![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 12, 2019, 12:05 PM IST
ಪ್ರಧಾನಿ ಮೋದಿಯವರ ಕನಸಿನ ಈ ಯೋಜನೆ ಜನರಿಗೆ ಮುಟ್ಟಿಸುವಲ್ಲಿ ಜಿಲ್ಲೆಯ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕಾದ ಅಗತ್ಯವಿದೆ. ಈ ಕುರಿತು ತಿದ್ದುಪಡಿ ಮಾಡಿಸಬೇಕು.
ಹೊನ್ನಾವರ: ಜಗತ್ತಿನ ಅತ್ಯಂತ ದೊಡ್ಡ, ದೇಶದ ಬಹುಪಾಲು ಬಡವರಿಗೆ ವರವಾದ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯುವುದು ಉತ್ತರಕನ್ನಡ ಜಿಲ್ಲೆಯ ಬಡ, ವಯೋವೃದ್ಧ ಮತ್ತು ಪುಟ್ಟ ಮಕ್ಕಳು, ಬಾಣಂತಿಯರು ಆಯುಷ್ಮಾನ್ ಚಿಕಿತ್ಸೆ ಪಡೆಯಲು ಪರದಾಡುವುದು ಕಣ್ಣೀರು ತರಿಸುತ್ತದೆ.
ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರಿದ್ದಾರೆ. ಆರೋಗ್ಯ ಸೂಕ್ಷ್ಮವಾಗಿ ರೋಗಿ ಆಸ್ಪತ್ರೆಗೆ ಬಂದರೆ ಅವರು ಚಿಕಿತ್ಸೆ ನೀಡಬಹುದು, ಸಾಧ್ಯವಿಲ್ಲವಾದರೆ ಯಾವುದೇ ಉನ್ನತ ಆಸ್ಪತ್ರೆಗೆ ಕಳಿಸಬಹುದು. ಭಟ್ಕಳ ಅಥವಾ ಹಳಿಯಾಳ, ಸಿದ್ಧಾಪುರದಂತಹ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲವಾದರೆ ಅವರು 100ಕಿಮೀ ದೂರದ ಕಾರವಾರ ಜಿಲ್ಲಾಸ್ಪತ್ರೆಗೆ ಕಳಿಸುತ್ತಾರೆ. ಇಲ್ಲಿ ತಾಲೂಕು ಆಸ್ಪತ್ರೆಗಿಂತ ಮಿಗಿಲಾದ ವೈದ್ಯರು ಮತ್ತು ಸೌಲಭ್ಯವಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಸಾಧ್ಯವಿಲ್ಲವಾದರೆ ಅವರು 180ಕಿಮೀ ದೂರದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳಿಸುತ್ತಾರೆ. ಅಲ್ಲಿ ಸೌಲಭ್ಯವಿದ್ದರೂ ಎಲ್ಲ ಸರ್ಕಾರಿ ಆಸ್ಪತ್ರೆಗಳಂತೆ ಕಾಳಜಿ ಕಡಿಮೆ. ಅಲ್ಲಿಯ ವೈದ್ಯರು ರಾಜಕಾರಣಿಯೊಬ್ಬರಿಗೆ ಸೇರಿದ ಕೇರಳದ ಖಾಸಗಿ ಆಸ್ಪತ್ರೆಯನ್ನು ಹೆಸರಿಸಿ ಪತ್ರ ಕೊಡುತ್ತಾರೆ ಎಂಬುದಕ್ಕೆ ದಾಖಲೆ ಇದೆ.
ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬ 280ಕಿಮೀ ಪ್ರಯಾಣ ಮಾಡಿ ಮೂರು ಕಡೆ ತಪಾಸಣೆ ಮಾಡಿಸಿಕೊಂಡು, ಅಲ್ಲಿಂದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಪತ್ರ ಪಡೆಯುವಷ್ಟರಲ್ಲಿ ಆತನ ಆಯುಷ್ಯ ಕಡಿಮೆಯಾಗಬಹುದು, ಮುಗಿಯಲೂ ಬಹುದು. ಓಡಾಡಲು ಸಂಗಡ ಇನ್ನೊಬ್ಬರನ್ನು ಕರೆದುಕೊಂಡು ಪರ ಊರಿನಲ್ಲಿ ಆಸ್ಪತ್ರೆ ಹುಡುಕುವುದು ಗ್ರಾಮೀಣ ಜನರಿಗೆ ಕಷ್ಟ. ಅಪಘಾತದಿಂದ ಗಂಭೀರಗಾಯಗೊಂಡ ತುರ್ತು ಸಂದರ್ಭದಲ್ಲಿ ಮಾತ್ರ ನೆರೆ ಜಿಲ್ಲೆಯ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆಯೇ ವಿನಃ ಅರೆಜೀವವಾದವನಿಗೆ ಸಾಧ್ಯವಿಲ್ಲ. ಒಂದು ವರ್ಷದಲ್ಲಿ ಈ ಯೋಜನೆಯಿಂದ ಸಾವಿರಾರು ಜನ ಚಿಕಿತ್ಸೆ ಪಡೆಯದೆ ನಿರಾಸೆಗೊಂಡಿದ್ದಾರೆ. ಸರ್ಕಾರದ ಯಾವ ಯೋಜನೆ ಬಂದರೂ ಎಲ್ಲ ಜಿಲ್ಲೆಯ ಜನರನ್ನು ಅದು ತಲುಪುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿಕೊಡುವುದು ಶಾಸಕರ ಜವಾಬ್ದಾರಿ.
ಆರ್ಥಿಕ ಹಿನ್ನೆಲೆ ಇಲ್ಲದೆ ಸಹಕಾರಿ ಸಂಘದ ಸದಸ್ಯನಾದವ ಕೇವಲ 250ರೂ. ತೆತ್ತು ಯಶಸ್ವಿನಿ ಪಡೆದು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉತ್ತಮ ಯೋಜನೆ ಕೈಬಿಟ್ಟ ಸರ್ಕಾರ ಬಡವರಿಗೆ ಉಚಿತ, ಉಳಿದವರಿಗೆ ಶೇ. 30ರಿಯಾಯತಿ ಎಂದು ಹೇಳಿ ಓಡಾಡಿಸಿ ಆಯುಷ್ಯ ಕಳೆಯುತ್ತದೆ. ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲವಾದರೆ ಯಾವುದೇ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪತ್ರಕೊಟ್ಟರೆ ಬಡವರಿಗೆ ಆಯುಷ್ಮಾನ್ ಯೋಜನೆಯಿಂದ ಪ್ರಯೋಜನವಿದೆ. ತನಗೆ ವಿಶ್ವಾಸವಿದ್ದಲ್ಲಿ ದೊಡ್ಡ ಆಸ್ಪತ್ರೆಯಲ್ಲಿ ಸರ್ಕಾರದ ಸೌಲಭ್ಯದೊಂದಿಗೆ ಚಿಕಿತ್ಸೆ ಪಡೆಯುವುದು ಪ್ರಜೆಗಳ ಹಕ್ಕು. ನಾನು ಹೇಳಿದಲ್ಲಿ ಹೋಗಿ ಚಿಕಿತ್ಸೆ ಮಾಡಿಸಿಕೋ ಎಂದು ಹೇಳುವುದು ನ್ಯಾಯ ಸಮ್ಮತವಲ್ಲ. ಅದು ಇಲ್ಲ, ಇನ್ನೊಂದರ ಪ್ರಯೋಜನ ಪಡೆಯುವುದು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಕನಸಿನ ಈ ಯೋಜನೆಯನ್ನು ಜನರಿಗೆ ಮುಟ್ಟಿಸುವಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡತರಬೇಕಾದ ಅಗತ್ಯವಿದೆ. ಜಿಲ್ಲೆಯ ಶಾಸಕರು, ಮಂತ್ರಿಗಳು ಈ ಕುರಿತು ತಿದ್ದುಪಡಿ ಮಾಡಿಸಬೇಕು. ಇಲ್ಲವಾದರೆ ಹೈಟೆಕ್ ಆಸ್ಪತ್ರೆಯ ಹೋರಾಟದ ಜೊತೆ ಈ ಹೋರಾಟವನ್ನು ಯುವಜನತೆ ಆರಂಭಿಸಬಹುದು.
•ಜೀಯು, ಹೊನ್ನಾವರ
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.