ಐ ಬೋರ್ಡ್ ಡ್ರೋಣ್ ಹುಡುಕಾಟದ ವರದಿ; ಟ್ರಕ್ ನದಿಯಲ್ಲಿ ಇರುವುದು ಖಚಿತ; ಜಿಲ್ಲಾಧಿಕಾರಿ

ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದ ಸದಸ್ಯನಿಗೆ ಗಾಯ

Team Udayavani, Jul 27, 2024, 6:03 PM IST

4

ಕಾರವಾರ: ಐ ಬೋರ್ಡ್ ಡ್ರೋಣ್ ಹುಡುಕಾಟ ಹಾಗೂ ನೇವಿಯ ಸೋನಾರ್ ಇಮೇಜ್ , ಮ್ಯಾಗ್ನೆಡ್ ಲೈನರ್  ವರದಿಗಳನ್ನು ಪುಣೆಯ ಸಂಸ್ಥೆಯೊಂದರ ತಜ್ಞರು ವಿಶ್ಲೇಷಣೆ ಮಾಡಿ ವರದಿ ಸಲ್ಲಿಸಿದ್ದಾರೆ. ಟ್ರಕ್ ನದಿಯಲ್ಲಿ ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.

ಶಿರೂರುನಲ್ಲಿ ಮಾಧ್ಯಮಗಳ ಜೊತೆ‌ ಮಾತನಾಡಿದ ಅವರು, ದೆಹಲಿಯ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ನವರು ಗಂಗಾವಳಿ ನದಿಯಲ್ಲಿನ ಅವಶೇಷಗಳ ಬಗ್ಗೆ ಅಡ್ವಾನ್ಸ್ಡ್ ಐ ಬೋರ್ಡ್ ಡ್ರೋಣ್ ಬಳಸಿ ಮಾಡಿದ ಅಧ್ಯಯನದ ವರದಿ ಬಂದಿದೆ ಎಂದಿದ್ದಾರೆ.

ಈಗ ನದಿಯಾಳದಲ್ಲಿರುವ ಟ್ರಕ್ ತಲುಪುವುದು ಹೇಗೆ ಎಂಬ ಚಿಂತನೆ ನಡೆದಿದೆ. ನದಿಯಲ್ಲಿ ಬಿದ್ದ ಕಲ್ಲು ಮಣ್ಣಿನ ರಾಶಿ ಪಕ್ಕದಲ್ಲಿ ನಾಲ್ಕು ಅವಶೇಷಗಳಿವೆ . ನದಿಯ ದಡದಿಂದ 132 ಮೀಟರ್ ದೂರದಲ್ಲಿ ಟ್ರಕ್ ಇದೆ. ಅದರಲ್ಲಿ ಅರ್ಜುನ್ ಸಹ ಇರಬಹುದು. 110 ಮೀಟರ್ ದೂರದಲ್ಲಿ ಒಂದು ಮೆಟಲ್ ವಸ್ತು , 65 ಮೀಟರ್ ದೂರದಲ್ಲಿ ಒಂದು ಟ್ಯಾಂಕರ್ ಚಸ್ಸಿ, 165 ಮೀಟರ್ ದೂರದಲ್ಲಿ ಒಂದು ರೇಲಿಂಗ್ ಇದೆ. ಇವುಗಳನ್ನು ಮೇಲೆತ್ತಲು‌ ನದಿಯ ನೀರಿನ ವೇಗ ಅಡ್ಡಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಗೋವಾದಿಂದ ಪ್ಯಾಂಟೋನ್ ಬರಬೇಕಿತ್ತು. ಅದು ತಾಂತ್ರಿಕ ಕಾರಣದಿಂದ ಬರಲು ತಡವಾಗಿದೆ. ಶನಿವಾರ ರಾತ್ರಿ ಅದು ತಲುಪಬಹುದು.‌ ಅದು ಬಂದ ನಂತರ ನೇವಿ ಮತ್ತೆ ಕಾರ್ಯಾಚರಣೆ ಮಾಡಲಿದೆ. ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಗೆ ಸಹ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲಿಯ ತನಕ ಮಲ್ಪೆಯ ಈಶ್ವರ್ ಹಾಗೂ ಗೆಳೆಯರ ತಂಡ ಟ್ರಕ್ ಹಾಗೂ ಅದರೊಳಗೆ ಇರಬಹುದಾದ‌ ಅರ್ಜುನನ್ನು ತರಲು ಪ್ರಯತ್ನಿಸಲಿದೆ. ಬಂದರು ಇಲಾಖೆಯ ಟಗ್ ತರಲು ಪ್ರಯತ್ನ‌ ನಡೆದಿದೆ ಎಂದರು.‌ ಕಾರ್ಯಾಚರಣೆ ಮುಂದವರಿಯಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.‌

ಸೇನಾಪಡೆಯ ಮೇಜರ್ ಅಭಿಷೇಕ ಕಶ್ಯಪ, ನೌಕಾಪಡೆಯ ಲೆಫ್ಟಿನೆಂಟ್  ಶಾಶ್ವತ ಸಿಂಗ್ , ಎನ್ ಡಿ ಆರ್ ಎಫ್ ನ ಅರುಣ್ ದ್ವೀವೇದಿ ಜಿಲ್ಲಾಧಿಕಾರಿಯ ಜೊತೆಗೆ ಇದ್ದರು.

ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದ ಸದಸ್ಯನಿಗೆ ಗಾಯ:

ಅಂಕೋಲಾ: ಶಿರೂರು ಗುಡ್ಡ ಕುಸಿತ (Shiroor Hill Slide) ಸ್ಥಳಕ್ಕೆ ಕಾರ್ಯಾಚರಣೆ ಆಗಮಿಸಿದ ಮುಳುಗು ತಜ್ಞರ ಈಶ್ವರ ಮಲ್ಪೆ ತಂಡದ ಓರ್ವ ಸದಸ್ಯನಿಗೆ ಕಾರ್ಯಾಚರಣೆ ವೇಳೆ ಬಿದ್ದು ಗಾಯಗಳಾದ ಘಟನೆ ನಡೆದಿದೆ.

ಈಶ್ವರ ಮಲ್ಪೆ ತಂಡದ ದೀಪು ಎನ್ನುವರಿಗೆ ಗಾಯಗಳಾಗಿದೆ. ಇವರು ಶಿರೂರಿನ ಗುಡ್ಡ ಕುಸಿತ ಸ್ಥಳದಲ್ಲಿ ಡೈವಿಂಗ್ ಕಾರ್ಯಚರಣೆ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು ಆಂಬ್ಯುಲೆನ್ಸ ಮೂಲಕ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಟಾಪ್ ನ್ಯೂಸ್

Ajit Doval; India’s Doval intervention to peace talk with Russia-Ukraine

Ajit Doval; ರಷ್ಯಾ – ಉಕ್ರೇನ್‌ ಯುದ್ದ ನಿಲ್ಲಿಸಲು ಭಾರತದ ದೋವಲ್‌ ಮಧ್ಯಸ್ಥಿಕೆ

4-ganapathi

Ganesh Chaturthi: ಗಜಮುಖನೆ ಗಣಪತಿಯೇ ನಿನಗೆ ವಂದನೆ

Assam; ಹೊಸ ಆಧಾರ್‌ ಕಾರ್ಡ್‌ ಬೇಕಾದರೆ ಎನ್‌ಆರ್‌ಸಿ ಸಂಖ್ಯೆ ನಮೂದಿಸಿ: ಹಿಮಂತ ಬಿಸ್ವಾ

Assam; ಹೊಸ ಆಧಾರ್‌ ಕಾರ್ಡ್‌ ಬೇಕಾದರೆ ಎನ್‌ಆರ್‌ಸಿ ಸಂಖ್ಯೆ ನಮೂದಿಸಿ: ಹಿಮಂತ ಬಿಸ್ವಾ

3-ganesha

Ganesh Chaturthi: ‘ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ’ ಗಣಪನ ಆರಾಧಿಸೋಣ…

Taslima Nasrin

Taslima Nasrin; ಭಾರತದಲ್ಲಿ ನನ್ನ ಭವಿಷ್ಯದ ಬಗ್ಗೆ ಭಯವಿದೆ: ಬಾಂಗ್ಲಾ ಲೇಖಕಿ ನಸ್ರೀನ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Ajit Doval; India’s Doval intervention to peace talk with Russia-Ukraine

Ajit Doval; ರಷ್ಯಾ – ಉಕ್ರೇನ್‌ ಯುದ್ದ ನಿಲ್ಲಿಸಲು ಭಾರತದ ದೋವಲ್‌ ಮಧ್ಯಸ್ಥಿಕೆ

4-ganapathi

Ganesh Chaturthi: ಗಜಮುಖನೆ ಗಣಪತಿಯೇ ನಿನಗೆ ವಂದನೆ

Assam; ಹೊಸ ಆಧಾರ್‌ ಕಾರ್ಡ್‌ ಬೇಕಾದರೆ ಎನ್‌ಆರ್‌ಸಿ ಸಂಖ್ಯೆ ನಮೂದಿಸಿ: ಹಿಮಂತ ಬಿಸ್ವಾ

Assam; ಹೊಸ ಆಧಾರ್‌ ಕಾರ್ಡ್‌ ಬೇಕಾದರೆ ಎನ್‌ಆರ್‌ಸಿ ಸಂಖ್ಯೆ ನಮೂದಿಸಿ: ಹಿಮಂತ ಬಿಸ್ವಾ

3-ganesha

Ganesh Chaturthi: ‘ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ’ ಗಣಪನ ಆರಾಧಿಸೋಣ…

Taslima Nasrin

Taslima Nasrin; ಭಾರತದಲ್ಲಿ ನನ್ನ ಭವಿಷ್ಯದ ಬಗ್ಗೆ ಭಯವಿದೆ: ಬಾಂಗ್ಲಾ ಲೇಖಕಿ ನಸ್ರೀನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.