ಉ. ಕನ್ನಡ ಜಿ. ಪಂ. ಸಭೆಯಲ್ಲಿ ಕೋಲಾಹಲ: ಕಾಮಗಾರಿ ಮಾಡದೆ 36 ಲಕ್ಷ ರೂ.ಬಿಲ್!
Team Udayavani, Jan 22, 2021, 4:31 PM IST
ಕಾರವಾರ: ಕಾಮಗಾರಿ ನಡೆಸದೇ ಇದ್ದರೂ 36 ಲಕ್ಷ ರೂ. ಹಣ ಪಾವತಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸದಸ್ಯ ಅಲ್ಬರ್ಟ್ ಡಿಕೋಸ್ಟಾ ಆರೋಪಿಸಿದ್ದು, ಸಭೆಯಲ್ಲಿ ಕೋಲಾಹಲ ಉಂಟಾದ ಘಟನೆ ಶುಕ್ರವಾರ ನಡೆಯಿತು.
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಸದಸ್ಯ ಅಲ್ಬರ್ಟ ಡಿಕೋಸ್ಟಾ ಅವರು ಈ ಅವ್ಯವಹಾರದ ಬಗ್ಗೆ ಗಮನ ಸೆಳೆದಿದ್ದು, ಹೊನ್ನಾವರ ತಾಲೂಕಿನಲ್ಲಿ ಏಳು ಕಾಮಗಾರಿಗಳನ್ನು ಮುಗಿಸದೇ ಬಿಲ್ ಮಾಡಲಾಗಿದೆ. ಒಂದು ಕಾಮಗಾರಿಗೆ 36 ಲಕ್ಷ ರೂ.ಬಿಲ್ ಮಾಡಲಾಗಿದೆ ಎಂದು ಅರೋಪಿಸಿದರು. ಇದಕ್ಕೆ ಜಿ.ಪಂ.ನ ಆಡಳಿತ ವ್ಯವಸ್ಥೆ ಕಾರಣ, ತನಿಖೆ ಮಾಡಿದ ಸಮತಿಯು ಶಿಫಾರಸ್ಸು ಮಾಡಿದ ಒಬ್ಬ ಅಧಿಕಾರಿಗೂ ಇಲ್ಲಿ ಶಿಕ್ಷೆಯಾಗಿಲ್ಲ. ಅಧ್ಯಕ್ಷರ ಸಹಕಾರ ಇಲ್ಲದೆ ಹೀಗೆ ನಡೆಯಲು ಸಾಧ್ಯವಿಲ್ಲ. ಕಾಮಗಾರಿ ಮಾಡದೆ ಹಣ ನುಂಗುವ ಹಂತಕ್ಕೆ ನಾವು ಬಂದು ಮುಟ್ಟಿದ್ದೇವೆ ಎಂದು ಆರೋಪ ವ್ಯಕ್ತಪಡಿಸಿದರು.
ಸದಸ್ಯ ಎಲ್.ಟಿ.ಪಾಟೀಲ ಕೂಡಾ ಇದಕ್ಕೆ ಧ್ವನಿಗೂಡಿಸಿದ್ದು, ಉತ್ತರ ಕನ್ನಡದಲ್ಲಿ ಈ ಪದ್ಧತಿ ಈ ವರ್ಷದಿಂದ ಶುರುವಾಗಿದೆ. ಮುಂಡಗೋಡದಲ್ಲಿ 86 ಲಕ್ಷ ದೋಚಲಾಗಿದೆ ಎಂದು ಆರೋಪಿಸಿದರು.
ಮುಂಡಗೋಡ ತಾ.ಪಂ.ಅಧ್ಯಕ್ಷರು ತಮ್ಮ ಅನುಭವ ಹೇಳಿ, ಅಧಿಕಾರಿಯನ್ನು ಅಮಾನತು ಮಾಡಿ ಎಂದಾಗ ಅಧಿಕಾರಿಯು ಕೆಲಸ ಪ್ರಾರಂಭಿಸುವ ಕುರಿತು ಸಮಜಾಯಿಷಿ ನೀಡಲು ಯತ್ನಿಸಿದರು. ಒಂದು ಕಾಮಗಾರಿ ಮುಗಿದಿದೆ. ಎರಡು ಪ್ರಾರಂಭವಾಗಿವೆ. ನಾಲ್ಕು ಇನ್ನೂ ಪ್ರಾರಂಭವಾಗಿಲ್ಲ ಎಂದರು.
ಒಂದು ಕಾಮಗಾರಿಗೆ 36 ಲಕ್ಷ ರೂ. ಬಿಲ್ ಆಗಿದ್ದು ಹೇಗೆ ಎಂಬುದಕ್ಕೆ ಅಧಿಕಾರಿ ಉತ್ತರಿಸಲು ತಡವರಿಸಿದರು. ಇದನ್ನು ಗಮನಿಸಿದ ಸಿಇಒ ಪ್ರಿಯಾಂಗಾ ಸಮಗ್ರ ತನಿಖೆ ಮಾಡುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಬಸ್ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು
Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ
Kumata: ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ; ನಾಲ್ವರ ಬಂಧನ
Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?
Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.