![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 22, 2019, 4:11 PM IST
ಶಿರಸಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರವಾಗಿ ಹಮ್ಮಿಕೊಂಡ ಕೊನೆಯ ಬಹಿರಂಗ ಮೆರವಣಿಗೆಯಲ್ಲಿ ಮೋದಿ ಮೋದಿ ಎಂಬ ಕೂಗು ಕೇಳಿ ಬಂದಿದ್ದು ಕೆಲ ಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ರವಿವಾರ ನಗರದ ಮಾರಿಕಾಂಬಾ ದೇವಾಲಯದ ಆವಾರಣದಿಂದ ಮೆರವಣಿಗೆ ಮೂಲಕ ನಗರದ ಪ್ರಮುಖ ಮಾರ್ಗದಲ್ಲಿ ತೆರಳಿ ಮತಯಾಚನೆಯ ಮೆರವಣಿಗೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ಹಮ್ಮಿಕೊಂಡಿತ್ತು. ಎತ್ತಿನ ಗಾಡಿ, ಡೊಳ್ಳಿನ ಕುಣಿತದ ಮೂಲಕ ಶುರುವಾಗಿದ್ದ ಮೆರವಣಿಗೆ ನಡುವೆ ಮಾರಿಕಾಂಬಾ ಬೀದಿಯಲ್ಲೇ ಮೋದಿ ಮೋದಿ ಎಂದು ಐದಾರು ಜನ ಹುಡುಗರು ಕೂಗಿದ್ದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು. ಉಭಯ ಪಕ್ಷಗಳ ಕಾರ್ಯಕರ್ತರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರತಿಯಾಗಿ ಉಭಯ ಪಕ್ಷಗಳ ಕಾರ್ಯಕರ್ತರೂ ರಾಹುಲ್ ರಾಹುಲ್ ಎಂದು ಘೋಷಣೆ ಕೂಗಿದರು.
ಒಂದು ಹಂತದಲ್ಲಿ ಕಾರ್ಯಕರ್ತರು ಮನೆಯ ಮೇಲೆ ನುಗ್ಗಲು ಮುಂದಾದಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಯುವ ಪ್ರಮುಖ ಪ್ರದೀಪ ಶೆಟ್ಟಿ, ದೀಪಕ ದೊಡ್ಡೂರು, ಸಂತೋಷ ಶೆಟ್ಟಿ, ರಮೇಶ ದುಭಾಶಿ ಮುಂದಿನ ಅವಘ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು. ಹತ್ತು ನಿಮಿಷಗಳಿಗೂ ಅಧಿಕ ಕಾಲ ವಾತಾವರಣ ಬಿಸಿಬಿಸಿಯಾಗಿತ್ತು.
ಮೆರವಣಿಗೆ ಶಿವಾಜಿ ಚೌಕ, ಅಂಚೆ ವೃತ್ತದ ಮೂಲಕ ದೇವಿಕೇರೆ ತನಕ ಬಂದಿತು. ಸಮಯದ ಅಭಾವದಿಂದ ರಾಘವೇಂದ್ರ ಮಠದ ಬಳಿ ಅಂತ್ಯಗೊಂಡು ಸಭೆಯಾಗಿ ಪರಿವರ್ತನೆ ಆಗದೇ ಅಂಚೆ ವೃತ್ತದಲ್ಲೇ ಬಹಿರಂಗವಾಗಿ ಮತ ಯಾಚಿಸಲಾಯಿತು. ಅಭ್ಯರ್ಥಿ ಅಸ್ನೋಟಿಕರ್ ಒಮ್ಮೆ ಬದಲಾವಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.