Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ


Team Udayavani, Jul 31, 2024, 4:10 PM IST

11-honanvaar

ಹೊನ್ನಾವರ: ಜು. 31ರ ಬುಧವಾರ ಮುಂಜಾನೆ ಲಿಂಗನಮಕ್ಕಿ ಜಲಾಶಯ ಶೇ. 86.51 ಷ್ಟು ತುಂಬಿದೆ. ಜಲಮಟ್ಟ  1812.65 ಅಡಿಗಳಿಗೆ ಏರಿದೆ. ಓಲ ಹರಿವು 82,587 ಕ್ಯೂಸೆಕ್ಸ್ ಆಗಿರುವುದರಿಂದ ನಾಳೆ ಅ. 1ರ ಮುಂಜಾನೆ ನೀರು ಬಿಡುವ ಹಂತ 1816 ಅಡಿ ತಲುಪಲಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ 10000 ಕ್ಯೂಸೆಕ್ಸ್ ನೀರಿನಿಂದ ಆರಂಭಿಸಿ ಒಳಹರಿವು ಲೆಕ್ಕ ಹಾಕಿ ನೀರು ಬಿಡಲಾಗುವುದು ಎಂದು ಕೆಪಿಸಿ ಅಧಿಕೃತವಾಗಿ ಪ್ರಕಟಿಸಿದೆ.

ಲಿಂಗನಮಕ್ಕಿ ಆಣೆಕಟ್ಟಿನ ಕೆಲವು ದ್ವಾರ ಸ್ವಲ್ಪ ಮೇಲೆತ್ತಿ ಬಿಡುವ ನೀರು ಜಲಪಾತಕ್ಕೆ ಬಂದು ಧುಮುಕಲಿದ್ದು ಈ ಮಧ್ಯೆ ಅಂತರ 15 ಕಿ.ಮೀ. ಆಗಿದ್ದು ಅಲ್ಲಿ ಮಳೆ ಇದ್ದರೆ ಜೋಗಕ್ಕೆ ಕಳೆ ಬಂದು ರಮಣೀಯವಾಗಲಿದೆ.

ಅಲ್ಲಿಂದ ನೀರು 35 ಕಿ.ಮೀ. ಉದ್ದದ ಶರಾವತಿ ಕೊಳ್ಳದಲ್ಲಿ ತುಂಬಿಕೊಳ್ಳಲಿದ್ದು ಗೇರಸೊಪ್ಪಾ ಆಣೆಕಟ್ಟಿನಲ್ಲಿ ನೀರು 10 ಅಡಿ ಕಡಿಮೆ ಇದ್ದು 2 ಟಿ.ಎಂ.ಸಿ. ನೀರನ್ನು ಸಂಗ್ರಹಿಸಿಕೊಳ್ಳಲಿದೆ. ಗೇರಸೊಪ್ಪೆಯಲ್ಲಿ ವಿದ್ಯುತ್ ಉತ್ಪಾದಿಸಿ ನೀರು ಗೇರುಸೊಪ್ಪೆಯಿಂದ ಹೊನ್ನಾವರದ ವರೆಗಿನ ಕೊಳ್ಳಕ್ಕೆ ಹರಿದು ಬರಲಿದೆ.

ಹಿಂದಿನ ಲೆಕ್ಕಾಚಾರದಲ್ಲಿ 25000 ಕ್ಯೂಸೆಕ್ಸ್ ನೀರು ಹೊರ ಬಿಟ್ಟರೂ ಶರಾವತಿ ಕೊಳ್ಳದಲ್ಲಿ ಪಾತಳಿ ಮಟ್ಟದಲ್ಲಿ ನೀರು ಹರಿಯಲಿದೆ. ಇನ್ನೂ ಹೆಚ್ಚು ನೀರು ಬಿಟ್ಟರೇ ಎಲ್ಲಿಯ ತನಕ ನೀರು ಏರಲಿದೆ ಎಂದು ಕೊಳ್ಳದ ಎಡಬಲ ದಂಡೆಗಳಲ್ಲಿರುವ ಮರ ಹಾಗೂ ಕಟ್ಟಡದ ಮೇಲೆ ಗುರುತು ಮಾಡಲಾಗಿದೆ.

ನೀರು ಬಿಟ್ಟ ಪ್ರಮಾಣವನ್ನು ಧ್ವನಿವರ್ಧಕ ಮತ್ತು ಮಾಧ್ಯಮಗಳ ಮುಖಾಂತರ ಪ್ರಚಾರ ಮಾಡುವುದರಿಂದ ಜನಕ್ಕೆ ಸುರಕ್ಷಿತ ಸ್ಥಳಕ್ಕೆ ಹೋಗಲು ಅನುಕೂಲ. ಲಿಂಗನಮಕ್ಕಿಯಲ್ಲಿ ಬಿಟ್ಟ ನೀರು ಗೇರಸೊಪ್ಪೆಗೆ ಬರಲು 12 ತಾಸು ತಗಲುತ್ತದೆ. ಈ ಸಮಯದಲ್ಲಿ ಜನ ಸುರಕ್ಷಿತ ಸ್ಥಳ ಸೇರಬಹುದು. ಈ ಎಲ್ಲ ವಿವರಗಳನ್ನು ಶರಾವತಿ ಕೊಳ್ಳದ ಜನಕ್ಕೆ ಪ್ರತಿವರ್ಷ ನೀಡಲಾಗುತ್ತಿದೆ.

ಇಷ್ಟು ಪೂರ್ವ ತಯಾರಿ ಇದ್ದರೂ ಅಕಸ್ಮಾತ ಲಿಂಗನಮಕ್ಕಿ ಆಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಮೇಘಸ್ಪೋಟದಂತಹ ಘಟನೆ ಸಂಭವಿಸಿ ಆಣೆಕಟ್ಟಿಗೆ 4-5 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದರೆ ಅಷ್ಟು ನೀರನ್ನು ಸ್ವಲ್ಪ ಸ್ವಲ್ಪವಾಗಿ ಬಿಡಬೇಕಾಗುತ್ತದೆ.

ಆ ಸಮಯದಲ್ಲಿ ಶರಾವತಿ ಕೊಳ್ಳದಲ್ಲಿರುವ, ಶರಾವತಿಗೆ ಸೇರುವ ಕಲ್ಕಟ್ಟೆ, ಮಾಗೋಡು, ಹೈಗುಂದ, ಹಡಿನಬಾಳ ಹೊಳೆಗಳಿಗೆ ನೆರೆ ಬರುವಷ್ಟು ಮಳೆ ಪಶ್ಚಿಮ ಘಟ್ಟದಲ್ಲಿ ಸುರಿದರೆ, ಅಮವಾಸ್ಯೆಯ ಭರ್ತಿ ಸಮಯವಾದರೆ ಅರಬ್ಬಿ ಸಮುದ್ರ ನೀರು ಸ್ವೀಕರಿಸಲು ನಿಧಾನ ಮಾಡಿದರೆ ಗೇರಸೊಪ್ಪೆಯಿಂದ ಹೊನ್ನಾವರದ ವರೆಗಿನ ತಗ್ಗು ಪ್ರದೇಶ ಮುಳುಗಲಿದೆ.

ಲಿಂಗನಮಕ್ಕಿ ಇತಿಹಾಸದಲ್ಲಿ 1982ರಲ್ಲಿ ಮಾತ್ರ ಇಂತಹ ಘಟನೆ ನಡೆದಿತ್ತು. ಈಗ ಎಲ್ಲರೂ ಪಾಠ ಕಲಿತಿದ್ದಾರೆ. ಪರಿಣಾಮಕಾರಿಯಾಗಿ ನೆರೆ ನಿಯಂತ್ರಣ ಆಗುವ ವಿಶ್ವಾಸವಿದೆ ಎಂಬುದು ಶರಾವತಿ ಕೊಳ್ಳದ ಜನರ ಅಭಿಪ್ರಾಯ. ಜಿಲ್ಲಾಡಳಿತ, ತಾಲೂಕಾ ಆಡಳಿತವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೆರೆ ಸಂದರ್ಭ ಎದುರಿಸಲು ಸಜ್ಜುಗೊಳಿಸಿದ್ದು ಲಿಂಗನಮಕ್ಕಿ ಗೇರಸೊಪ್ಪಾಕ್ಕೆ ಭೇಟಿ ನೀಡಿ ಬಂದಿದ್ದಾರೆ. ಶರಾವತಿ ಕೊಳ್ಳದಲ್ಲಿ ಸಹಜ ಕಳವಳ, ಕುತೂಹಲ ಆರಂಭವಾಗಿದ್ದರೆ ನಾಡಿನಲ್ಲಿ ಜೋಗದ ಅಬ್ಬರ ಕಾಣುವ ಕುತೂಹಲ ಮೂಡಿದೆ.

ಗೇರಸೊಪ್ಪಾದಿಂದ ಹೊನ್ನಾವರದವರೆಗಿನ ಶರಾವತಿ ಕೊಳ್ಳದಲ್ಲಿ ನೀರು ಬಿಟ್ಟಾಗ ಎಷ್ಟು ಏರಿಕೆ ಆಗಲಿದೆ ಎಂಬುದನ್ನು ಬಣ್ಣಗಳಿಂದ ಎಡಬಲ ದಂಡೆಗಳಲ್ಲಿ ಗುರುತಿಸಲಾಗಿದೆ.

50000 ಕ್ಯೂಸೆಕ್ಸ್ ನೀರು ಬಿಟ್ಟರೆ ನಂ. 1 (ಬಿಳಿ ಬಣ್ಣ), 75000 ಕ್ಯೂಸೆಕ್ಸ್ ಬಿಟ್ಟರೆ ನಂ. 2 (ಹಸಿರು ಬಣ್ಣ), 100000 ಕ್ಯೂಸೆಕ್ಸ್ ಬಿಟ್ಟರೆ ನಂ. 3 (ನೀಲಿ ಬಣ್ಣ), 150000 ಕ್ಯೂಸೆಕ್ಸ್ ಬಿಟ್ಟರೆ ನಂ. 4 (ಹಳದಿ ಬಣ್ಣ), 200000 ಕ್ಯೂಸೆಕ್ಸ್ ಬಿಟ್ಟರೆ ನಂ. 5 (ಕೆಂಪು ಬಣ್ಣ). ಇದನ್ನು ಗಮನಿಸಿ ಕೊಳ್ಳದ ಜನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.

 

ಟಾಪ್ ನ್ಯೂಸ್

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Udupi ಗೀತಾರ್ಥ ಚಿಂತನೆ-30; ಭಗವಂತ “ಆಂಶಿಕ’ ಅಲ್ಲ, “ಸರ್ವ’

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Church ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Kinnigoli: ರಿಕ್ಷಾದಡಿ ಬಿದ್ದ ತಾಯಿಯನ್ನು ರಕ್ಷಿಸಿದ ಪುತ್ರಿ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Heavy Rain: ಸುಬ್ರಹ್ಮಣ್ಯದಲ್ಲಿ ಹೆದ್ದಾರಿ ಜಲಾವೃತ

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು

Aranthodu ರಿಕ್ಷಾ ಢಿಕ್ಕಿ: ಸ್ಕೂಟಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bhat-bg

Bhatkal;ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಬಾಲಕನ ರಕ್ಷಣೆ

ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

Fishing ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

arrested

Ganesh Chaturthi ಪೋಸ್ಟ್‌ ಡಿಲೀಟ್‌: ಪ್ರಾಂಶುಪಾಲ ಸೆರೆ

1-tkp

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

1-aaaaaaaa

Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ

ED

Amtech Group 5 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: 27,000 ಕೋಟಿ ವಂಚನೆ

brij Bhushan

Wrestlers ವಿರುದ್ಧ ಹೇಳಿಕೆ ಬೇಡ: ಬ್ರಜ್‌ ಭೂಷಣ್‌ಗೆ ಬಿಜೆಪಿ ವರಿಷ್ಠರ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.