಗೋ ಸಂಧ್ಯಾ ಸಂಚಾಲಕರಾದ ಗೋಪಾಲಕೃಷ್ಣ ಉಗ್ರು, ವಿದ್ಯಾನಿಕೇತನದ ಕಾರ್ಯಾಧ್ಯಕ್ಷರಾದ ಆರ್ .ಜಿ.ಭಟ್ಟ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅರುಣ ಹೆಗಡೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಗೋಪಾಲಕೃಷ್ಣ ಭಜನಾ ಮಂಡಳಿ ಹೆಬ್ಳೆಕೇರಿ ಕಡತೋಕಾ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವಹೇಳನಕಾರಿ ಹೇಳಿಕೆ – ಉ.ಪ್ರ. ಸ್ವಾಮೀಜಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಟ್ಕಳ ಬಂದ್
Bhatkal; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದು ಕಾಂಗ್ರೆಸ್ ಸರಕಾರದಿಂದ ಅಪರಾಧ: ಕಾಗೇರಿ
Bhatkala: ತೆರೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ
Bhatkal: ತಿರುಪತಿಗೆ ನೇರ ರೈಲು ಸಂಪರ್ಕದಿಂದ ಜನರಿಗೆ ಅನುಕೂಲ: ಎಸ್.ಎಸ್. ಕಾಮತ್
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ಸಿಎಂ ವಿರುದ್ದ ರೇಣುಕಾ ಟೀಕೆ
Shirva: ಕೊರಗರೂ ಮನುಷ್ಯರೆಂಬ ಭಾವನೆ ಸಾರ್ವತ್ರಿಕವಾಗಲಿ
Padubidri: ಮುದರಂಗಡಿಯಲ್ಲಿ ಕಾಡುಕೋಣ ಹಾವಳಿ; ವಾಹನ ಸವಾರರಿಗೆ ಅಪಾಯ
Swarajya 1942 Movie: ಸ್ವರಾಜ್ಯದಲ್ಲಿ ಕ್ರಾಂತಿಯ ಕಹಳೆ
By Election: ಚನ್ನಪಟ್ಟಣ,ಸಂಡೂರು, ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.