ಪ್ರವಾಸಿಗರ ಚಿತ್ತ ಸೆಳೆವ ಚಿಟ್ಟೆ ಪಾರ್ಕ್‌


Team Udayavani, Oct 31, 2020, 1:51 PM IST

ಪ್ರವಾಸಿಗರ ಚಿತ್ತ ಸೆಳೆವ ಚಿಟ್ಟೆ ಪಾರ್ಕ್‌

ಜೋಯಿಡಾ: ತಾಲೂಕು ಕೇಂದ್ರ ಜೋಯಿಡಾ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಚಿಟ್ಟೆ ಪಾರ್ಕ್‌ ನಿರ್ಮಾಣಗೊಂಡಿದ್ದು, ಹಲವು ಬಗೆಯ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಪ್ರವಾಸಿಗರ ಮನಸೆಳೆಯುತ್ತಿದೆ.

ಜೋಯಿಡಾ ವಲಯ ಅರಣ್ಯ ಇಲಾಖೆ ವತಿಯಿಂದ ಕಳೆದ ಒಂದು ವರ್ಷದ ಹಿಂದೆ ಈ ಚಿಟ್ಟೆಪಾರ್ಕ್‌ ನಿರ್ಮಿಸಲಾಗಿದ್ದು, ಪತಂಗ(ಚಿಟ್ಟೆ) ಗಳಿಗಾಗಿಯೇ ವಿವಿಧ ಜಾತಿಯ ಹೂವಿನಗಿಡ ನೆಡಲಾಗಿದೆ. ಇಲ್ಲಿ ಈಗಾಗಲೆ 102 ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದ್ದು, ಇವುಗಳ ಜೀವನ ಕ್ರಮ ಆಧರಿಸಿ ಸಂತಾನೋತ್ಪತ್ತಿ, ಮರಿಗಳ ಬೆಳೆವಣಿಗೆಗೆ ಸಹಕಾರಿ ಆಗುವಂತೆ ಹೋಸ್ಟ್‌ ಪ್ಲಾಂಟ್‌ಗಳನ್ನು ಬೆಳೆಯಲಾಗಿದೆ.

ವಿವಿಧ ಜಾತಿಯ ಚಿಟ್ಟೆಗಳು: ಜೋಯಿಡಾ ಚಿಟ್ಟೆ ಪಾರ್ಕ್ ನಲ್ಲಿ ಎಂಗಲ್ಡ್‌ ಪಿರೋಟ್‌ ಗ್ರೇ ಕೌಂಟ್‌, ಪಿಕೋಕ್‌ ಫೆನ್ಸಿ, ಗ್ರೇ ಫೆನ್ಸಿ, ಪೇರಿಸ್‌ ಪಿಕೋಕ್‌, ಕಮಾಂಡರ್‌, ಡಾರ್ಕ್‌ಬ್ಲೂ ಟೈಗರ್‌, ಲೈಮ ಬಟರ್‌ ಫ್ಲಾಯ್‌, ಪ್ಲೇನ್‌ ಟೈಗರ್‌ ಮುಂತಾದ ಹಲವಾರಿ ಜಾತಿಯ ಚಿಟ್ಟೆಗಳು ಜೋಯಿಡಾ ಚಿಟ್ಟೆ ಪಾರ್ಕ್‌ನಲಿ ಕಂಡುಬಂದಿದೆ.

ಚಿಟ್ಟೆಗಳಿಗಾಗಿ ಹೋಸ್ಟ್‌ ಪ್ಲಾಂಟ್‌: ಚಿಟ್ಟೆಗಳ ಜೀವನ ಚಕ್ರವನ್ನಾಧರಿಸಿ ಅವುಗಳ ಸಂತಾನೋತ್ಪತ್ತಿ ಹಾಗೂ ಮರಿಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಈಶ್ವರಿ ಬಳ್ಳಿ, ಮಿಲ್ಕ್ ವೀಡ್‌, ಲಿಂಬೆ, ಜುಮ್ಮನಕಾಯಿ, ರಾಮಪಳ, ಪಾಲ್ಸ್‌ ಅಶೋಕಾ, ದಾಲಿcನಿ, ಗುಳಮಾವು, ಕಲಮ್ಮ, ಕದಂಬ(ಆಪತ್ತಿ) ಅತ್ತಿ, ಕಣಗಿಲೆ, ಮಾವು, ಔಡಲ ಗಿಡ, ಹೊಂಗೆ, ಕವಲು(ಕುಬೆ) ಮುಂತಾದ 80 ಜಾತಿಯ ಹೋಸ್ಟ್‌ ಪ್ಲಾಂಟ್‌ಗಳನ್ನು ನೆಡಲಾಗಿದೆ.

ನೆಕ್ಟರ್‌ ಪ್ಲಾಟ್‌: ಚಿಟ್ಟೆಗಳಿಗೆ ಆಹಾರಕ್ಕಾಗಿ ಅವುಗಳ ಅಚ್ಚುಮೆಚ್ಚಿನ ನೆಕ್ಟರ್‌ ಪ್ಲಾಂಟ್‌ಗಳಾದ ತೇರಿನ ಹೂ, ಇಗ್ಜೋರ್‌, ಪೆಂಟಾಸ್‌, ಕರಿ ಉತರಾಣಿ, ಮಿಲ್ಕ್ ಪೀಡ್‌, ಗೊಂಡೆ ಹೂ ಮುಂತಾದ 30 ಕ್ಕೂ ಹೆಚ್ಚಿನ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ವಲಯ ಅರಣ್ಯಾಧಿಕಾರಿ ಸಿ.ಆರ್‌. ನಾಯ್ಕ ಹಾಗೂ ಉಪವಲಯ ಅರಣ್ಯಾಧಿಕಾರಿ ಸಂತೋಷ ಗಾವಸ ಅವರ ಆಸಕ್ತಿ ಹಾಗೂ ಕಾಳಜಿಯಲ್ಲಿ ಚಿಟ್ಟೆಪಾರ್ಕ್‌ ತಾಲೂಕು ಕೇಂದ್ರದಲ್ಲಿ ಪ್ರವಾಸಿಗರ ವಿಶೇಷ ಆಕರ್ಷಣೀಯ ತಾಣವಾಗಿ ಬೆಳೆಯುತ್ತಿದೆ. ಚಿಟ್ಟೆ ಪಾರ್ಕ್‌ ಸುಂದರ ಹೂಗಿಡಗಳ ನಡುವೆ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಸೊಗಸಾಗಿ ಕಂಗೊಳಿಸುತ್ತಿದ್ದು, ತಿಮ್ಮಕ್ಕನ ಉದ್ಯಾನವನಕ್ಕೆ ವಿಶೇಷ ಮೆರಗು ನೀಡುತ್ತಿದೆ.

ಚಿಟ್ಟೆ ಪಾರ್ಕ್‌ನಲ್ಲಿ ಇನ್ನು ಅನೇಕ ಸಸಿಗಳನ್ನು ನೆಡುವ ಮೂಲಕ ಹೆಚ್ಚಿನ ಚಿಟ್ಟೆ ಆಕರ್ಷಣೆಗೆ ಪ್ರಯತ್ನಿಸುವ ಜೊತೆಗೆ ಹೋಮ್‌ ಸ್ಟೇಗಳಿಗೆ ಬರುವ ಪ್ರವಾಸಿಗರಿಗೆ ಚಿಟ್ಟೆ ಪಾರ್ಕ್‌ ಪರಿಚಯಿಸಲು ಪ್ರಯತ್ನಿಸಲಾಗುವುದು. ಸಿ.ಆರ್‌. ನಾಯ್ಕ. ವಲಯ ಅರಣ್ಯಾಧಿಕಾರಿಗಳು

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.