Dandeli; ಇದು ಅತ್ಯಧಿಕ ಹೊಂಡಗಳ ದಾಖಲೆಗೆ ಪಾತ್ರವಾಗಬಹುದಾದ ರಸ್ತೆ


Team Udayavani, Jul 8, 2024, 10:13 PM IST

1-honda

ದಾಂಡೇಲಿ : ಒಂದು ಕಾಲದಲ್ಲಿ ದಾಂಡೇಲಿ ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಸ್ಥಳ ಆಗಿನ ದಾಂಡೇಲಿಯಾಗಿದ್ದ ಈಗಿನ ಹಳೆದಾಂಡೇಲಿ. ಹೊಸ ದಾಂಡೇಲಿ ಆದ ನಂತರ ಹಳೆ ದಾಂಡೇಲಿ ತನ್ನ ವೈಭವವನ್ನು ಕಳಚಲಾರಂಭಿಸಿತು. ಆ ಕಾರಣಕ್ಕಾಗಿ ಇಂದು ಹಳೆದಾಂಡೇಲಿ ಯವ್ವನವನ್ನು ಕಳೆದುಕೊಂಡ ಹಣ್ಣು ಹಣ್ಣು ಮುದುಕನಂತಿರುವ ಪ್ರದೇಶವಾಗಿದೆ. ವಯಸ್ಸು 90 ಆದ ನಂತರ ಶಸ್ತ್ರಚಿಕಿತ್ಸೆ ಯಾಕೆ ಬೇಕು, ದಿನ ಕಳೆದರೆ ಸಾಕು, ಹೇಗೂ ಇಂದಲ್ಲ ನಾಳೆಯಾದರೂ ಸಾಯ್ತಾನೆ ಬಿಡಿ ಎನ್ನುವಂತಹ ಜಾಯಮಾನದಲ್ಲಿ ನಮ್ಮ ಸರಕಾರಗಳು ಇದೆಯೆ ಏನೋ ಎಂಬಂತೆ ಬಾಸವಾಗತೊಡಗಿದೆ.

ನಮ್ಮೆಲ್ಲ ಸ್ವಾರ್ಥಕ್ಕಾಗಿ, ಊರು ಪರ ಊರಿನ ಲಾಭಕ್ಕಾಗಿ ಹಳೆದಾಂಡೇಲಿ ಬೇಕು. ಆದರೆ ಹಳೆದಾಂಡೇಲಿಗೆ ಮಾತ್ರ ಏನನ್ನು ನೀಡಲಾರೆವು ಎಂಬಂತಿದೆ ಸರಕಾರಗಳ ನಡೆ. ಈ ಸರಕಾರಗಳ ನಡೆಗೆ ಹಳೆದಾಂಡೇಲಿಯ ಜನ ಇನ್ನೂ ನುಡಿ ಬಿಚ್ಚದೇ ಇರುವುದು ಇದಕ್ಕೆ ಕಾರಣವಾಗಿರಬಹುದೇ, ಅಥವಾ ನಂಗ್ಯಾಕೆ ಬೇಕು ಉಳಿದವರು ಮಾಡ್ಲಿ ಎಂಬ ಇಲ್ಲಿಯ ಜನರಲ್ಲಿರುವ ಧೋರಣೆಯೆ, ಅಥವಾ ಏನು ಬೇಕಾದ್ರೂ ಆಗ್ಲಿ ನನಗೇನು ಹೋಗೋದೈತಿ ಎಂಬ ನಿಲುವಿಗೆ ಇಲ್ಲಿಯ ಜನತೆ ಬಂದಿದ್ದಾರೆಯೆ ಎಂಬ ಅನುಮಾನ ಹಳೆದಾಂಡೇಲಿಯ ರಸ್ತೆಯನ್ನು ನೋಡಿದಾಗ ಅನಿಸುವುದರಲ್ಲಿ ಯಾವ ಅನುಮಾನವು ಇಲ್ಲ.

ಹಳೆದಾಂಡೇಲಿಯ ಜನತೆ ಎಲ್ಲರೂ ಸೇರಿ, ರಸ್ತೆ ದುರಸ್ತಿ ಆಗದೆ ಇದ್ದ ಪಕ್ಷದಲ್ಲಿ ನಾವು ಮತದಾನವೇ ಮಾಡುವುದಿಲ್ಲ ಎಂಬ ಒಕ್ಕೊರಳ ಆಗ್ರಹ ಮಾಡುತ್ತಿದ್ದಲ್ಲಿ ಇಂದು ಈ ಪರಿಸ್ಥಿತಿ ಹಳೆದಾಂಡೇಲಿಯ ರಸ್ತೆಗೆ ಬರುತ್ತಿರಲಿಲ್ಲ. ನಮಗ್ಯಾಕೆ ಊರ ಉಸಾಬರಿ ಎಂಬ ಹಳೆದಾಂಡೇಲಿಯ ಜನತೆಯ ನಿಲುವೇ ರಸ್ತೆಯ ಈ ಪರಿಸ್ಥಿತಿಗೆ ಕಾರಣವೇ, ಗೊತ್ತಿಲ್ಲ.

ಒಂದಂತೂ ನಿಜ ಹಳೆದಾಂಡೇಲಿಯ ಜನತೆಯ ಮುಗ್ಧತೆಯ ದುರ್ಬಳಕೆ ಖಂಡಿತವಾಗಿಯೂ ಆಗುತ್ತಿದೆ ಎನ್ನುವುದನ್ನು ಈ ರಸ್ತೆಯೆ ಸಾರಿ ಹೇಳುತ್ತಿದೆ. ಇದ್ದ ಪೈಪುಗಳನ್ನು ಹಾಕಿಸಿಕೊಳ್ಳಲು ರಸ್ತೆಯನ್ನು ಅಗೆದು ಪೈಪ್ ಅಳವಡಿಸಿ ರಸ್ತೆಯನ್ನು ಹಾಳು ಮಾಡಿದ್ದನ್ನು ಹಳೆದಾಂಡೇಲಿಯ ಜನ ಕಣ್ಣರಳಿಸಿ ನೋಡಿಯಾಗಿದೆ. ಆದ್ರೆ ಅದೇ ಅಗೆದು ಮುಚ್ಚಿದ ರಸ್ತೆಯನ್ನು ಸರಿಪಡಿಸಲು ಇದೇ ಹಳೆದಾಂಡೇಲಿಯ ಜನ ಹೋರಾಟ ಮಾಡಬೇಕಾಯಿತು. ಮೊನ್ನೆ ಮೊನ್ನೆ ರಸ್ತೆಗೆ ಡಾಂಬರೀಕರಣವು ಆಗಿತ್ತು. ಆ ಡಾಂಬರೀಕರಣ ಹಾಕಿ ಇದೀಗ ಒಂದೆರಡು ತಿಂಗಳೊಳಗೆ ಡಾಂಬರು ಕಿತ್ತು ಹೋಗಿದೆ. ಡಾಂಬರ್ ಹಾಕಿದ್ದನ್ನು ನೋಡುವಾಗ, ಮೇಕಪ್ ಮಾಡಿ ಬಿಸಿಲಲ್ಲಿ ಅಡ್ಡಾಡಿದ ತತ್ ಕ್ಷಣವೆ ಮೇಕಪ್ ಮಂಗಮಾಯ ಆಗುವ ರೀತಿಯಲ್ಲಿ ಈ ರಸ್ತೆಗೆ ಹಾಕಿದ ಡಾಂಬರ್ ಮಂಗ ಮಾಯವಾಗಿದೆ.

ಇದೇ ರಸ್ತೆಯಲ್ಲಿದ್ದ ಹೊಂಡದಲ್ಲಿ ಸಾರಿಗೆ ಬಸ್ಸೊಂದು ಹೂತು ಹೋಗಿ, ಸರಿ ಸುಮಾರು ಒಂದುವರೆ ಗಂಟೆಗಳವರೆಗೆ ಒದ್ದಾಡಿದ ಘಟನೆ ಸೋಮವಾರ ನಡೆದಿದೆ. ಹೂತುಹೋದ ಬಸ್ಸನ್ನು ತಳ್ಳಲು ಸಹಕರಿಸಿದ್ದು ಕೂಡ ಇದೇ ಹಳೆದಾಂಡೇಲಿಯ ಜನತೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೆಬೇಕು.

ಘಟಾನುಘಟಿಗಳು ಇರುವ ಹಳೆದಾಂಡೇಲಿಯ ಈ ರಸ್ತೆಯ ದುಸ್ಥಿತಿಯ ಬಗ್ಗೆ ನಗರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಜೀವನದಲ್ಲಿ ಜಿಗುಪ್ಸೆಗೊಂಡು, ಇನ್ನೇನು ಬದುಕುವುದೇ ಬೇಡ ಎನ್ನುವಂತವರು ಹಳೆದಾಂಡೇಲಿಯ ರಸ್ತೆಯಲ್ಲಿ ಸಂಚರಿಸಿದರೆ ಯಮಲೋಕದ ದರ್ಶನವಾಗಬಹುದು ಎಂಬಂತಿದೆ ಹಳೆದಾಂಡೇಲಿಯ ರಕ್ಕಸ ರಸ್ತೆ.

ಸಂದೇಶ್ ಎಸ್.ಜೈನ್, ದಾಂಡೇಲಿ

ಟಾಪ್ ನ್ಯೂಸ್

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

Pejavara-Sri

Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Jammu Kashmir: ಬಿಜೆಪಿಯ ʼನಯಾ ಕಾಶ್ಮೀರʼ ಕೈಕೊಟ್ಟಿದ್ದೆಲ್ಲಿ? ಕಣಿವೆಯ ಜನರ ಭಾವನೆಯೇನು?

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

ಜಿಲ್ಲೆಯಲ್ಲಿ ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿ- ಸತೀಶ್‌ ಸೈಲ್‌

ಜಿಲ್ಲೆಯಲ್ಲಿ ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿ- ಸತೀಶ್‌ ಸೈಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ

10

Panaji: ಮಲ್ಪೆಯ 2 ಮೀನುಗಾರಿಕಾ ಬೋಟ್‌ ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.