Sirsi: ಕಾಂಗ್ರೆಸ್ ನ್ಯಾಯ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಮೂಲಕ ಸುಳ್ಳು ವಾಗ್ದಾನ


Team Udayavani, Apr 10, 2024, 4:42 PM IST

9

ಶಿರಸಿ: ರಾಹುಲ್ ಗಾಂಧಿ ಉಳ್ಳವರ ಸಂಪತ್ತನ್ನು ಕಸಿದು ಎಲ್ಲರಿಗೂ ಹಂಚುತ್ತೇವೆ ಎಂದಿದ್ದಾರೆ. ಇದನ್ನು‌ ಹೇಳುವವರು ನಕ್ಸಲೈಟ್. ನಕ್ಸಲಿಸಂ ನಶಿಸುತ್ತಿದ್ದಂತೆ ಕಾಂಗ್ರೆಸ್ ಇಂತಹ ಕಾರ್ಯಕ್ಕೆ‌ ಮುಂದಾಗುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ವಾಗ್ದಾಳಿ ಮಾಡಿದರು.

ಬುಧವಾರ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ‌ಸುದ್ದಿಗೋಷ್ಟಿ‌ ನಡೆಸಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, 1936 ರಲ್ಲಿ‌ ಮುಸ್ಲಿಂ ಲೀಗ್ ಮ್ಯಾನಿಫೆಸ್ಟೋ ಹೇಳಿದಂತೆ 2024 ರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇದೆ. ಯಾವ ವ್ಯತ್ಯಾಸ ಇಲ್ಲ. ಪರ ದೇಶದಲ್ಲಿ‌ ಕಲಿತ ಮುಸ್ಲಿಂ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕೊಡುತ್ತಿರುವುದನ್ನು ನೋಡಿದರೆ ಇದು ಭಾರತದ ಕಾಂಗ್ರೆಸ್ ಪ್ರಣಾಳಿಕೆಯಾ ಗೊತ್ತಾಗುತ್ತಿಲ್ಲ ಎಂದರು.

ಬಿಜೆಪಿ ಕಳೆದ ಹತ್ತು ವರ್ಷದಲ್ಲಿ ಎಲ್ಲರನ್ನೂ ಮೇಲೆಕ್ಕೆ ಎತ್ತಲು ಮುಂದಾಗಿದೆ. 25 ಕೋಟಿ ಜನರನ್ನು ಕಳೆದ ಹತ್ತು ವರ್ಷದಲ್ಲಿ ಬಡತನ ರೇಖೆಗಿಂತ ಮೇಲಕ್ಕೆ  ಎತ್ತಲಾಗಿದೆ ಎಂದ ಅವರು, ಕಾಂಗ್ರೆಸ್  ನ್ಯಾಯ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಮೂಲಕ ಸುಳ್ಳು ವಾಗ್ದಾನ ಮಾಡುತ್ತಿದೆ. ಕಾಂಗ್ರೆಸ್ ಇನ್ನಾವುದೋ ದೇಶದ ಚಿತಾವಣೆಗೆ ಒಳಗಾಗಿ ದೇಶ ಒಡೆಯುವ ಪ್ರಣಾಳಿಕೆ ತಂದಿದೆ ಎಂದೂ ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನದಿ, ದನ ಕರು, ಕಟ್ಟಡಗಳು ನ್ಯೂಯಾರ್ಕ್ ಫೋಟೋ ತೋರಿಸಿದೆ. ವಿದೇಶಿ ಪ್ರಾಣಿ‌ ಪಕ್ಷಿ ತೋರಿಸಿದೆ. ಪ್ರಣಾಳಿಕೆ ತಯಾರಿಸಲು ಎಷ್ಟು ಗಂಭೀರವಾಗಿದೆ‌ ಎಂದು ನೋಡಬೇಕಾಗಿದೆ. ಎಜೆನ್ಸಿಗೆ ಕೊಟ್ಟು ಪ್ರಣಾಳಿಕೆ ಮಾಡಿದ‌ ಕೆಲಸ ಅದು. ಪ್ರಣಾಳಿಕೆ ಕಾಂಗ್ರೆಸ್ ಕೆಲಸ ಅಲ್ಲ ಎಂಬಂತಿದೆ ಎಂದೂ ಹೇಳಿದರು.

ಮಹಿಳಾ, ಬಡವರ, ಕೃಷಿಕರ,‌ ಶ್ರಮಿಕರ, ಎಸ್ ಸಿ-ಎಸ್ ಟಿ ಪರ ಕಾಯಿದೆ, ಯೋಜನೆಗಳನ್ನು ಬಿಜೆಪಿ ಸರಕಾರ ತಂದಾಗಲೂ ಕಾಂಗ್ರೆಸ್  ಈಗ ಕೈ ಬಿಟ್ಟಿದೆ. ಪೊಳ್ಳು ಗ್ಯಾರೆಂಟಿ ಯೋಜನೆಗೆ ಕಾಂಗ್ರೆಸ್ ಅವನ್ನೆಲ್ಲ ಬಳಸಿಕೊಂಡಿದೆ ಎಂದರು.

ಬಿಜೆಪಿ ಆಡಳಿತ ಇದ್ದಾಗ ಹಣದುಬ್ಬರ‌ ಕಡಿಮೆ ಇದ್ದವು. 60 ವರ್ಷದಲ್ಲಿ ಮಾಡಲಾಗದ್ದ‌ನ್ನು ಈಗ ಮಾಡುತ್ತೇನೆ ಎಂದಿದೆ. ಕಾಂಗ್ರೆಸ್ ಆಳ್ವಿಕೆ 60, ಹಾಗೂ 2004 ರಿಂದ 14 ರತ‌ಕ ಅಭಿವೃದ್ದಿ ಶೇ. 1.19 ದರ ಇತ್ತು. ಬಿಜೆಪಿಯು ಕೇವಲ ಹತ್ತು ವರ್ಷದಲ್ಲಿ 26 ಶೇ.‌ಅಭಿವೃದ್ದಿ ಸಾಧಿಸಿದೆ ಎಂದೂ ವಿವರಿಸಿದರು.

ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಪ್ರಣಾಳಿಕೆ ಆಧಾರದಲ್ಲಿ ಚುನಾವಣೆ‌ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಆಶ್ವಾಸನೆ ದಾರಿ ತಪ್ಪಿಸುತ್ತಿದೆ ಎಂದ ಅವರು, ಏ.12ಕ್ಕೆ ಕಾಗೇರಿ‌ ನಾಮಪತ್ರ ಸಲ್ಲಿಸಲಿದ್ದು,‌ ಸುನೀಲ್‌ ಕುಮಾರ್, ಪ್ರಮೋದ್ ಸಾವಂತ್, ದಿನಕರ ಶೆಟ್ಟಿ, ಖಾನಾಪುರ ಶಾಸಕರು ಇತರ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಕಾರವಾರದ ದೈವಜ್ಞ ಕಲ್ಯಾಣ ಮಂಟಪದಿಂದ‌ ಮೆರವಣಿಗೆ ಹೊರಟು 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

ರೈತ ಮೋರ್ಚಾ ಅಧ್ಯಕ್ಷ  ರಮೇಶ ನಾಯಕ, ಖಜಾಂಚಿ‌ ರಮಾಕಂತ ಭಟ್ಟ, ರವಿಚಂದ್ರ ಶೆಟ್ಟಿ, ಆರ್.ವಿ.ಚಿಪಗಿ, ಶ್ರೀರಾಮ‍ ನಾಯ್ಕ ಇದ್ದರು.

ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬಿಗ್ ಝೀರೋ ಆಗಲಿದೆ. ಕಾಂಗ್ರೆಸ್ ಪಕ್ಷ ‌ದೇಶದಲ್ಲಿ ಪ್ರತಿ ಪಕ್ಷವಾಗಿಯೂ ಉಳಿಯುವುದಿಲ್ಲ.

ಮುಸ್ಲಿಂ ಲೀಗ್ ಮಾಡದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಯಾರಾದರೂ ಕಾಂಗ್ರೆಸ್ ಪ್ರಣಾಳಿಕೆ ನಂಬಿದರೆ ಅದರಷ್ಟು‌ ಮೂರ್ಖರಿಲ್ಲ. -ಹರಿಪ್ರಕಾಶ‌ ಕೋಣೆಮನೆ, ರಾಜ್ಯ ವಕ್ತಾರ

ಶಾಸಕ ಹೆಬ್ಬಾರ್ ಅವರು ರಾಜಕೀಯ ತೀರ್ಮಾನ ಪಡೆಯಲು ಯಾಕೆ ಮೀನ ಮೇಷ  ಮಾಡುತ್ತಿದ್ದಾರೆ. ಯಾಕೆ ವಿಳಂಬ ಆಗುತ್ತಿದೆ. ಬಿಜೆಪಿಗೆ ಕಾರ್ಯಕರ್ತರು ಮುಖ್ಯ. ವ್ಯಕ್ತಿಗೋಸ್ಕರ ಕಾರ್ಯಕರ್ತರ ಬಲಿ‌ ಇಲ್ಲ. ಪಕ್ಷ, ಸಂಘಟನೆ‌ಗೆ ನಮ್ಮ ದೇವ ದುರ್ಲಭ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧ. – ಹರಿಪ್ರಕಾಶ ಕೋಣೆಮನೆ, ವಕ್ತಾರ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.