![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 30, 2021, 1:42 PM IST
ಶಿರಸಿ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲ ಅರ್ಹರೂ ಕೋವಿಡ್ ಲಸಿಕೆ ಪಡೆಯುತ್ತಿದ್ದರೂ ಮುಸ್ಲಿಂಸಮುದಾಯದವರು ನಿರೀಕ್ಷೆಯಷ್ಟು ಪಡೆಯುತ್ತಿಲ್ಲ.ಅವರೂ ಅಧಿಕ ಪ್ರಮಾಣದಲ್ಲಿ ಪಡೆಯಬೇಕು ಎಂದು ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.
ನಗರದ ಮಿನಿ ವಿಧಾನ ಸೌಧದಲ್ಲಿ ಸೋಮವಾರ ಸಭೆ ನಡೆಸಿ, 1200ರಷ್ಟು ಜನರು 60 ವರ್ಷ ಮೇಲ್ಪಟ್ಟವರು ಇದ್ದರೂ ಕೇವಲ 30-40 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.ಉಳಿದ ಸಮುದಾಯವದರು ಶೇ. 60ರಷ್ಟು ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಹಿನ್ನಡೆ ಸರಿಯಲ್ಲ. ಸರಿಯಾದಜಾಗೃತಿ ಮೂಡಿಸಿ ಎಲ್ಲರಿಗೂ ಲಸಿಕೆ ಕೊಡಿಸಿ ಆರೋಗ್ಯರಕ್ಷಣೆ ಮಾಡಿಸಬೇಕಾದದ್ದು ಪ್ರಮುಖರ ಜವಾಬ್ದಾರಿ ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಖಾದರ ಆನವಟ್ಟಿ, ತಪ್ಪುಮಾಹಿತಿಗಳಿಂದ ಹಿಂದುಳಿದಿರಬಹುದು. ಈ ಬಗ್ಗೆ ಜಾಗೃತಿಮೂಡಿಸಿ ಲಸಿಕೆ ಹಾಕಿಸುವಲ್ಲಿ ಕಳಿಸುವ ಜವಾಬ್ದಾರಿ ನಮ್ಮದು ಎಂದರು.
ಆರೋಗ್ಯಾಧಿಕಾರಿ ವಿನಾಯಕ ಕಣ್ಣ ಮಾತನಾಡಿ, ಹೆಚ್ಚು ಜನರಿದ್ದರೆ ಅಲ್ಲಿಗೇ ನಮ್ಮ ಘಟಕ ಕಳಿಸಿ ಚುಚ್ಚುಮದ್ದು ಹಾಕಿಸಲಾಗುತ್ತದೆ ಎಂದರು. ಯಾವುದೇ ಕಾರಣಕ್ಕೂವಿಳಂಬ ಮಾಡದೇ ಲಸಿಕೆ ಹಾಕಿಸುವಂತೆ ಸಿಪಿಐ ಪ್ರದೀಪ ಯು.ಬಿ. ಮನವಿ ಮಾಡಿದರು. ಅಬುಜರ್ ಖಾದರ್, ದಾದರ್ ಇತರರು ಇದ್ದರು.
ನೈಟ್ ಕ್ಲಬ್-ಕ್ಯಾಸಿನೊಗಳಿಗೆ ಏಕ್ಕಿಲ್ಲ ನಿರ್ಬಂಧ? :
ಪಣಜಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಹೋಳಿ, ಈದ್, ಈಸ್ಟರ್ನಂತಹ ಕಾರ್ಯಕ್ರಮ ನಿರ್ಬಂಧಿ ಸಿರುವ ಸರ್ಕಾರ ನೈಟ್ ಕ್ಲಬ್, ಕ್ಯಾಸಿನೊಗಳಿಗೆ ಏಕೆ ನಿರ್ಬಂಧ ಹೇರಿಲ್ಲ ಎಂದು ಗೋವಾ ಆಮ್ ಆದ್ಮಿ ಪಕ್ಷದ ಪ್ರಮುಖ ರಾಹುಲ್ ಮಾಮ್ರೆ ಗೋವಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಏಕೆ ನಿರ್ಬಂಧ ಹೇರಿದೆ ಎಂದು ಅರ್ಥವಾಗುತ್ತಿಲ್ಲ. ವಾಣಿಜ್ಯೋದ್ಯಮಗಳಿಗೆ ಯಾವುದೇ ನಿರ್ಬಂಧವಿಲ್ಲ. ವಾಣಿಜ್ಯ ಕಾರ್ಯಕ್ರಮದ ಸಂಘಟಕರು ಆಡಳಿತ ಪಕ್ಷದವರ ಜೇಬು ತುಂಬಿಸಿದ್ದಾರೆಯೇ? ಎಂದು ರಾಹುಲ್ ಮಾಮ್ರೆ ಪ್ರಶ್ನಿಸಿದರು.
ವಿಶ್ವದ ಯಾವುದೇ ಸ್ಥಳದಿಂದ ಗೋವಾಕ್ಕೆ ಆಗಮಿಸಬೇಕಾದರೆ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು. ಸದ್ಯ ರಾಜ್ಯದಲ್ಲಿ 144 ನೇ ಕಲಂ ಜಾರಿಗೊಳಿಸಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಮಾರುಕಟ್ಟೆಪ್ರದೇಶದಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.