![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 23, 2022, 6:52 PM IST
ಶಿರಸಿ: ಫ್ರಾನ್ಸ್ ದೇಶದ ನಾರ್ಮುಂಡಿಯಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬಂಗಾರ ಪದಕ ವಿಜೇತ ಪ್ರೇರಣಾ ನಂದಕುಮಾರ ಶೇಟ್ ಗೆ ನಗರದ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಾಗರಿಕ ಸಮ್ಮಾನ ಮಾಡಲಾಯಿತು.
ನಾಗರಿಕ ಸಮ್ಮಾನ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ, ಜಿಲ್ಲೆಯ ಹೆಮ್ಮೆ ಅಭಿಮಾನ ಪಡೆಯುವ ಸಾಧನೆ ಆಗುತ್ತಿದೆ. ಪ್ರೇರಣಾ ಸಾಧನೆ ಆ ಸಾಲಿನಲ್ಲಿ ಸೇರಿದೆ. ಈ ಸಾಧನೆಗೆ ತೃಪ್ತಿ ಪಡೆಯದೇ ಮುಂದೆ ಹೋಗಬೇಕು. ಒಲಿಂಪಿಕ್ ಸಾಧನೆ ಆಗಬೇಕು. ಸಂತೋಷ ಪಡಬೇಕು, ಆದರೆ ತೃಪ್ತಿ ಪಡಬಾರದು. ಗುರಿ ತಲುಪುವ ತನಕ ನಿರಂತರ ಮುನ್ನಡೆಯಬೇಕು. ಸರಕಾರದಿಂದ ಎರಡು ಲ.ರೂ. ಪ್ರೋತ್ಸಾಹ ಕೊಡಲಾಗುತ್ತದೆ. ಕಾಲೇಜಿನ ಓದಿನ ವೆಚ್ಚ ಕೂಡ ಭರಿಸುತ್ತದೆ. ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ಒಲಿಂಪಿಕ್ ಸಿದ್ದತೆಗೆ 75 ಕ್ರೀಡಾಳುಗಳಲ್ಲಿ ಪ್ರೇರಣಾಳನ್ನೂ ಆಯ್ಕೆ ಮಾಡಲಾಗುತ್ತದೆ ಎಂದರು.
ಲಯನ್ ರವಿ ಹೂವಿನಮನೆ, ಸಾಧನೆ ಮಾಡುವದರ ಜೊತೆ ನಿರಂತರ ಉಳಿಸಿಕೊಳ್ಳುವ ಕಾರ್ಯ ಕೂಡ ಆಗಬೇಕು ಎಂದರು.ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್ ವಿಜಿ ಭಟ್ ಮಾತನಾಡಿ, ಪ್ರೇರಣಾ ರಾಷ್ಟ್ರದ ಕೀರ್ತಿ ಬೆಳಗಲಿ ಎಂದರು.
ಡಿವೈಎಸ್ಪಿ ರವಿ ನಾಯಕ, ಬಿಇಓ ಎಂ.ಎಸ್.ಹೆಗಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಲಯನ್ಸ್ ಅಧ್ಯಕ್ಷ ಉದಯ ಸ್ವಾದಿ, ಲಯನ್ಸ್ ಗೌರವಾಧ್ಯಕ್ಷ ರವಿ ನಾಯಕ, ನಂದಕುಮಾರ ಶೇಟ್, ಸ್ವಾತಿ ಶೇಟ್, ಗುರುರಾಜ ಹೆಗಡೆ, ಮನಿಷ್ ಇತರರು ಇದ್ದರು.
ಸೀತಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರ್ವಹಿಸಿದರು. ವಿನಯ ಬಸವನಕಟ್ಟೆ ವಂದಿಸಿದರು. ನಗರದ ಪ್ರಮುಖ ಸಂಘಟನೆಗಳು ಚಿನ್ನದ ಹುಡುಗಿಯನ್ನು ಅಭಿನಂದಿಸಿದರು. ಫ್ರಾನ್ಸ್ ನಿಂದ ಶಿರಸಿಗೆ ಆಗಮಿಸಿದ ಪ್ರೇರಣಾಳನ್ನು ನಿಲೆಕಣಿಯಿಂದ ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಯಿತು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.