ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

ಹೊನ್ನಾವರದಲ್ಲಿ ರಸ್ತೆಯಲ್ಲೇ ಬಸ್‌ನಿಲ್ದಾಣ,ಚಾಲಕ-ನಿರ್ವಾಹಕ-ಪ್ರಯಾಣಕರಿಗೆ ತಪ್ಪದ ಗೋಳು

Team Udayavani, Oct 30, 2020, 6:38 PM IST

ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

ಹೊನ್ನಾವರ: ಹಿಂದಿನ ತಲೆಮಾರಿನ ಜನಪ್ರತಿನಿಧಿಗಳು ಸಾರ್ವಜನಿಕ ಬಳಕೆಗಾಗಿ ಸ್ಥಳ ಕಾದಿಡದ ಕಾರಣ ಇಂದಿನ ತಲೆಮಾರಿನವರು ರಸ್ತೆಯಲ್ಲೇ ಬಸ್‌ ಸ್ಟ್ಯಾಂಡ್‌ ನೋಡುವಂತಾಗಿದೆ. ಬಸ್‌ ನಿಯಂತ್ರಕರು ರಿಕ್ಷಾ ದವರು ಕೂರುವ ಕೋಣೆಯಲ್ಲಿ ಕೂರಬೇಕಾಗಿದೆ.

ನಗರಕ್ಕೆ ನೂತನ ಬಸ್‌ ನಿಲ್ದಾಣ ಮಂಜೂರು ಆಗಿರುವುದರಿಂದ ಹಂಗಾಮಿ ಬಸ್‌ ನಿಲ್ದಾಣಕ್ಕೆ ಪೊಲೀಸ್‌ ಮೈದಾನದಲ್ಲಿ ಸ್ಥಳ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಶೆಡ್‌ ನಿರ್ಮಾಣವಾಗಿ ಬಸ್‌ ಸ್ಟ್ಯಾಂಡ್‌ ಸ್ಥಳಾಂತರವಾಗಿತ್ತು. ಇಲಾಖೆಗಳಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಪೊಲೀಸರು ತಕರಾರು ಮಾಡಿ ಬಸ್‌ ಸ್ಟ್ಯಾಂಡ್‌ ಓಡಿಸಿದರು. ಬಸ್‌ ಸ್ಟ್ಯಾಂಡ್‌ ಮರಳಿ ಮೊದಲಿನ ಸ್ಥಳಕ್ಕೆ ಬಂತು. ಗುತ್ತಿಗೆದಾರರು ಅಲ್ಲಿಂದ ಹೊರಹಾಕಿದ ಮೇಲೆ ರಸ್ತೆಗೆ ಬಂದಿದೆ. ನಗರದಲ್ಲೆಲ್ಲೂ ಹಂಗಾಮಿ ಬಸ್‌ ಸ್ಟ್ಯಾಂಡ್‌ ಗೆ ಸ್ಥಳವಿಲ್ಲ. 3ಕಿಮೀ ದೂರ ಪ್ರಭಾತನಗರದಲ್ಲಿ ಅರಣ್ಯ ಇಲಾಖೆಯ ಭೂಮಿ ಇದೆ.

ಫೋನು, ಫ್ಯಾನು, ಲೈಟು ಯಾವುದೂ ಇಲ್ಲದ ಇಬ್ಬರು ಕೂರುವ ಗೂಡಿನಲ್ಲಿ ನಿಯಂತ್ರಕರು ಮಾತ್ರ ಕೂರಬಹುದು. ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕರು ಅಂಗಡಿ ಬಾಗಿಲಿನಲ್ಲಿ ನಿಲ್ಲಬೇಕು. ಚಹಾ ಕುಡಿಯಲು ಒಂದು ಸರಿಯಾದ ಅಂಗಡಿಯಿಲ್ಲ. ದೂರದೂರ ಬಸ್‌ ನಿಲ್ಲಿಸಿ ಬರುವ ಚಾಲಕರು ಫೋನ್‌ ಬಂದ ಮೇಲೆ ಬಸ್‌ ಗಳನ್ನು ತರುತ್ತಾರೆ. ನಿತ್ಯ 350 ಬಸ್‌ಗಳು ಓಡಾಡುವಾಗ ಒಂದೇ ಬಾರಿ ನಾಲ್ಕು ಬಸ್‌ ಬಂದರೆ ನಿಲ್ಲಲು ಸ್ಥಳವಿಲ್ಲ. ಮಧ್ಯೆ ಟೆಂಪೋಗಳು ನುಸುಳುತ್ತವೆ, ಇಷ್ಟು ವಿಸ್ತಾರವಾದ ಸ್ಥಳ ಬೇರೆ ಇಲ್ಲ. ಶಾಸಕ ದಿನಕರ ಶೆಟ್ಟಿ ಪೊಲೀಸ್‌ ಮೈದಾನ ಸಿಗುವ ಭರವಸೆ ಹೊಂದಿದ್ದರು. ಅವರಿಗೂ ಬೇಜಾರಾಗಿದೆ. ಈಗ ದಿನಕರ ಶೆಟ್ಟಿಯವರು ಕಟ್ಟಿಸಿಕೊಟ್ಟ

ರಿಕ್ಷಾ ವಿಶ್ರಾಂತಿ ಶೆಡ್‌ನ‌ಲ್ಲಿ ಬಸ್‌ ನಿಯಂತ್ರಕರು ಕೂತಿದ್ದು ಬೋರ್ಡಿನ ಮೇಲಿದ್ದ ದಿನಕರ ಶೆಟ್ಟಿಯವರ ಮತ್ತು ಬಿಜೆಪಿ ಕಮಲದ ಚಿಹ್ನೆ ಮೇಲೆ ಕಾಗದ ಅಂಟಿಸಿದ್ದು ಯಾಕೆ ಎಂಬುದು ಅರ್ಥವಾಗಲಿಲ್ಲ. ರಿಕ್ಷಾದವರು ಉದಾರವಾಗಿ ಬಿಟ್ಟುಕೊಡದಿದ್ದರೆ ನಿಯಂತ್ರಕರೂ ಹಾದಿ ಮೇಲೆ ನಿಲ್ಲಬೇಕಿತ್ತು. ಬಂದರದಲ್ಲಿ ಸ್ಥಳವಿದೆ, ಅಲ್ಲಿ ಹೋಗಿ ಬರಲು ರಸ್ತೆ ಕಿರಿದಾಗಿದೆ. ಈ ಹಂಗಾಮಿ ವ್ಯವಸ್ಥೆಯನ್ನು ಜನ ಒಪ್ಪಿಕೊಂಡಿದ್ದಾರೆ. ಆದರೆ ಬಸ್‌ ಸ್ಟ್ಯಾಂಡ್‌ ನಿರ್ಮಾಣವಾಗಲು ಕನಿಷ್ಠ ಎರಡು ವರ್ಷ ಬೇಕು. ಅಷ್ಟರವರೆಗೆ ಸಮಸ್ಯೆಯ ಸರಮಾಲೆ ತಪ್ಪದು. ಹಂಗಾಮಿ ಬಸ್‌ ಸ್ಟ್ಯಾಂಡ್‌ ನಿರ್ಮಾಣವಾದ ಮೇಲೆ ಹಳೆಯ ಬಸ್‌ ಸ್ಟ್ಯಾಂಡ್‌ ಕಳಚಿದ್ದರೆ ಸರಿಯಾಗುತ್ತಿತ್ತು. ಯಾರ ಮಾತೂ ಕೇಳದ ಹಳೆ ಬಸ್‌ ಸ್ಟ್ಯಾಂಡ್‌ ಮುರಿಯುವವರು ಮುರಿದುಕೊಂಡು ಹೋದರು, ಹೊಸದು ಕಟ್ಟುವವರು ಹೊರಹಾಕಿದರು. ಸಾರಿಗೆ ಅಧಿಕಾರಿಗಳು ತಮಾಷೆ ನೋಡುತ್ತಿದ್ದಾರೆ. ಪತ್ರಿಕೆಗಳು ಸಲಹೆ ನೀಡಿದರೂ ಕಾಲಕಸ ಮಾಡಿದರು. ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನ ಬಯಸಿದ್ದಾರೆ. ಸದ್ಯಕ್ಕಂತೂ ಬಸ್‌ ಸ್ಟ್ಯಾಂಡ್‌ ಗೆ ರಸ್ತೆಯೇ ವಿಳಾಸ, ರಸ್ತೆಯಲ್ಲೇ ವಾಸ.

 

ಜೀಯು, ಹೊನ್ನಾವರ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.