![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 9, 2023, 9:33 PM IST
ಕಾರವಾರ : ಯುದ್ಧಪೀಡಿತ ಇಸ್ರೇಲ್ ದೇಶದಲ್ಲಿ ಉತ್ತರ ಕನ್ನಡದ ನಾಲ್ವರು ಯುವಕರು ಉದ್ಯೋಗ ಅರಸಿ ಹೋಗಿದ್ದು, ಅವರೀಗ ಭಾರತೀಯ ರಾಯಭಾರ ಕಚೇರಿಯ ಸಂಪರ್ಕಕ್ಕೆ ಬರುತ್ತಿದ್ದಾರೆ. ಇಸ್ರೇಲ್ ಯುದ್ಧ ಘೋಷಣೆ ಮಾಡುತಿದ್ದಂತೆ ಭಾರತದ ರಾಯಭಾರಿ ಕಚೇರಿ ಸಹ ಇಸ್ರೇಲ್ ನಲ್ಲಿ ಇರುವ ಭಾರತೀಯರಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನಾಲ್ವರು ಯುವಕರು ಯುದ್ಧಪೀಡಿತ ಇಸ್ರೆಲ್ ನಲ್ಲಿ ಸಿಲುಕಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ.ಜಿಲ್ಲೆಯ ಶಿರಸಿಯ ಇಬ್ಬರು ಯುವಕರು, ಯಲ್ಲಾಪುರದ ಓರ್ವ ಯುವಕ ,ಹೊನ್ನಾವರದ ಕವಲಕ್ಕಿಯ ಜೇಮ್ಸ್ ಎಂಬ ಯುವಕ ಇಸ್ರೇಲ್ ನಲ್ಲಿ ಇದ್ದಾರೆ ಎಂಬ ಮಾಹಿತಿ ಇದೀಗ ಹೊರಬಂದಿದೆ. ಜಿಲ್ಲಾಡಳಿತ ಸಹ ಮಾಹಿತಿ ನೀಡುವಂತೆ ಜಿಲ್ಲೆಯ ಜನತೆಯನ್ನು ಕೋರಿದೆ.
ಶಿರಸಿ ನಗರದ ಮೀನುಮಾರುಕಟ್ಟೆಯ ನಿವಾಸಿಯಾಗಿರುವ ಕ್ರಿಸೊಸ್ಟೆಮ್ ಪಾಲ್ ವಾಜ್ ಇಸ್ರೇಲ್ ನ ಹೈಫಾ ಗ್ರಾಮದಲ್ಲಿ ಹೋಮ್ ನರ್ಸ್ ಆಗಿ ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತಿದ್ದು, ಇದೀಗ ಅವರು ಇಸ್ರೇಲ್ ನ ಯುದ್ಧ ಪೀಡಿತ ಸ್ಥಳದಿಂದ 150 ಕಿಲೋಮೀಟರ್ ದೂರದಲ್ಲಿದ್ದಾರೆ. ಹಾಗೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಶಿರಸಿಯ ಮತ್ತೋರ್ವ ಯುವಕ ವಿಲ್ಸನ್ ಡಯಾಸ್ ಎಂಬುವವರು ಹೋಮ್ ನರ್ಸಿಂಗ್ ಉದ್ಯೋಗ ಮಾಡುತ್ತಿದ್ದು, ಇಸ್ರೇಲ್ ನ ಪೇಟಾ ಟಿಕ್ವಾ ದಲ್ಲಿ ಸಿಲುಕಿದ್ದಾರೆ. ಹೊನ್ನಾವರದ ಕವಲಕ್ಕಿ ಗ್ರಾಮದ ಯುವಕ ಜೇಮ್ಸ್ ಸಹ ಇಸ್ರೇಲ್ ನಲ್ಲಿ ಸಿಲುಕಿದ್ದು ಇವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಯಲ್ಲಾಪುರದ ಯುವಕನ ಹೆಸರು ಇನ್ನು ತಿಳಿದು ಬಂದಿಲ್ಲ.
ಇಸ್ರೇಲ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಲವು ಯುವಕರು ಸಿಲುಕಿದ್ದು ಇವರ ಮಾಹಿತಿಯನ್ನು ಪೋಷಕರು ಜಿಲ್ಲಾಡಳಿತಕ್ಕೆ ಇನ್ನಷ್ಟೇ ನೀಡಬೇಕಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.