Murdeshwar ; ಸೂರತ್‌ನಿಂದ ವಿಶೇಷ ರೈಲಿನಲ್ಲಿ ಬಂದ 1650 ಜನ ಯಾತ್ರಾರ್ಥಿಗಳು


Team Udayavani, Aug 26, 2023, 8:11 PM IST

1-saddad

ಭಟ್ಕಳ: ಗುಜರಾತಿನ ಸೂರತ್‌ನಿಂದ ವಿಶೇಷ ರೈಲಿನಲ್ಲಿ ಸುಮಾರು1650 ಜನ ಯಾತ್ರಾರ್ಥಿಗಳು ಶನಿವಾರ ಸಂಜೆ ಮುರ್ಡೇಶ್ವರ ದೇವಸ್ಥಾನದ ದರ್ಶನಕ್ಕೆ ಬಂದಿದ್ದು ಅವರನ್ನು ರೈಲ್ವೇ ನಿಲ್ದಾಣದಲ್ಲಿ ರಮೇಶ ಹೆಗಡೆ ಚಿತ್ರಾಪುರ ಹಾಗೂ ಚೈತನ್ಯ ಪಂಡಿತ್ ಚಿತ್ರಾಪುರ ಇವರ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು.

ಗುಜರಾತಿನ ಐಶಾ ಕ್ರಿಯೇಶನ್ಸ್ ಪ್ರೈವೆಟ್ ಲಿಮಿಟೆಡ್‌ನ ಪ್ರಮುಖರಾದ ಸೋನು ಭಾಯ್ ಅವರ ನೇತೃತ್ವದಲ್ಲಿ ನವದುರ್ಗಾ ಸೇವಾ ಸಮಿತಿ ಸೂರತ್ ಇದರ ಸದಸ್ಯರುಗಳು ವಿಶೇಷ ರೈಲನ್ನು ಮಾಡಿಕೊಂಡು ಪ್ರವಾಸಕ್ಕೆ ಬಂದಿದ್ದು ಗುಜರಾತಿನಿಂದ ತಿರುಪತಿ, ರಾಮೇಶ್ವರಮ್, ಮಧುರೈ, ಕನ್ಯಾಕುಮಾರಿಯಾಗಿ ಕರ್ನಾಟಕದ ಬೇರೆ ಬೇರೆ ಸ್ಥಳಗಳನ್ನ ಸಂದರ್ಶಿಸಿ ಶನಿವಾರ ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಮುರ್ಡೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನವನ್ನು ಪಡೆದು ಸುಮಾರು ರಾತ್ರಿ 9 ಗಂಟೆಗೆ ಇವರು ಬಂದಿದ್ದ ರೈಲು ವಾಪಾಸಾಗಲಿದ್ದು ಪುನಃ ಗುಜರಾತನ್ನು ತಲುಪಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸೋನು ಭಾಯ್ ಅವರು ಗುಜರಾತಿನಿಂದ ಹೊರಟ ತಮ್ಮ ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಾವು ಸುಮಾರು 1650 ಜನರು ಸಮಾಜ ಮನಸ್ಕರು ಯಾತ್ರೆ ಮಾಡುವ ಸಲುವಾಗಿಯೇ ವಿಶೇಷ ರೈಲನ್ನು ಮಾಡಿಕೊಂಡು ಬಂದಿದ್ದು ಅತ್ಯಂತ ಉತ್ತಮ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಮಾಡಿದೆ. ಎಲ್ಲಾ ಕಡೆಗಳಲ್ಲಿಯೂ ಕೂಡಾ ಮೊದಲೇ ವ್ಯವಸ್ಥೆ ಮಾಡಿದಂತೆ ದೇವರ ದರ್ಶನ ಹಾಗೂ ಪ್ರಕೃತಿ ವೀಕ್ಷಣೆಗೆ ಅವಕಾಶವನ್ನು ನೀಡಲಾಗಿತ್ತು. ಮುರ್ಡೇಶ್ವರದಲ್ಲಿಯೂ ಕೂಡಾ ಉತ್ತಮವಾಗಿ ದೇವರ ದರ್ಶನವಾಗಿದ್ದು ಅತ್ಯಂತ ಸುಂದರವಾದ ಪರಿಸರವನ್ನು ನೋಡಿ ಸಂತಸಪಟ್ಟಿದ್ದೇವೆ. ಇಲ್ಲಿನ ದೇವಾಲಯದ ಸ್ವಚ್ಚತೆ ಹಾಗೂ ಹಿಂಬದಿಯಲ್ಲಿರು ಪರಿಸರ, ಸಮುದ್ರದ ಆರ್ಭಟ ಮನಸೂರೆಗೊಳ್ಳುವಂತಿದೆ ಎಂದ ಅವರು ಬೃಹತ್ ಶಿವನ ಪ್ರತಿಮೆ, ಅತಿ ಎತ್ತರದ ಗೋಪುರ ಜನರನ್ನು ಆಕರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಮುರ್ಡೇಶ್ವರ ಪ್ರಸಿದ್ಧ ಪ್ರವಾಸೀ ತಾಣವೂ ಆಗಿರುವುದರಿಂದ ದೂರದ ಗುಜರಾತಿನಿಂದ ಬಂದಿದ್ದ ಎಲ್ಲರೂ ಸಂತಸಪಟ್ಟರು ಎಂದರು. ಈ ಸಂದರ್ಭದಲ್ಲಿ ಗುಜರಾತಿನಿಂದ ಅವರೊಂದಿಗೆ ಬಂದಿದ್ದ ಯಾತ್ರಾರ್ಥಿಗಳು, ಸ್ಥಳೀಯರಾದ ರಮೇಶ ಹೆಗಡೆ, ಚೈತನ್ಯ ಚಿತ್ರಾಪುರ, ರಿಕ್ಷಾ ಯೂನಿಯನ್ ಅಧ್ಯಕ್ಷ ಸತೀಶ ನಾಯ್ಕ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqewq

Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ

Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ

Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ

11-honnavara

Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು

Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ

Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.