![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 30, 2022, 9:47 AM IST
ಅಂಕೋಲಾ: ಉತ್ತರ ಕನ್ನಡದ ಅಂಕೋಲಾಕ್ಕೂ ಸಿಕ್ಕಿಂ ರಾಜ್ಯಕ್ಕೂ ಸಾವಿರಾರು ಕಿಮೀ ದೂರ. ಆದರೆ ಕರಿಈಸಾಡು ಮಾವು ದೂರದ ಸಿಕ್ಕಿಂಗೂ ಅಂಕೋಲಾಗೂ ಸಂಪರ್ಕ ಸೇತುವೆಯಾಗಿದೆ. ಕರಿಈಸಾಡಿನ ಘಮ ಸಿಕ್ಕಿಂವರೆಗೂ ಹೋಗಿದೆ.
ಮೊದಲಿನಿಂದಲೂ ಅಂಕೋಲಾದ ಕರಿಈಸಾಡು ಪ್ರಸಿದ್ಧಿಯಾಗಿದ್ದು, ಜಿಲ್ಲೆಯ ಬೇರೆ ಬೇರೆ ಭಾಗದಿಂದ ಹಾಗೂ ಹೊರ ಜಿಲ್ಲೆಗಳಿಂದ ಬಂದು ಕೊಂಡೊಯ್ಯುವುದು ಸಹಜ. ಜತೆಗೆ ಕಳೆದ ಮೇ 21 ಮತ್ತು 22 ರಂದು ಅಂಕೋಲಾ ಬೆಳೆಗಾರರ ಸಮಿತಿಯಿಂದ ಮಾವಿನ ಮೇಳವನ್ನು ಆಯೋಜಿಸಿದ್ದರು. ಇದು ಮತ್ತಷ್ಟು ಪ್ರಚಾರ ನೀಡಿದೆ.
ಮೇಳದಲ್ಲಿ ಅಪಾರ ಪ್ರಮಾಣದಲ್ಲಿ ಮಾವು ವ್ಯಾಪಾರವಾಗಿ ರೈತರಿಗೆ ಮತ್ತು ಗ್ರಾಹಕರಿಗೆ ಸಂತೋಷವಾಗಿತ್ತು. ಮಾವು ಮೇಳದ ನಂತರ ಅನೇಕ ರೈತರಿಗೆ ಮಾವು ಪ್ರಿಯರು ಸಂಪರ್ಕಿಸಿ ಬೆಳೆಗಾರರ ಮನೆಗೆ ಬಂದು ಮಾವನ್ನು ಕೊಂಡೊಯ್ಯುತ್ತಿದ್ದಾರೆ. ಮುಂದಿನ ವರ್ಷವೂ ಬರುತ್ತೇವೆ, ನಮಗೆ ಮಾವು ಕಾದಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಈ ಮಾವಿನ ಮೇಳ ದೂರದ ಸಿಕ್ಕಿಂವರೆಗೂ ಕರಿಈಸಾಡುವಿನ ಘಮ ಪಸರಿಸಿದೆ. ಸಿಕ್ಕಿಂ ರಾಜ್ಯದ ಮಾವಿಗೆ ದೂರದ ಗ್ಯಾ೦ಗಟಕನಿಂದ ಬೇಡಿಕೆ ಬಂದಿದ್ದು. ಮಾವು ಮೇಳದಲ್ಲಿ ಭಾಗವಹಿಸಿದ ಬೆಂಗಳೂರಿನ ಡಾ. ನಂದಿನಿ ಡಿ. ಎನ್ನುವವರು ಇನ್ಸ್ಟಾಗ್ರಾಮದಲ್ಲಿ ಅಂಕೋಲೆಯ ಈಶಾಡ ಮಾವಿನ ಬಗ್ಗೆ ಬರೆದಿದ್ದರು. ಇದನ್ನು ನೋಡಿದ ಸಿಕ್ಕಿಂ ರಾಜ್ಯದ ಗ್ಯಾ೦ಗಟಕ ನಿವಾಸಿ ಪ್ರೊ. ಬಿನು ಥೋಮಸ್ ಎನ್ನುವವರು ಬೆಳ೦ಬಾರದ ಮಹಾದೇವ ಗೌಡರನ್ನು ಸಂಪರ್ಕಿಸಿ ಈಶಾಡ ಮಾವಿನ ಹಣ್ಣು ತಮಗೆ ಕಳಿಸುವಂತೆ ಕೇಳಿಕೊಂಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಮಹಾದೇವ ಗೌಡ ಸಿಕ್ಕಿಂಗೆ ಪೋಸ್ಟ್ ಮುಖಾ೦ತರ ಈಷಾಡ ಮಾವಿನ ಕಾಯಿ ಕಳುಹಿಸಿದ್ದಾರೆ.
ಮಹಾದೇವ ಅವರು ಕಳಿಸಿದ ಮಾವು ಸಿಕ್ಕಿಂಗೆ ತಲುಪಲು ಕನಿಷ್ಠ 6 ದಿನ ಹಿಡಿಯಲಿದ್ದು, ಅಲ್ಲಿಯವರೆಗೆ ಅದು ಹಣ್ಣಾಗುತ್ತದೆ. ಅಂಕೋಲಾ ಬೆಳೆಗಾರರ ಸಮಿತಿಯವರ ಶ್ರಮ ಸಾರ್ಥಕವಾಗಿದೆ. ಈ ಮಾವು ಹಾಗೂ ಮೇಳ ಉತ್ತರ ಕನ್ನಡದ ಅಂಕೋಲಾ ಮತ್ತು ದೂರದ ಸಿಕ್ಕಿಂ ನಡುವೆ ನಂಟು ಬೆಳೆಸಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.