ಭಟ್ಕಳ:ಗುಡ್ಡದಿಂದ ಜಾರಿದ ಬೃಹದಾಕಾರದ ಬಂಡೆ; ತಪ್ಪಿದ ದೊಡ್ಡ ಅಪಾಯ

ಸಿಕ್ಕ ಸಿಕ್ಕ ಗಿಡ ಮರಗಳನ್ನು ನೆಲಕ್ಕೆ ಉರುಳಿಸುತ್ತಾ ಸಾಗಿದ ಬಂಡೆ

Team Udayavani, Jul 14, 2023, 10:01 PM IST

1-sadasa

ಭಟ್ಕಳ: ತಾಲೂಕಿನ ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಳುರುಮನೆ ರಸ್ತೆಯ ಪಕ್ಕದಲ್ಲಿನ ಗುಡ್ಡದಿಂದ ಬೃಹತ್ ಗಾತ್ರದ ಬಂಡೆಯೊಂದು ಜಾರಿ ಬಿದ್ದು ಸುಮಾರು 500 ಮೀಟರ್ ತನಕ ಸಿಕ್ಕ ಸಿಕ್ಕ ಗಿಡ ಮರಗಳನ್ನು ನೆಲಕ್ಕೆ ಉರುಳಿಸುತ್ತಾ ಉರುಳಿಕೊಂಡು ಬಂದಿದ್ದು ಬೀಳೂರುಮನೆ ರಸ್ತೆಗೆ ಸ್ವಲ್ಪ ದೂರದಲ್ಲಿ ಸಮತಟ್ಟಾದ ಸ್ಥಳ ಇದ್ದಲ್ಲಿ ನಿಂತುಕೊಂಡಿದ್ದು ಬಹುದೊಡ್ಡ ಅಪಾಯ ತಪ್ಪಿದಂತಾಗಿದೆ.

ಗುಡ್ಡದಿಂದ ಉರುಳಿ ಬಿದ್ದ ಕಲ್ಲು ಬಂಡೆಯು ಬೃಹತ್ ಪ್ರಮಾಣದ್ದಾಗಿದ್ದು ಗುಡ್ಡದ ತುದಿಯಿಂದ ಉರುಳಿಕೊಂಡೇ ಬಂದಿದ್ದು ದೊಡ್ಡ ದೊಡ್ಡ ಮರಗಳು ಸಿಕ್ಕರೂ ಕೂಡಾ ನಿಲ್ಲದೇ ಅವುಗಳನ್ನೂ ಉರುಳಿಸಿಕೊಂಡು ಬಂದಿದ್ದು ಸ್ವಲ್ಪ ಮುಂದೆ ಬಂದು ರಸ್ತೆಯನ್ನು ದಾಟಿ ಉರುಳಿದ್ದರೆ ಕೆಳಗಡೆಯಲ್ಲಿರುವ ಮನೆಯವರಿಗೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಬಂಡೆಯು ಉರುಳಿ ಬರುತ್ತಿರುವ ಶಬ್ದ ಸುಮಾರು ಅರ್ಧ ಕಿ.ಮಿ. ವ್ಯಾಪ್ತಿಯಲ್ಲಿ ಕೇಳಿದ್ದು ಅಕ್ಕ ಪಕ್ಕದ ಗದ್ದೆಯಲ್ಲಿ, ತೋಟದಲ್ಲಿ ಕೆಲಸ ಮಾಡುತ್ತಿರುವವರು, ಮನೆಯಲ್ಲಿರುವವರು ಎಲ್ಲರೂ ಬಂದು ನೋಡುತ್ತಿದ್ದಂತೆಯೇ ಬಂಡೆ ಉರುಳಿ ಬಂದು ಸಮತಟ್ಟಾದ ಸ್ಥಳದಲ್ಲಿ ನಿಂತು ಜನರ ಆತಂಕವನ್ನು ದೂರ ಮಾಡಿತ್ತು. ಸ್ವಲ್ಪ ಮುಂದೆ ಉರುಳಿದ್ದರೂ ಕೂಡಾ ರಸ್ತೆಯಲ್ಲಿ ಓಡಾಡುವ ವಾಹನ, ನಾಗರಿಕರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಅಲ್ಲದೇ ಅಲ್ಲೇ ಇರುವ ಮನೆಗಳವರಿಗೆ ಕೂಡಾ ತೊಂದರೆಯಾಗುವ ಸಾಧ್ಯತೆ ಇತ್ತು.

ಒಟ್ಟಾರೆ ಕೆಲ ಕಾಲ ಜನರಿಗೆ ಏನಾಗುತ್ತಿದೆ ಎನ್ನುವುದೇ ತಿಳಿಯದಾಗಿದ್ದು ಗೊಂದಮಯ ವಾತಾವರಣ ಸೃಷ್ಟಿಯಾಗಿತ್ತು ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನ ಗೋಪಾಲ್ ಅವರು ಸಿಬಂದಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ. ಬಂಡೆಗಲ್ಲು ಸಮತಟ್ಟಾದ ಸ್ಥಳದಲ್ಲಿ ಭದ್ರವಾಗಿ ನಿಂತಿದ್ದರಿಂದ ಮುಂದೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಸಹ ಊರವರಿಗೆ ಮನದಟ್ಟು ಮಾಡಲಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

5-byndoor

Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

3-holiday

Heavy Rain: ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

2-Vijayapura

Vijayapura: ಕೃಷ್ಣಾ ನದಿ ತೆಪ್ಪ ದುರಂತ: ಮತ್ತೊಬ್ಬನ ಶವ ಪತ್ತೆ

Dinesh-gundurao

Private Hospital: ಡೆಂಗ್ಯೂ ಪರೀಕ್ಷೆಗೆ ಏಕರೂಪ ದರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumta ದೇವಸ್ಥಾನದ ಚಿನ್ನಾಭರಣ ಕಳ್ಳತನ ಪ್ರಕರಣ: ಆರೋಪಿಗಳ ಬಂಧನKumta ದೇವಸ್ಥಾನದ ಚಿನ್ನಾಭರಣ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Kumta ದೇವಸ್ಥಾನದ ಚಿನ್ನಾಭರಣ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

Yellapur: ಪ್ರವಾಸಿಗರ ಗಮನಕ್ಕೆ; ಸಾತೋಡ್ಡಿ ಜಲಪಾತಕ್ಕೆ ನಿಷೇಧ

2-dandeli

Dandeli: ಅರಣ್ಯ ಪ್ರದೇಶದಲ್ಲಿ ಆನೆ ದಾಳಿ : ಓರ್ವನಿಗೆ ಗಾಯ, ಚಿಕಿತ್ಸೆಗೆ ದಾಖಲು

1-honnavara

Honnavara: ಪಟ್ಟಣ ಪಂಚಾಯತ್‌ ನಲ್ಲಿ ಲೋಕಾಯುಕ್ತ ದಾಳಿ

1-asdsada

Yellapur; ಪಣಸಗುಳಿ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

5-byndoor

Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

4-yadagiri

Narayanapur: ವಿದ್ಯುತ್‌ ತಂತಿ ತಗುಲಿ ಮಹಿಳೆ ಸಾವು

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.