Dandeli: ಹಣ ಮತ್ತು ಬಂಗಾರವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ
Team Udayavani, Aug 13, 2023, 4:17 PM IST
ದಾಂಡೇಲಿ : ನಗರದ ಸಂಡೇ ಮಾರ್ಕೆಟಿನಿಲ್ಲಿ ಹಣ ಮತ್ತು ಬಂಗಾರದ ಸರವಿದ್ದ ಬ್ಯಾಗ್ ಸಿಕ್ಕಿರುವುದನ್ನು ಅದರ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಭಾನುವಾರ ನಡೆದಿದೆ
ನಗರದ ಸಂಡೇ ಮಾರ್ಕೆಟಿಗೆ ತರಕಾರಿ ತರಲೆಂದು ಹೋಗಿದ್ದ ಸ್ಥಳೀಯ 14ನೇ ಬ್ಲಾಕ್ ನಿವಾಸಿ ನವೀನ್ ಸತ್ತುರಾಮ ಧರೇಕರ್ ಇವರಿಗೆ ಬ್ಯಾಗೊಂದು ಸಿಕ್ಕಿದೆ. ಬ್ಯಾಗನ್ನು ಎತ್ತಿಕೊಂಡು ಅಲ್ಲಿ ಇಲ್ಲಿ ಎಂದು ಹಡುಕಾಡಿದ್ದಾರೆ. ಕೊನೆಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಾಧ್ಯಮದವರ ಸೂಚನೆಯಂತೆ ಬ್ಯಾಗನ್ನು ಮನೆಗೆ ತಂದು ಪರಿಶೀಲಿಸಿದಾಗ ಅದರಲ್ಲಿ 5400 ರೂ. ನಗದು ಮತ್ತು ಒಂದು ಬಂಗಾರದ ಸರ ಹಾಗೂ ಆಧಾರ್ ಕಾರ್ಡ್, ಬ್ಯಾಂಕ್ ಉಳಿತಾಯ ಖಾತೆ ಪುಸ್ತಕ ಸೇರಿದಂತೆ ಇನ್ನಿತರ ಕಾಗದ ಪತ್ರಗಳು ಇದ್ದವು.
ಆಧಾರ್ ಕಾರ್ಡಿನಲ್ಲಿ ಹೆಸರು ಮತ್ತು ಮೊಬೈಲ್ ನಂಬರ್ ಕಂಡು ಕೂಡಲೇ ಬ್ಯಾಗಿನ ವಾರೀಸುದಾರರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಬಳಿಕ ಸಂಬಂಧಿತ ಬ್ಯಾಗಿನ ವಾರೀಸುದಾರರಾದ ಅಂಬೇವಾಡಿ ಗ್ರಾ.ಪಂಚಾಯ್ತು ವ್ಯಾಪ್ತಿಯ ನವಗ್ರಾಮದ ನಿವಾಸಿ ಇಂದುಬಾಯಿ ಕಲ್ಲಪ್ಪ ಪಾಟೀಲ್ ಅವರು ಪತ್ರಕರ್ತ ಸಂದೇಶ್.ಎಸ್.ಜೈನ್ ಅವರ ಕಚೇರಿಗೆ ಬಂದು, ಬ್ಯಾಗನ್ನು ನವೀನ್ ಸತ್ತುರಾಮ ಧರೇಕರ್ ಅವರಿಂದ ಪಡೆದುಕೊಂಡರು. ಹಣ, ಬಂಗಾರ ಸಹಿತ ಬ್ಯಾಗನ್ನು ಮರಳಿಸಿದ ನವೀನ್ ಸತ್ತುರಾಮ ಧರೇಕರ್ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ
Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್
Vaccine: ಇನ್ನೆರಡು ವರ್ಷದೊಳಗೆ ಕೆಎಫ್ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್
Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ
Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.