ಬಳಕೆಗೆ ಬಾರದಂತಾದ ಕೊಂಡವಾಡೆ


Team Udayavani, Dec 21, 2019, 5:04 PM IST

uk-tdy-1

ಶಿರಸಿ: ಒಂದೆಡೆ ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳ ಕಾಟ, ಇನ್ನೊಂದೆಡೆ ಬಿಡಾಡಿ ದನಗಳಿಗೆ ನೆಲೆ ಕೊಡಬೇಕಿದ್ದ ಕೊಂಡವಾಡೆಗೆ ಅನಾಥಭಾವದ ಸಂಕಟ. ನಗರದಲ್ಲಿ ಬಿಡಾಡಿ ದನಗಳ ಹಾವಳಿ ತಡೆಯಲು ಕಳೆದ ಮೂರು ವರ್ಷಗಳ ಹಿಂದೆ 8 ಲಕ್ಷ ರೂ.ಗೂ ಅಧಿಕ ಖರ್ಚು ಮಾಡಿ ಕಟ್ಟಿದ ಕೊಂಡವಾಡೆ ಅಪೂರ್ಣವಾಗಿ, ಈಗ ಬಳಕೆಗೂ ತತಕ್ಷಣಕ್ಕೆ ಬಾರದಂತಹ ಸ್ಥಿತಿಗೆ ತಲುಪಿದೆ.

ಬೇಕಾಬಿಟ್ಟಿ ಜಾನುವಾರುಗಳು ಇರಬೇಕಿದ್ದ ಕಡೆ ಬೇಕಾಬಿಟ್ಟಿ ಗಿಡಗಳು ಬೆಳೆದಿವೆ. ಪಟ್ಟಣದ ರಾಘವೇಂದ್ರ ಮಠದ ಸಮೀಪದಲ್ಲಿರುವ ನಗರಸಭೆ ಅಂದಿನ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾಲದಲ್ಲೇ ನಿರ್ಮಾಣವಾಗಿದ್ದ ಕೊಂಡವಾಡೆ ಅರ್ಥಾತ್‌ ದನದ ದೊಡ್ಡಿ ಇಂದು  ಅನಾಥವಾಗಿದೆ. ನಿರ್ವಹಣಾ ಅನುದಾನದ ಕೊರತೆಯಿಂದ ಬಳಲುತ್ತಲೇ ಹಾಕಿದ ಹಣವೂ ದಂಡವಾಗಿ, ನಿರ್ವಹಣೆಗೂ ಬಾರದಂತಾಗಿದೆ. ಇತ್ತ ಬಿಡಾಡಿ ದನಗಳು ನಗರದಲ್ಲಿ ನೂರಕ್ಕೂ ಹೆಚ್ಚಿದ್ದು, ಅವುಗಳ ಹಾವಳಿ ಕೂಡ ಮಿತಿ ಮೀರಿದೆ. ರಾತ್ರಿ ಹಗಲು ಸಂಚಾರ ಕೂಡ ಆತಂಕ ಮೂಡಿಸಿದೆ. ಜಾನುವಾರುಗಳ ನಡುವಿನ ಕಾದಾಟ ಕೂಡ ಪಾದಚಾರಿಗಳಿಗೂ ಅಪಾಯದಂತಿವೆ.

2015-16ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೊಂಡವಾಡೆಯಲ್ಲಿ ತಂದು ಕಟ್ಟುವ ಬಿಡಾಡಿ ದನಗಳ ನಿರ್ವಹಣೆ, ಆಹಾರ ವೆಚ್ಚ ಹಾಗೂ ದಂಡ ದರ ನಿಗದಿಪಡಿಸಿ ಠರಾಯಿಸಲಾಗಿತ್ತು. ಆದರೆ ನಿರ್ವಹಣೆಗೆ ದಂಡದ ಹಣ ನೆಚ್ಚಿಕೊಂಡು ಮುನ್ನಡೆಸುವುದು, ಬಿಡಾಡಿ ದನ ಹಿಡಿದು ತರುವುದು, ಪ್ರತ್ಯೇಕ ಸಿಬ್ಬಂದಿ, ನಿರ್ವಹಣಾ ವೆಚ್ಚಕ್ಕೆ ವ್ಯವಸ್ಥೆ ಆಗದೇ ಇದ್ದದ್ದೂ ಬಳಕೆಗೆ ಬಾರದಂತಾಗಿದೆ.

ಸರಿಸುಮಾರು 50 ಜಾನುವಾರುಗಳು ಇರಬಹುದಾದ ಕೊಂಡವಾಡೆಗೆ ಸುತ್ತಲೂ ಗೋಡೆ, ಕಂಬಗಳನ್ನು ನಿರ್ಮಿಸಲಾಗಿದೆ. ಆದರೆ ಮುಖ್ಯವಾಗಿ ಮೇಲ್ಛಾವಣಿ ಹಾಕಿಲ್ಲದಿರುವುದೂ ದನ ಬಿಡಲು ಆಗುವುದಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ. ತಕ್ಷಣ ನಗರಸಭೆ ಕೊಂಡವಾಡೆಯನ್ನು ದುರಸ್ತಿಗೊಳಿಸಿ, ಬಳಕೆಗೆ ಯೋಗ್ಯವಾಗಿಸಿ, ಜಾನುವಾರುಗಳ ನಿರ್ವಹಣೆಗೆ ಕೂಡ ಅನುದಾನ ಹೊಂದಿಸಿಕೊಂಡು ನಗರದ ಜನರಿಗೆ ಬಿಡಾಡಿ ದನಗಳ ಕಾಟ ತಪ್ಪಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಲಾಗಿದೆ.

ಟಾಪ್ ನ್ಯೂಸ್

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.