ಶಾಸಕ ಸೈಲ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಗೂಂಡಾಗಿರಿಯಂತಿದೆ: ರೂಪಾಲಿ ನಾಯ್ಕ


Team Udayavani, Nov 7, 2023, 2:06 PM IST

ಶಾಸಕ ಸೈಲ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಗೂಂಡಾಗಿರಿಯಂತಿದೆ: ರೂಪಾಲಿ ನಾಯ್ಕ

ಕಾರವಾರ: ಹಾಲಿ ಶಾಸಕ ಸತೀಶ್ ಸೈಲ್ ನಿನ್ನೆ ಅಬಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿರುವುದನ್ನು ನೋಡಿದರೆ ಅವರು ಗೂಂಡಾಗಿರಿ ಮಾಡುವಂತಿದೆ  ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.

ಕಾರವಾರ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು‌.

ಮಾಜಾಳಿಯ ಚೆಕ್ ಪೊಸ್ಟ್ ಬಳಿ ಸ್ಪಿರಿಟ್‌ ಟ್ಯಾಂಕರ್ ವಶಕ್ಕೆ ಪಡೆದಿರುವ ಬಗ್ಗೆ ಶಾಸಕರು ನಿನ್ನೆ ದೊಡ್ಡ ರಂಪಾಟ ಮಾಡಿದ್ದಾರೆ. ಇದರ ಹಿಂದೆ ಏನು ಮರ್ಮ ಅಡಗಿದೆ ಎನ್ನುವುದು ಜನತೆಗೆ ಗೊತ್ತಾಗಬೇಕಿದೆ. ಈ ಬಗ್ಗೆ ತನಿಖೆ ಆಗಬೇಕು‌ ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

ಸತೀಶ್ ಸೈಲ್ ಈಗ ಅಬಕಾರಿ ಅಧಿಕಾರಿ ಹಿಡಿದಿರುವ ಸ್ಪಿರಿಟ್‌ ವ್ಯವಹಾರದಲ್ಲಿ ಯಾರ ಜೊತೆ  ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಗೂಂಡಾಗಿರಿ ನಡೆಯುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಟ್ಯಾಂಕರ್ ಬಿಡುಗಡೆ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಚೆಕ್ ಪೊಸ್ಟ್ ಗೆ ತೆರಳಿ ಶಾಸಕರು ಗೂಂಡಾಗಿರಿ ಮಾಡಿದ್ದಾರೆ. ಒಮ್ಮೆಸ್ಪಿರಿಟ್‌ ಟ್ಯಾಂಕರ್ ಬಿಡುಗಡೆ ಮಾಡುವಂತೆ ಹೇಳುವುದು, ಮತ್ತೊಮ್ಮೆ ಪ್ರಕರಣ ದಾಖಲಿಸುವಂತೆ ಹೇಳುವುದು ಎಷ್ಟು ಸರಿ?  ಇದು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮಾಡುವ ಕೃತ್ಯ ಎಂದರು.

ಶಾಸಕರು ಗಲಾಟೆ ಮಾಡುವ ಸಮಯಲ್ಲಿ ಆ ಅಧಿಕಾರಿ ಮೊಬೈಲ್ ವಿಡಿಯೋ ಮಾಡಿಕೊಂಡಾಗ, ಶಾಸಕರು ಯಾಕೆ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನ ಮಾಡಿದರು ಎಂದು ಮಾಜಿ ಶಾಸಕಿ ರೂಪಾಲಿ ಪ್ರಶ್ನಿಸಿದರು.

ಈ ಹಿಂದೆ ಕಾರವಾರದಲ್ಲಿ ಗೂಂಡಾಗಿರಿ ನಡೆದದ್ದನ್ನು ನೋಡಿದ್ದೇವೆ . ಆದರೆ ನಾನು ಶಾಸಕಿಯಾದ ಬಳಿಕ ಗೂಂಡಾಗಿರಿ ನಿಂತಿತ್ತು. ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಶಾಸಕರು ಮಾಡಿರುವ ವರ್ತನೆಯನ್ನ ನೋಡಿದ್ದರೆ, ಮತ್ತೆ ಕಾರವಾರದಲ್ಲಿ ಹಿಂದಿನ ಗೂಂಡಾಗಿರಿ ಮರುಕಳಿಸುವಂತೆ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರವಾರದಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಹೇಳಿದರು.

ಸರಕಾರಿ ಅಧಿಕಾರಿ ಒಳ್ಳೆ ಕೆಲಸ ಮಾಡುವಾಗ ತಡೆಯುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ‌ಸರಕಾರ ಅಧಿಕಾರ ಬಂದ ಬಳಿಕ ಕಾರವಾರ ಸೇರಿದಂತೆ‌ ರಾಜ್ಯಾದ್ಯಂತ ರೌಡಿಸಂ ಹೆಚ್ಚಾಗಿದೆ. ಸರಕಾರಿ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್,‌ವಕೀಲ ಎನ್ .ವಿ.ನಾಯ್ಕ  ಅವರ ಜೊತೆಗೆ ಇದ್ದರು.

ಟಾಪ್ ನ್ಯೂಸ್

IMD

IMD; ರಾಜ್ಯದಲ್ಲಿ ಮಳೆಗೆ ವಿರಾಮ, ಒಣ ಹವೆ ಮುನ್ಸೂಚನೆ

Udupi-prachya

Udupi: ಪುನರಪಿ ಭಾರತ ವಿಶ್ವಗುರುವಾಗಲು ಪ್ರಾಚ್ಯವಿದ್ಯಾ ಸಮ್ಮೇಳನ ಸಹಕಾರಿ: ಪುತ್ತಿಗೆ ಶ್ರೀ

siddanna-2

Heavy rain; ಬೆಳೆ ಸಂತ್ರಸ್ತರಿಗೆ ಸಿಎಂ ಅಭಯ:ಸಿದ್ದರಾಮಯ್ಯ ಸೂಚನೆಗಳೇನು?

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

Bee-Bite

Hosanagara: ಹೆಜ್ಜೇನು ದಾಳಿಯಿಂದ ಏಳು ಮಂದಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ

Sagara-HM

Sagara: ರೈತರ ಭೂಮಿ ಹಕ್ಕು ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಸರಕಾರ ಬದ್ಧ: ಜಿ.ಪರಮೇಶ್ವರ್

Kodagu-SP

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhu Bangarappa: ಬಿಜೆಪಿಯ 18 ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ: ಮಧು

Madhu Bangarappa: ಬಿಜೆಪಿಯ 18 ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ: ಮಧು

9

Raju Talikote: ಗುಬ್ಬಿ ಗೂಡು ಕಟ್ಟುವಂತೆ ರಂಗಾಯಣ ಕಟ್ಟುವೆವು

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿUttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

Uttarakannada DC: ದಾಂಡೇಲಿಗೆ ಆಗಮಿಸಿದ ಜಿಲ್ಲಾಧಿಕಾರಿ… ಆಸ್ಪತ್ರೆ, ಶಾಲೆಗಳಿಗೆ ಭೇಟಿ

Uttarakannada DC: ದಾಂಡೇಲಿಗೆ ಆಗಮಿಸಿದ ಜಿಲ್ಲಾಧಿಕಾರಿ… ಆಸ್ಪತ್ರೆ, ಶಾಲೆಗಳಿಗೆ ಭೇಟಿ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

IMD

IMD; ರಾಜ್ಯದಲ್ಲಿ ಮಳೆಗೆ ವಿರಾಮ, ಒಣ ಹವೆ ಮುನ್ಸೂಚನೆ

Udupi-prachya

Udupi: ಪುನರಪಿ ಭಾರತ ವಿಶ್ವಗುರುವಾಗಲು ಪ್ರಾಚ್ಯವಿದ್ಯಾ ಸಮ್ಮೇಳನ ಸಹಕಾರಿ: ಪುತ್ತಿಗೆ ಶ್ರೀ

siddanna-2

Heavy rain; ಬೆಳೆ ಸಂತ್ರಸ್ತರಿಗೆ ಸಿಎಂ ಅಭಯ:ಸಿದ್ದರಾಮಯ್ಯ ಸೂಚನೆಗಳೇನು?

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

BBK11: ಅಣ್ಣ ತಂಗಿಗೆ ಸಂಬಂಧ ಕಟ್ಟಿ ಮಾತನಾಡ್ತಾರೆ.. ಮಂಜು ವಿರುದ್ಧ ಭವ್ಯ ಗಂಭೀರ ಆರೋಪ

Bee-Bite

Hosanagara: ಹೆಜ್ಜೇನು ದಾಳಿಯಿಂದ ಏಳು ಮಂದಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.