ಕಟ್ಟಿಗೆ, ಬಟ್ಟೆಗೆ ಹೊಸ ರೂಪ ಕೊಟ್ಟ  ಕೈದಿಗಳು


Team Udayavani, Nov 19, 2018, 5:29 PM IST

19-november-23.gif

ಬೆಳಗಾವಿ: ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಅಪರಾಧವೆಸಗಿ ಪ್ರಾಯಶ್ಚಿತ ಪಟ್ಟು ನಾಲ್ಕು ಗೋಡೆಗಳ ಮಧ್ಯೆ ಬದುಕು ದೂಡುವ ಜೈಲು ಬಂಧಿಗಳು ಈಗ ಕತ್ತಲಿನಾಚೆ ಬದುಕು ರೂಪಿಸಿಕೊಳ್ಳುತ್ತಿದ್ದು, ಜೈಲಿನಲ್ಲಿದ್ದುಕೊಂಡೇ ತಮ್ಮ ಕಲಾ ಕೈಚಳಕದಲ್ಲಿ ಕಟ್ಟಿಗೆ ಹಾಗೂ ಬಟ್ಟೆಗೆ ರೂಪ ಕೊಟ್ಟು ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.

ಸುಮಾರು 95 ವರ್ಷಗಳ ಇತಿಹಾಸ ಹೊಂದಿರುವ ಬ್ರಿಟಿಷರ ಕಾಲದ ಹಿಂಡಲಗಾ ಜೈಲು ಈಗ ಕಲಾಕೌಶಲದತ್ತ ಮುಖ ಮಾಡಿದೆ. ಕಸದಿಂದಲೇ ರಸ ಮಾಡುತ್ತ ತಮ್ಮ ಪ್ರತಿಭೆ ಮೂಲಕ ಇಲ್ಲಿಯ ಜೈಲು ಬಂಧಿಗಳ ವಿನೂತನ ಶೈಲಿಯ ಬದುಕು ಇತರರಿಗೆ ಮಾದರಿಯಾಗಿದೆ. ಬ್ರಿಟಿಷರ ಕಾಲದಿಂದಲೂ ಇಲ್ಲಿಯ ಕೈದಿಗಳು ಒಂದಲ್ಲ ಒಂದು ಕೆಲಸ ಮಾಡುತ್ತ ತಮ್ಮನ್ನು ತಾವು ರೂಪಿಸಿಕೊಂಡು ಮನಪರಿವರ್ತನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೈದಿಗಳು ಒಂದೆಡೆ ಕಟ್ಟಿಗೆ ಪೀಠೊಪಕರಣ ತಯಾರಿಸಿದರೆ, ಇನ್ನೊಂದೆಡೆ ವಿವಿಧ ತರಹದ ಬಟ್ಟೆಗಳನ್ನು ಹೊಲೆಯುವುದರಲ್ಲಿ ಮಗ್ನರಾಗಿದ್ದಾರೆ.

ಕೈದಿಗಳ ಕಲಾಕೌಶಲಕ್ಕೆ ಹೆಚ್ಚಿದ ಬೇಡಿಕೆ: ಕೆಟ್ಟ ಘಳಿಗೆಯಲ್ಲಿ ಮಾಡಿದ ತಪ್ಪಿಗೆ ಬಂಧಿಯಾಗಿರುವ ಹಿಂಡಲಗಾ ಜೈಲಿನ ಅನೇಕರು ವಿವಿಧ ಕಲಾ ಕೌಶಲಗಳಿಂದ ಗುರುತಿಸಿಕೊಂಡಿದ್ದಾರೆ. ಮರಗೆಲಸ ಮಾಡಿ ನಾವೀಣ್ಯ ರೂಪದ ಪೀಠೊಪಕರಣಗಳನ್ನು ತಯಾರಿಸುವ ರಾಜ್ಯದ ಏಕಮೇವ ಜೈಲು ಇದಾಗಿದೆ. ನಿತ್ಯ ಬೆಳಗ್ಗೆ 7:30ರಿಂದ ಆರಂಭವಾಗುವ ಇವರ ಕೆಲಸ ಸಂಜೆವರೆಗೂ ದುಡಿಯುತ್ತಾರೆ. ಇವರು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸರಕಾರಿ ಹಾಗೂ ಖಾಸಗಿ ವಲಯದಿಂದಲೂ ಆರ್ಡರ್‌ಗಳು ಬರುತ್ತಿರುವುದು ಕೆಲಸಗಾರರಲ್ಲಿ ಮತ್ತಷ್ಟು ಸಂತಸ ಮೂಡಿಸಿದೆ.

ಕೈಚಳಕದಲ್ಲಿ ಮೂಡಿದ ಕಲೆ: ವಿಶಾಲವಾದ ಜೈಲಿನ ಆವರಣದ ಮೂಲೆಯಲ್ಲಿರುವ 20 x80 ಅಡಿಯ ಕೊಠಡಿಯಲ್ಲಿ ಸುಮಾರು 10 ಜನ ಪರಿಣಿತ ಕೈದಿಗಳು ಮರಗೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೆಲವೊಂದಕ್ಕೆ ಮಾತ್ರ ಯಂತ್ರಗಳ ಸಹಾಯ ಪಡೆದುಕೊಂಡರೆ ಇನ್ನುಳಿದಂತೆ ಕೈಚಳಕದಲ್ಲಿಯೇ ವಿವಿಧ ನಮೂನೆಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಟೇಬಲ್‌, ಕುರ್ಚಿ, ಮಂಚ, ಕಂಪ್ಯೂಟರ್‌ ಟೇಬಲ್‌, ಶೋ ಕೇಸ್‌, ಸೋಪಾ ಸೆಟ್‌, ಬಾಕ್‌, ಡಯಾಸ್‌, ಪ್ಲೈವುಡ್‌ನ‌ಲ್ಲಿ ತಯಾರಿಸುವ ಪೀಠೊಪಕರಣ ಸೇರಿದಂತೆ ಎಲ್ಲ ವಸ್ತುಗಳು ಜೈಲಿನಲ್ಲೇ ತಯಾರಾಗುತ್ತಿವೆ.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಗತ್ಯ ಇರುವ 70 ಮಂಚಗಳನ್ನು ತಯಾರಿಸಲಾಗಿದೆ. ಸದ್ಯ 35 ಬೆಡ್‌ ನೀಡಲಾಗಿದ್ದು, ಇನ್ನೂ 35 ಬೆಡ್‌ಗಳ ತಯಾರಿಕೆ ಕಾರ್ಯದಲ್ಲಿ ಕೈದಿಗಳು ನಡೆಸಿದ್ದಾರೆ. ಇದಕ್ಕೂ ಮುನ್ನ ಸರಕಾರಿ ವಲಯದ ಬಹುತೇಕ ಕಚೇರಿಗಳಿಗೆ ಇಲ್ಲಿಂದಲೇ ಪೀಠೊಪಕರಣ ಪೂರೈಸಲಾಗುತ್ತಿದ್ದು, ಕೋರ್ಟ್‌, ಶಾಲಾ-ಕಾಲೇಜುಗಳಿಗೆ ಅಗತ್ಯ ಇರುವ ವಸ್ತುಗಳನ್ನೂ ಸರಬರಾಜು ಮಾಡಲಾಗಿದೆ.

ಸಮವಸ್ತ್ರಗಳ ತಯಾರಿಕೆಗೂ ಸೈ: ಸುಮಾರು 40 ಹೊಲಿಗೆ ಯಂತ್ರಗಳನ್ನು ಇಟ್ಟುಕೊಂಡು ನೂರಾರು ಬಟ್ಟೆಗಳು, ಸಮವಸ್ತ್ರಗಳನ್ನು ತಯಾರಿಸುವ ಇಲ್ಲಿನ ಕೈದಿಗಳು ವೃತ್ತಿಪರರಂತೆ ಕೆಲಸ ಮಾಡುತ್ತಿದ್ದಾರೆ. 17 ಜನ ಕೈದಿಗಳು ಹೊಲಿಗೆ ಯಂತ್ರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಇದರಲ್ಲಿ ಮೂವರು ವೃತ್ತಿಪರರಾಗಿದ್ದಾರೆ. ವಿವಿಧೆಡೆ ಅಗತ್ಯ ಇರುವ ಬಟ್ಟೆಗಳನ್ನು ಹೊಲೆದು ಕೊಡುವುದೇ ಇವರ ಕಾಯಕ.

ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಇವರ ಕಾಯಕ ಸಂಜೆ 6:30ರ ವರೆಗೂ ನಡೆಯುತ್ತದೆ. ಸದ್ಯ ಗೃಹ ಇಲಾಖೆ ಸಿಬ್ಬಂದಿಗೆ ಬೇಕಾಗುವ 1358 ಸಮವಸ್ತ್ರಗಳ ಬೇಡಿಕೆ ಬಂದಿದ್ದು, ಈಗ 250 ಸಮವಸ್ತ್ರಗಳನ್ನು ತಯಾರಿಸಿದ್ದಾರೆ. ಜತೆಗೆ ವಿವಿಧ ಶಾಲೆಗಳ ಸಮವಸ್ತ್ರಗಳನ್ನೂ ಕೈದಿಗಳೇ ಹೊಲೆಯುತ್ತಾರೆ. ಜೊತೆಗೆ ತಮ್ಮ ಕೈದಿಗಳ ಬಿಳಿ ಬಣ್ಣದ ಸಮವಸ್ತ್ರಗಳು, ಜೈಲಿನ ಅಧಿಕಾರಿಗಳು, ಸಿಬ್ಬಂದಿಗಳ ಸಮವಸ್ತ್ರಗಳೂ ಇವರೇ ಹೊಲೆಯುತ್ತಾರೆ.

ಈಗ ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಅವರ ವಿಶೇಷ ಪ್ರಯತ್ನದಿಂದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿ ಕೈದಿಗಳೂ ಸ್ವ ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಸಿಗುವ ಕಟ್ಟಿಗೆಗಳಿಂದಲೇ ವಿವಿಧ ನಮೂನೆಯ ಪೀಠೊಪಕರಣಗಳನ್ನು ನಿರ್ಮಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ವಸ್ತುಗಳಿಗಿಂತಲೂ ನಮ್ಮ ಜೈಲು ಬಂಧಿಗಳು ತಯಾರಿಸುವ ವಸ್ತುಗಳು ಗುಣಮಟ್ಟದ್ದಾಗಿವೆ. ಯಾವುದನ್ನೂ ಕಳಪೆ ಮಟ್ಟದಲ್ಲಿ ತಯಾರಿಸುವುದಿಲ್ಲ ಎನ್ನುತ್ತಾರೆ ಜೈಲು ಅಧೀಕ್ಷಕ ಟಿ.ಪಿ. ಶೇಷ.

ಜೈಲಿನ ಬಟ್ಟೆ ಬೇರೆ ಜಿಲ್ಲೆಗೂ ಪೂರೈಕೆ
ಹಿಂಡಲಗಾ ಜೈಲಿನಲ್ಲಿ ಕೈದಿಗಳು ಹೊಲೆಯುವ ಸಮವಸ್ತ್ರಗಳು ಬೇರೆ ಬೇರೆ ಜಿಲ್ಲೆಗಳಿಗೂ ಕಳುಹಿಸಲಾಗುತ್ತದೆ. ಬೆಳಗಾವಿಯಂತೆ ಬೇರೆ ಜಿಲ್ಲೆಗಳಲ್ಲಿರುವ ಜೈಲಿನಲ್ಲಿ ಕೈದಿಗಳು ಹೊಲೆಗೆ ಕೆಲಸ ಮಾಡುವುದಿಲ್ಲ. ಧಾರವಾಡ, ವಿಜಯಪುರ, ಬಾಗಲಕೋಟೆಗೂ ಸಮವಸ್ತ್ರಗಳನ್ನು ಕಳುಹಿಸಲಾಗುತ್ತಿದೆ. ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ಬೆಳಗಾವಿ ಜೈಲುಗಳಲ್ಲಿ ಮಾತ್ರ ಬಟ್ಟೆ ಹೊಲೆಯಾಗುತ್ತಿದೆ. 

ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಿಂಡಲಗಾ ಜೈಲಿನ ಬಂಧಿಗಳು ವಿನೂತನ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಕಲಾ ಕೌಶಲದಿಂದ ಕಟ್ಟಿಗೆಯಲ್ಲಿ ವಿವಿಧ ನಮೂನೆಯ ಪೀಠೊಪಕರಣಗಳನ್ನು ತಯಾರಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಟ್ಟೆ, ಸಮವಸ್ತ್ರ ಹೊಲೆಯುವುದರಲ್ಲೂ ಮಗ್ನರಾಗಿದ್ದಾರೆ. ಇದರಿಂದ ಜೈಲು ಬಂಧಿಗಳು ಮಾನಸಿಕವಾಗಿ ಸಿದ್ಧಗೊಳ್ಳುವುದರ ಜೊತೆಗೆ ಸನ್ನಡತೆಯ ಪಟ್ಟವೂ ಸಿಗುತ್ತದೆ. ಮುಂದೆ ಕಲಾಕೌಶಲ ಹಾಗೂ ಸ್ವಾವಲಂಬಿ ಬದುಕು ಸಾಗಿಸಬಹುದಾಗಿದೆ.
 ಟಿ.ಪಿ. ಶೇಷ, ಮುಖ್ಯ ಅಧೀಕ್ಷಕರು, ಹಿಂಡಲಗಾ ಜೈಲು

ಬೈರೋಬಾ ಕಾಂಬಳೆ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.