ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಒಬ್ಬೊಬ್ಬ ರೈತ ಕನಿಷ್ಠ 50 ಸಾವಿರ ಸಸಿಗಳನ್ನು ನಾಟಿ ಮಾಡತೊಡಗಿದ್ದಾರೆ.

Team Udayavani, Oct 30, 2024, 5:45 PM IST

ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ

ಉದಯವಾಣಿ ಸಮಾಚಾರ
ಶಿರಸಿ: ಇಂದಿನ ಕಾಲದಲ್ಲಿ ರೈತರ ಮಕ್ಕಳು ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುವುದು ಸಹಜವಾಗಿದೆ. ಸಂಸಾರ ನಿರ್ವಹಣೆಗೆ ಉದ್ಯೋಗ ಅನಿವಾರ್ಯವೂ ಆಗಿದೆ. ಆದರೆ ಈ ರೀತಿ ನಗರಗಳಲ್ಲಿ ವಾಸವಿರುವ ಅನೇಕ ಕುಟುಂಬ ಕೃಷಿ ಭೂಮಿ ಮಾರಾಟ ಮಾಡಲು ಮುಂದಾಗಿವೆ. ಪಾರಂಪರಿಕವಾಗಿ ನಮಗೆ ಹಿರಿಯರು ನೀಡಿರುವ ಭೂಮಿ ಉಳಿಸಿಕೊಳ್ಳಬೇಕೆನ್ನುವ ಮನೋಭಾವನೆ ಮಕ್ಕಳಲ್ಲಿ ಮೂಡಿಸಬೇಕು ಎಂದು ಟಿಆರ್‌ಸಿ ಅಧ್ಯಕ್ಷರು ಹಾಗೂ ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಮಕೃಷ್ಣ ಶ್ರೀಪಾದ ಹೆಗಡೆ ಹೇಳಿದರು.

ಅವರು ತೋಟಗಾರಿಕಾ ಇಲಾಖೆ, ಟಿಆರ್‌ಸಿ, ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘ ಮತ್ತು ಪ್ರಿಂಪ್ಕೋಸ್‌ ಕೋ-ಆಪರೇಟಿವ್‌ ಸೊಸೈಟಿ, ಬಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಡಲದ ವಿವೇಕಾನಂದ ಸಭಾಭವನದಲ್ಲಿ ನಡೆದ ಅಡಕೆ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಹಿಂದೆ ಎಲ್ಲ ರೈತರಲ್ಲಿಯೂ ಸಾವಯವ ಪದ್ಧತಿಯಲ್ಲಿ ಅಡಕೆ ತೋಟ ನಿರ್ವಹಿಸುವ ಪದ್ಧತಿ ರೂಢಿಯಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಅಡಕೆಗೆ ನಾನಾ ತರಹದ ರೋಗಗಳು ಕಾಣಿಸಿಕೊಳ್ಳತೊಡಗಿವೆ.

ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳು ಪ್ರಕೃತಿದತ್ತವಾಗಿಯೇ ದೊರೆಯುತ್ತದೆ. ಬೆಟ್ಟದಲ್ಲಿನ ಹಸಿ ಸೊಪ್ಪು ಮುಚ್ಚಿಗೆಯಿಂದ ತೋಟಕ್ಕೆ ಅನೇಕ ರೀತಿಯಲ್ಲಿ ಫಲವತ್ತತೆ ಸಿಗುತ್ತದೆ. ಆದರೆ ಈಗ ಬಹುತೇಕ ಕಡೆ ಸೊಪ್ಪಿನ ಬದಲಾಗಿ ಮಲ್ಲಿಂಗ್‌ ಶೀಟ್‌ ಗಳನ್ನು ಬಳಸಲಾಗುತ್ತಿದೆ. ಇವೆಲ್ಲವೂ ಸಹ ಒಂದಿಲ್ಲೊಂದು ರೀತಿ ರೋಗ ಬಾಧೆಗೆ ಕಾರಣವಾಗಿದೆ ಎಂದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಜಿಲ್ಲೆಯಲ್ಲಿ ಸುಮಾರು 36 ಸಾವಿರ ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಕಳೆದ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 75 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಅಡಕೆ ತೋಟ ನಿರ್ಮಿಸಲಾಗಿದೆ ಹಾಗೂ ದೇಶದಾದ್ಯಂತ 1.24 ಲಕ್ಷ ಎಕರೆ ಹೊಸ ತೋಟ ನಿರ್ಮಿಸಲಾಗಿದೆ. ಎಲೆಚುಕ್ಕೆ ರೋಗ ಇತರ ರೋಗಗಳಿಂದ ಇದರಲ್ಲಿ ಶೇ.50 ರಷ್ಟು ನಷ್ಟವಾದರೂ ಇನ್ನುಳಿದ 50 ರಷ್ಟು ಅಡಕೆ ಇನ್ನು ಐದಾರು ವರ್ಷಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತವೆ.

ನಮ್ಮ ಜಿಲ್ಲೆಯ ಪ್ರತಿ ಅಡಕೆ ಬೆಳೆಗಾರ ಸರಾಸರಿ ಅಡಕೆ ಕ್ಷೇತ್ರ 32 ಗುಂಟೆ. ಇದನ್ನು ವಿಸ್ತರಿಸಲು ಜಾಗದ ಕೊರತೆ ಸಹ ಇದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಭಾಗದಲ್ಲಿ ಅಡಕೆ ತೋಟ ನಿರ್ಮಿಸುತ್ತಿರುವ ಒಬ್ಬೊಬ್ಬ ರೈತ ಕನಿಷ್ಠ 50 ಸಾವಿರ ಸಸಿಗಳನ್ನು ನಾಟಿ ಮಾಡತೊಡಗಿದ್ದಾರೆ. ಈ ಅಡಕೆ ಮಾರುಕಟ್ಟೆ ಪ್ರವೇಶಿಸಿದ ನಂತರ ನಮ್ಮ ಭಾಗದ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ಸಿಪಿಸಿಆರ್‌ಐ ಕಾಸರಗೋಡಿನ ಪ್ರಧಾನ ವಿಜ್ಞಾನಿ ಡಾ| ವಿನಾಯಕ ಹೆಗಡೆ, ಎಲೆಚುಕ್ಕೆ ರೋಗವು ಶಿಲೀಂಧ್ರದಿಂದ ಬರುವ ರೋಗ. ಇದು ಗಾಳಿ ಮೂಲಕವೂ ಹರಡುವುದರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬಹುಬೇಗ ಪಸರಿಸುತ್ತದೆ. ನಾವು ಕೋವಿಡ್‌ ಸಂದರ್ಭದಲ್ಲಿ ಹೇಗೆ ಎಲ್ಲರೂ ಒಗ್ಗೂಡಿ ಸೋಂಕನ್ನು ಎದುರಿಸಿದ್ದೆವೋ ಅದೇ ಮಾದರಿಯಲ್ಲಿ ಎಲ್ಲರೂ ಒಂದಾಗಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಬಂಡಲ ಹಾಲು ಸಂಘದ ಅಧ್ಯಕ್ಷ ವಿಶ್ವನಾಥ ಮರಾಠಿ ಮಾತನಾಡಿದರು. ಟಿಆರ್‌ಸಿ ನಿರ್ದೇಶಕ ಹಾಗೂ ಪ್ರಿಂಪ್ಕೋಸ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸಂತೋಷಕುಮಾರ ಗೌಡರ್‌ ಕಸಗೆ ಸ್ವಾಗತಿಸಿದರು.

ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಕುರುವಣಿಗೆ ನಿರ್ವಹಿಸಿದರು. ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಹೆಗಡೆ ವಂದಿಸಿದರು. ಮಂಜಗುಣಿ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಹಾಗೂ ಟಿಆರ್‌ಸಿ ನಿರ್ದೇಶಕರಾದ ಎಸ್‌. ಎನ್‌. ಹೆಗಡೆ ಹಾವಳಿಮನೆ, ವಿN°àಶ್ವರ ರಾಮಚಂದ್ರ ಹೆಗಡೆ ಅಗಾÕಲ ಕಿಬ್ಬಳ್ಳಿ, ಟಿಆರ್‌ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್‌
ಮಾವಿನಕೊಪ್ಪ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Karkala; ಕಾರು-ಬೈಕ್‌ ಢಿಕ್ಕಿ: ಸವಾರ ಗಂಭೀರ

Mangaluru: ಭೂವಿವಾದ, ಕಳೆ ಕತ್ತರಿಸುವ ಯಂತ್ರದಿಂದ ಹಲ್ಲೆ: ನಾಲ್ವರಿಗೆ ಶಿಕ್ಷೆ

Mangaluru: ಭೂವಿವಾದ, ಕಳೆ ಕತ್ತರಿಸುವ ಯಂತ್ರದಿಂದ ಹಲ್ಲೆ: ನಾಲ್ವರಿಗೆ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yellapur: ಕಾರು – ಲಾರಿ ನಡುವೆ ಭೀಕರ ಅಪಘಾತ… ತಾಯಿ, ಏಳು ತಿಂಗಳ ಮಗು ಸ್ಥಳದಲ್ಲೇ ಮೃತ್ಯು

Yellapur: ಅರೆಬೈಲ್‌ಘಟ್ಟದಲ್ಲಿ ರಸ್ತೆ ಅಪಘಾತ: ಒಂದೇ ಕುಟುಂಬರ ಮೂವರ ಸಾವು

NIA

Karwar: ಪಾಕಿಸ್ಥಾನದ ಏಜೆಂಟ್‌ಗಾಗಿ ನೌಕಾನೆಲೆ ಮಾಹಿತಿ, ಚಿತ್ರ ಸಂಗ್ರಹ: ಇಬ್ಬರ ಸೆರೆ

15-yellapur

Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು

11-rv-deshpande

R. V. Deshpande: ಕುಟುಂಬ ಸಮೇತರಾಗಿ ಕುಂಭಮೇಳದಲ್ಲಿ ಭಾಗವಹಿಸಿದ ಶಾಸಕ ಆರ್.ವಿ.ದೇಶಪಾಂಡೆ

10-dandeli

Dandeli: ಕುಸಿದು ಬಿದ್ದು ವ್ಯಕ್ತಿ ಸಾವು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳುಮಾಡಿಕೊಳ್ಳದ ಭಗವಂತ

Udupi: ಗೀತಾರ್ಥ ಚಿಂತನೆ-192: ವಿಶ್ವಾಸಾರ್ಹತೆ ಹಾಳು ಮಾಡಿಕೊಳ್ಳದ ಭಗವಂತ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

Mangaluru: ಪಿಲಿಕುಳದ ಸಮಗ್ರ ಅಭಿವೃದ್ಧಿಗೆ 165 ಕೋ.ರೂ. ಪ್ರಸ್ತಾವನೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ:ಪ್ರತಿಷ್ಠಾ ಬ್ರಹ್ಮಕಲಶಕ್ಕೆ ಮುಜರಾಯಿ ಸಚಿವರಿಗೆ ಆಹ್ವಾನ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Kinnigoli: ಅಕ್ರಮ ಮರಳು ಅಡ್ಡೆಗೆ ಪೋಲಿಸ್‌ ದಾಳಿ

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Mulki ಆವರಣ ಗೋಡೆಗೆ ಕಾರು ಢಿಕ್ಕಿ; ಚಾಲಕ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.