Siddapura: ನಮಗೆ ಕಾಲು ಸಂಕ ಬೇಕು: ಮಕ್ಕಳು ಹಳ್ಳ ದಾಟುವುದೇ ಡೇಂಜರ್‌!

ಆಜ್ರಿ ಗ್ರಾಮದ ಹೆಬ್ಟಾರ್‌ತಡಿಯಲ್ಲಿ 30 ಅಡಿ ಉದ್ದದ ಅಪಾಯಕಾರಿ ಹಳ್ಳ ದಾಟುವ ಸರ್ಕಸ್‌

Team Udayavani, Jul 30, 2024, 3:05 PM IST

Screenshot (27)

ಸಿದ್ದಾಪುರ: ಬೈಂದೂರು ತಾಲೂಕಿನ  ಆಜ್ರಿ ಗ್ರಾಮದ ಹೆಬ್ಟಾರುತಡಿ ಪ್ರದೇಶ ಮಳೆಗಾಲ ಬಂತೆಂದರೆ ಥರ ಗುಟ್ಟುತ್ತದೆ. ಇದಕ್ಕೆ ಕಾರಣ, ಅವರ ದೈನಂದಿನ ಬದುಕು ಮಳೆಗಾಲದಲ್ಲಿ ಸಂಪುರ್ಣವಾಗಿ
ಅಸ್ತವ್ಯಸ್ತವಾಗುವುದು. ಸಾಮಾನ್ಯ ದಿನಗಳಲ್ಲಿ ಇಲ್ಲಿನ ಮಕ್ಕಳು, ಇತರರು ಇಲ್ಲಿನ ಹಳ್ಳಗಳನ್ನು ಸಹಜವಾಗಿ ದಾಟಿ ತಮ್ಮ ತಮ್ಮ ದಾರಿ ಕಂಡುಕೊಳ್ಳುತ್ತಾರೆ. ಆದರೆ, ಯಾವಾಗ ಮಳೆ ಬಿತ್ತೋ ಹಳ್ಳಗಳು ತುಂಬಿ ಹರಿಯುತ್ತವೆ. ಆಗ ಬದುಕೇ ಏರುಪೇರು.

ಹೆಬ್ಟಾರುತಡಿ ಪ್ರದೇಶದ ಜನರಿಗೆ ವ್ಯವಹಾರದ ಹತ್ತಿರದ ಪಟ್ಟಣ ಸಿದ್ಧಾಪುರ. ಆದರೆ, ಮಳೆಗಾಲದಲ್ಲಿ ಹೆಬ್ಟಾರ್‌ತಡಿಯ ಹಳ್ಳ ಉಕ್ಕಿ ಹರಿಯುವುದರಿಂದ ಅವರಿಗೆ ಸಮಸ್ಯೆಯಾಗುತ್ತದೆ. ಇಲ್ಲಿನ ತಂದೆ-ತಾಯಂದಿರು
ಮಕ್ಕಳನ್ನು ಹೊತ್ತುಕೊಂಡೇ ಹಳ್ಳ ದಾಟಿಸಬೇಕಾದ ಸ್ಥಿತಿ ಇದೆ. ಹಾಗಂತ ಅವರಿಗೂ ಇದು ಸುಲಭದ ಕೆಲಸವೇನಲ್ಲ. ಸೆಳೆತ ತುಂಬಿದ ಹಳ್ಳವನ್ನು ಕಷ್ಟಪಟ್ಟು ದಾಟಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಸಂಜೆ ಮತ್ತೆ ಕಾದು ನಿಂತು ಮಕ್ಕಳನ್ನು ಹಳ್ಳ ದಾಟಿಸಬೇಕು. ಇದು ಮಳೆಗಾಲದಲ್ಲಿ ಅವರ ನಿತ್ಯ ಬದುಕಾಗಿದೆ. ಅವರ  ಈ ಪರಿಸ್ಥಿತಿಗೆ ಮುಖ್ಯ ಕಾರಣ, ಹೆಬ್ಟಾರ್‌ ತಡಿಯ ಈ ಸುಮಾರು 30 ಅಡಿ ಉದ್ದದ ಹಳ್ಳಕ್ಕೆ ಕಾಲು ಸಂಕ ಸೇರಿ ದಂತೆ ಯಾವುದೇ ದಾಟುವ ವ್ಯವಸ್ಥೆ ಇಲ್ಲದಿರುವುದು. ಮಕ್ಕಳನ್ನು ಹಳ್ಳ ದಾಟಿಸುವಾಗ ಪ್ರತಿ ದಿನವೂ  ಭಯಾನಕ ಸನ್ನಿವೇಶಗಳನ್ನು ಎದುರಸುತ್ತಾರೆ. ತಾವು ಸಂಪೂರ್ಣ ಒದ್ದೆಯಾಗುತ್ತಾರೆ. ಪ್ರಾಣವನ್ನು ಲೆಕ್ಕಿಸದೇ ಸಾಗುತ್ತಾರೆ.

ಇಲ್ಲಿ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಸ್ಥಿತಿ ಇಲ್ಲಿದೆ. ಅಪಾಯ ಸಂಭವಿಸಿ ಪ್ರಾಣ ಕಳೆದುಕೊಂಡ ಮೇಲೆ ಲಕ್ಷಾಂತರ ರೂಪಾಯಿ ಪರಿಹಾರ ನೀಡಿದರೆ ಏನು ಪ್ರಯೋಜನ? ಈಗಲೇ ಆ ಹಣದಲ್ಲಿ ಕಾಲು ಸಂಕ ನಿರ್ಮಿಸಿ ಕೊಡಿ, ಆ ಮೂಲಕ ಅನಾಹುತವನ್ನು ತಪ್ಪಿಸಬಹುದು ಎನ್ನುವುದು ಇಲ್ಲಿನ ಜನರ ನೋವಿನ ಮಾತು.

ಉಕ್ಕಿಹರಿಯುವ ಹಳ್ಳಗಳು
ಹೆಬ್ಟಾರ್‌ ತಡಿ ಪ್ರದೇಶದಲ್ಲಿ 25 ಮನೆಗಳಿದ್ದು, ಅವರಿಗೆ ಸಿದ್ದಾಪುರವೇ ಮುಖ್ಯ ಪೇಟೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮಳೆಗಾಲದಲ್ಲಿ ಅಂದಾಜು 30 ಅಡಿ ಉದ್ದದ ಹಳ್ಳ ದಾಟಿ ತೆರಳಬೇಕು. ಜೋರಾದ ಮಳೆ ಬಂದರೆ ಶಾಲಾ ಮಕ್ಕಳು ಶಾಲೆಗೆ ಗೈರಾಗಬೇಕಾಗುತ್ತದೆ ಈ ಹಳ್ಳ ದಾಟುವ ಬದಲು ದೂರದ ಬೇರೆ ದಾರಿಯಲ್ಲಿ ಸಿದ್ಧಾಪುರಕ್ಕೆ ಹೋಗಬಹುದು. ಸುತ್ತುವರಿದು ಜನ್ಸಾಲೆ, ಅಗಳಿ ಮೂಲಕ ಮತ್ತು ಆಜ್ರಿ ಮೂರುಕೈಗೆ ಬಂದು ಸಿದ್ದಾಪುರ ತಲುಪಬಹುದು. ಆದರೆ ಅದಕ್ಕೆ ಬೇಗನೆ ಮನೆಯಿಂದ  ಹೊರಡಬೇಕು. ಆದರೆ, ಹೆಚ್ಚಿನವರು ಅಪಾಯ ಕಾರಿಯಾದರೂ ಸರಿ, ಹಳ್ಳವನ್ನೇ ದಾಟುತ್ತಾರೆ. ಪೋಷಕರು ಮಳೆ ಪ್ರಮಾಣ ಕಡಿಮೆಯಾದ ಮೇಲೆ ಮಕ್ಕಳನ್ನು ಹಳ್ಳ ದಾಟಿಸಿ ಶಾಲೆಗಳಿಗೆ ಬಿಡುತ್ತಾರೆ. ಸಂಜೆ ಮತ್ತೆ ಹಳ್ಳ ದಾಟಿ, ಮಕ್ಕಳನ್ನು ಕರೆತರುತ್ತಾರೆ. ಅನಾರೋಗ್ಯ ಪೀಡಿತರ ಕಥೆಯಂತೂ ಕೇಳಲೇಬೇಡಿ.

ಮಳೆ ಜೋರಾದರೆ ಶಾಲೆ, ಕೆಲಸ ಇಲ್ಲ
ಗ್ರಾಮೀಣ ಭಾಗಗಳಲ್ಲಿ ಕೆಲ ಕಡೆ ಮರದ ಕಾಲು ಸಂಕವಿದ್ದ ಪ್ರದೇಶಗಳಿಗೆ ಸೇತುವೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ದೊರಕಿವೆ. ಕೆಲವು ಕಡೆ ಹಳ್ಳ ತೋಡುಗಳನ್ನು ದಾಟಿಯೇ ಹೋಗಬೇಕಾದ ಅನಿವಾರ್ಯತೆ ಇದೆ. ಜೋರಾದ ಮಳೆ ಬಂದರಂತೂ ಕೆಲವು ಕಡೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಅಂದು ರಜೆ ಹಾಕಿ ಮನೆಯಲ್ಲಿರಬೇಕಾದ ಸ್ಥಿತಿಯಾಗಿದೆ.

ಶಾಸಕರಿಗೆ ಮನವಿ
ಹೆಬ್ಟಾರ್‌ತಡಿ ಹಳ್ಳವು ಅಂದಾಜು 30 ಅಡಿಗೂ ಹೆಚ್ಚು ಉದ್ದ ಇದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಪಂಚಾಯತ್‌ ಅನುದಾನ ಸಾಲದು. ಸೇತುವೆ ನಿರ್ಮಾಣದ ಕುರಿತು ಸಂಸದರು ಶಾಸಕರಿಗೆ ಗ್ರಾ.ಪಂ.ನಿಂದ ಮನವಿ
ಸಲ್ಲಿಸಲಾಗಿದೆ.

– ಗೋಪಾಲ ದೇವಾಡಿಗ, ಆಜ್ರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ಕಾಲು ಸಂಕ ನಿರ್ಮಾಣ
ಅಭಿವೃದ್ಧಿಗೆ ಸರಕಾರದಲ್ಲಿ ಅನುದಾನ ಇಲ್ಲ. ನರೇಗಾ ಯೋಜನೆಯಲ್ಲಿ ಸೇತುವೆ ನಿರ್ಮಿಸಲು ಅವಕಾಶ ಇಲ್ಲ.ಖಾಸಗಿಯಾಗಿ, ಟ್ರಸ್ಟ್‌ ಮೂಲಕ ಅಥವಾ ದಾನಿಗಳ ಸಹಕಾರದಿಂದ ಜನರು ಸಂಚರಿಸುವ ಆವಶ್ಯಕತೆಗೆ ಅನುಗುಣವಾಗಿ ಕಾಲು ಸಂಕ ನಿರ್ಮಿಸಿ ಕೊಡುವ ಬಗ್ಗೆ ಪ್ರಯತ್ನಿಸಲಾಗುವುದು.

– ಗುರುರಾಜ್‌ ಗಂಟಿಹೊಳೆ, ಬೈಂದೂ ರು ಶಾಸಕರು

ಇನ್ನೆಷ್ಟು ವರ್ಷ ಬೇಕು?
ಹಳ್ಳ ಉಕ್ಕಿದ ರೆ ಮಕ್ಕಳವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತದೆ. ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲೂ ಆಗುವುದಿಲ್ಲ. ಆರ್ಧ ಶತಮಾನ ಸರ್ಕಸ್‌ ಮೂಲಕ ಹಳ್ಳ ದಾಟಿದ್ದೇವೆ. ಇತಂಹ ಸಮಸ್ಯೆ ಪರಿಹಾರಕ್ಕೆ ಇನ್ನೇಷ್ಟು ವರ್ಷ ಕಾಯ ಬೇಕು ಎಂದು ಸ್ಥಳೀಯರಾದ ನಾರಾಯಣ ಪೂಜಾರಿ ಕೇಳುತ್ತಾರೆ.

– ಸತೀಶ ಆಚಾರ್‌ ಉಳ್ಳೂರು

ಟಾಪ್ ನ್ಯೂಸ್

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Anantha-Padnabha-Swamy

Anant Chaturdashi; ಅನಂತವ್ರತ ಅನಂತಕಲ್ಪನೆ…

1-rrr

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

taliban

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

Buffellow

Kumata: ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ; ನಾಲ್ವರ ಬಂಧನ

19-sirsi

Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Anantha-Padnabha-Swamy

Anant Chaturdashi; ಅನಂತವ್ರತ ಅನಂತಕಲ್ಪನೆ…

1-rrr

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

congress

Congress Manifesto; ಕಣಿವೆ ರಾಜ್ಯದ ಭೂರಹಿತ ಕೃಷಿಕರಿಗೆ 99 ವರ್ಷ ಭೂಗುತ್ತಿಗೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.