Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ


Team Udayavani, Jul 18, 2024, 1:14 AM IST

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

ಉದಯವಾಣಿ ಸಮಾಚಾರ
ಅಂಕೋಲಾ: ಉತ್ತರಕನ್ನಡದ  ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಇನ್ನೊಂದು ದಡದಲ್ಲೂ ಭಾರೀ ಅನಾಹುತವೇ ಸಂಭವಿಸಿದೆ. ಮನೆಗಳು ಕುರುಹಿಲ್ಲದಂತೆ ನೆಲಸಮವಾಗಿವೆ. ಜೀವನೋಪಾಯಕ್ಕೆ ಸಾಥಿಯಾಗಿದ್ದ ದೋಣಿಗಳೂ ನಾಶವಾಗಿವೆ. ಜನರ ಬದುಕಿನ ಬುಡವೇ ಅಲುಗಾಡಿದೆ.

ನಿಜ. ಈ ಗುಡ್ಡ ಕುಸಿತದಿಂದ ಶಿರೂರು ಉಳುವರೆ ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ. ಎಲ್ಲಿ ನೋಡಿದರೂ ಗುಡ್ಡದ ಮಣ್ಣಿನಡಿ ಮತ್ತು ಗಂಗಾವಳಿ ನೀರಿಗೆ ಸಿಲುಕಿ ಧ್ವಂಸಗೊಂಡಿರುವ ವಸ್ತುಗಳೇ ಕಾಣಿಸುತ್ತಿವೆ. ಭಾರೀ ಪ್ರಮಾಣದ ನೀರು ನುಗ್ಗಿದ್ದರಿಂದ ಸುಮಾರು ಏಳು ಮನೆಗಳು ನೆಲಕಚ್ಚಿವೆ. 27ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ.

ಉಳುವರೆ ಗ್ರಾಮದ ಮಡುಕುಣಿ ಗೌಡರಕೊಪ್ಪ ಮತ್ತು ಅಂಬಿಗರ ಕೊಪ್ಪವಂತೂ ನೀರಿಗೆ ಆಪೋಶನವಾಗಿದೆ. ಇಲ್ಲಿಯ ಕೃಷಿ ಜಮೀನು, ನೂರಾರು ತೆಂಗಿನ ಮರ ಸೇರಿದಂತೆ ಗುಡ್ಡದಿಂದ ಜಾರಿ ಬಂದಿರುವ ಮರಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಜನವಸತಿ ಪ್ರದೇಶ ಮತ್ತು ಮನೆಗಳಿಗೆ ಅಪ್ಪಳಿಸಿವೆ. ಇದರಿಂದ ಮನೆಗಳಿಗೂ ಹಾನಿ ಉಂಟಾಗಿದೆ.

ಎಲ್ಲ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅನೇಕ ಮನೆಗಳೂ ಬೀಳುವ ಸ್ಥಿತಿಯಲ್ಲಿವೆ. ಅಂಬಿಗರ ಕೊಪ್ಪದಲ್ಲಂತೂ ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಸುಮಾರು 50ಕ್ಕೂ ಹೆಚ್ಚು ದೋಣಿಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಛಿದ್ರ-ಛಿದ್ರವಾಗಿವೆ.

ತಾಯಿಗಾಗಿ ಹುಡುಕಾಟ: ಇನ್ನು ಗೌಡರ ಕೊಪ್ಪದಲ್ಲಿ ಏಳು ಮನೆಗಳು ಸಂಪೂರ್ಣ ನೆಲಸಮವಾಗಿವೆ. ಎಲ್ಲೆಡೆ ಗುಡ್ಡದ ಮಣ್ಣು ತುಂಬಿಹೋಗಿದೆ. ಇಲ್ಲಿನ ಸಣ್ಣು ಗೌಡ (55) ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗುವ ವೇಳೆ ಅವರು ಉಟ್ಟಿದ್ದ ಸೀರೆ ಒಂದು ಬದಿಯಲ್ಲಿ ಬಿದ್ದಿದ್ದು ಅವರ ಮಗ ಮಂಜುನಾಥ ಹನುಮಂತ ಗೌಡ ಅದನ್ನು ಹಿಡಿದುಕೊಂಡು ತಾಯಿಗಾಗಿ ಹುಡುಕಾಟ ನಡೆಸುತ್ತಿರುವುದು ಮನ ಕಲಕಿಸುತ್ತಿದೆ.

ಆಭರಣ ಮಣ್ಣುಪಾಲು: ಗೌಡರ ಕೊಪ್ಪದ ನಿವಾಸಿ ನೀಲಾ ಮುದ್ದು ಗೌಡ ಅವರು ಪುತ್ರಿ ದಿವ್ಯಾಳ ಮದುವೆಗೆಂದು ನಾಲ್ಕು ಲಕ್ಷ ರೂ. ಮೌಲ್ಯದ ಆಭರಣ ಮಾಡಿಸಿಟ್ಟಿದ್ದರು. ಜತೆಗೆ ಒಂದಷ್ಟು ಹಣವನ್ನೂ ಕೂಡಿಟ್ಟಿದ್ದರು. ಎಲ್ಲವೂ ಈಗ ಗುಡ್ಡದ ಮಣ್ಣು ಪಾಲಾಗಿದೆ. ಈ ಮನೆಯವರು ಕೂಡ ಆಭರಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬದುಕು ಕಸಿದ ದುರಂತ: ಗುಡ್ಡ ಕುಸಿತ ದುರಂತ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದವರ ಬದುಕನ್ನೇ ಕಿತ್ತುಕೊಂಡಿದೆ. ಅಂಬಿಗರು ನಿತ್ಯ ದೋಣಿ ಮೂಲಕ ಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದರು. ಅಂತಹ ದೋಣಿಗಳು ಇಲ್ಲದಂತಾಗಿ ಭವಿಷ್ಯದ ಬದುಕಿಗೆ ಕತ್ತಲೆ ಕವಿದಿದೆ. ಅಲ್ಲದೇ ಮನೆಗಳಿಗೂ ಹಾನಿಯಾಗಿ ಜೀವನದ ಮೇಲೆ ಬರೆ ಎಳೆದಂತಾಗಿದೆ. ಗೌಡರಕೊಪ್ಪದವರು ನಿತ್ಯ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿ ಪುಟ್ಟ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಗುಡ್ಡ ಕುಸಿತ ಘಟನೆ ಇವರ ಜಂಘಾಬಲವನ್ನೇ ಉಡುಗಿಸಿದೆ. ಎಲ್ಲರೂ ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ಗುಡ್ಡ ಕುಸಿದು ದಿನವೇ ಕಳೆದರೂ ಉಳುವರೆ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಗಳು ಆಗಮಿಸಿಲ್ಲ. ಜನರಿಗೆ ಕಾಳಜಿ ಕೇಂದ್ರ ಮಾಡಲು ಯಾರೂ ಇಲ್ಲ. ಸ್ಥಳೀಯರೇ ಮತ್ತು ಪಂಚಾಯತಿ ಸದಸ್ಯರೇ ಸೇರಿ ಕಾಳಜಿ ಕೇಂದ್ರ ಮಾಡಿ ದಿನಸಿ ಸಾಮಾನು ತಂದು ಜನರನ್ನು ಸ್ಥಳಾಂತರಿಸಿದ್ದೇವೆ. ನಮಗಿಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಜನಪ್ರತಿನಿಧಿಗಳು ಮುಂದೆ ಬರಬೇಕು.
-ಸಂತೋಷ ಅಂಬಿಗ
ಸ್ಥಳೀಯ ನಿವಾಸಿ

-ಅರುಣ ಶೆಟ್ಟಿ

ಟಾಪ್ ನ್ಯೂಸ್

KN-Rajanna

Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್‌.ರಾಜಣ್ಣ

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

Udupi: ಸಂತೆಕಟ್ಟೆ- ಉಪ್ಪೂರು ಸೇತುವೆಯಿಂದ ನದಿಗೆ ಹಾರಿದ ಯುವಕ?

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-sirsi

Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

Eshwarappa

Sirsi: ಪಕ್ಷದಲ್ಲಿ ಶುದ್ಧೀಕರಣ ಚರ್ಚೆಯ ಬಳಿಕ ಬಿಜೆಪಿಗೆ ಹೋಗುವೆ: ಕೆ.ಎಸ್.ಈಶ್ವರಪ್ಪ 

ಭೂಗತ ಜಲವಿದ್ಯುತ್‌ ಯೋಜನೆಗೆ ವಿರೋಧ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ

ಭೂಗತ ಜಲವಿದ್ಯುತ್‌ ಯೋಜನೆಗೆ ವಿರೋಧ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಸಾಗಿಸುವ ಯೋಜನೆ

Yellapur: ಕುತೂಹಲಕ್ಕೆ ಎಡೆಮಾಡಿದ ಸಿಎಂ ಸಿದ್ದರಾಮಯ್ಯ, ಶಾಸಕ ಶಿವರಾಮ ಹೆಬ್ವಾರ್ ಭೇಟಿ

Yellapur: ಕುತೂಹಲಕ್ಕೆ ಎಡೆಮಾಡಿದ ಸಿಎಂ ಸಿದ್ದರಾಮಯ್ಯ, ಶಾಸಕ ಶಿವರಾಮ ಹೆಬ್ಬಾರ್ ಭೇಟಿ

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

Davis Cup: ಬಾಲಾಜಿಗೆ ಸೋಲು

Davis Cup: ಬಾಲಾಜಿಗೆ ಸೋಲು

Hockey India: ವನಿತಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರು

Hockey India: ವನಿತಾ ಹಾಕಿ ಶಿಬಿರಕ್ಕೆ 33 ಆಟಗಾರ್ತಿಯರು

Diamond League: ಸ್ಟೀಪಲ್‌ ಚೇಸರ್‌ ಸಾಬ್ಲೆಗೆ 9ನೇ ಸ್ಥಾನ

Diamond League: ಸ್ಟೀಪಲ್‌ ಚೇಸರ್‌ ಸಾಬ್ಲೆಗೆ 9ನೇ ಸ್ಥಾನ

India vs Bangladesh: ನೆಟ್ಸ್‌ನಲ್ಲಿ ಭಾರತಕ್ಕೆ ಗುರ್ನೂರ್‌ ನೆರವು

India vs Bangladesh: ನೆಟ್ಸ್‌ನಲ್ಲಿ ಭಾರತಕ್ಕೆ ಗುರ್ನೂರ್‌ ನೆರವು

21

Subramanya: ನಿಯಂತ್ರಣ ತಪ್ಪಿದ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.