ಸಾವಯವ ಔಷಧೀಯ ಸಸ್ಯ ಕೃಷಿ


Team Udayavani, May 14, 2019, 3:55 PM IST

nc-2

ಕುಮಟಾ: ಪರಿಸರ ಸಂರಕ್ಷಿಸಿ, ಗಿಡ ಬೆಳೆಸಿ, ಪರಿಸರ ಉಳಿಸಿ ಹೀಗೆ ಎಲ್ಲರೂ ಉಪದೇಶ ಮಾಡುವವರ ಸಂಖ್ಯೆ ಅಧಿಕವಾಗಿದೆ. ಆದರೆ ಉಪದೇಶ ಮಾಡುವವರೆಲ್ಲ ಗಿಡ ನೆಡುವುದೂ ಇಲ್ಲ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದೂ ಇಲ್ಲ. ಎಲ್ಲೋ ಕೆಲವರು ತಮ್ಮ ಮಾತಿನಂತೆ ಕೃತಿಗಿಳಿಯುತ್ತಾರೆ. ಅಂತವರು ಸಮಾಜಕ್ಕೆ ತಮ್ಮ ಸಾಧನೆಗಳ ಮೂಲಕವೇ ಆದರ್ಶರಾಗುತ್ತಾರೆ. ಅಂತವರಲ್ಲಿ ತಾಲೂಕಿನ ಕಲ್ಲಬ್ಬೆಯ ರಾಮಚಂದ್ರ ಭಟ್ಟ ಹೆಬ್ಳೇಕೇರಿ ಒಬ್ಬರು.

ಇಂದಿನ ದಿನಗಳಲ್ಲಿ ಹಲವು ಔಷಧೀಯ ಗಿಡ, ಮರಗಳು ಅವನತಿಯಲ್ಲಿವೆ. ಇನ್ನು ಕೆಲವು ಸಸ್ಯಗಳ ಉಪಯೋಗವೇ ಇಂದಿನ ಕೆಲವರಿಗೆ ಗೊತ್ತಿಲ್ಲ. ಅಂತಹ ಔಷಧೀಯ ಗಿಡ ಮರಗಳ ಜೊತೆಗೆ ಹಲವು ಅಮೂಲ್ಯವಾದ ಸಸ್ಯ ಸಂಪತ್ತನ್ನು ತಮ್ಮ 2.3 ಎಕರೆ ಜಮೀನಿನಲ್ಲಿ ಬೆಳೆಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಕಾದಿಡುವ ಉದ್ದೇಶದಿಂದ ಅವರು ಕಾರ್ಯಪ್ರವ್ರತ್ತರಾಗಿದ್ದಾರೆ.

ಅರಣ್ಯ ಇಲಾಖೆ ಸಹಯೋಗದಲ್ಲಿ ಔಷಧಿ ಗಿಡಗಳನ್ನು ಹಾಗೂ ಅರಣ್ಯದಲ್ಲಿ ಬೆಳೆಯುವ ಗಿಡಗಳನ್ನು ತಂದು ಸತತ 6-7 ವರ್ಷದ ಪರಿಶ್ರಮದಿಂದ ತಮ್ಮ ಜಾಗದಲ್ಲಿ ಬೆಳೆಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕೇವಲ ಸಗಣಿಗೊಬ್ಬರವನ್ನು ಹಾಕಲಾಗಿದೆ. ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಗಿಡಗಳಿಗೆ ರೋಗಗಳ ಭೀತಿ ಎದುರಾಗುವುದಿಲ್ಲ. ವರ್ಷಕ್ಕೆ ಒಂದು ಸಲ ಗೊಬ್ಬರ ಹಾಕಿ ಗಿಡಗಳ ಬುಡಕ್ಕೆ ಮಣ್ಣು ಹಾಕಿದರೆ ತಾನಾಗಿಯೇ ಬೆಳೆಯುತ್ತದೆ. ರೈತರು ಮತ್ಯಾವುದೇ ಹಣ ವ್ಯಯಸುವ ಅವಶ್ಯಕತೆ ಇಲ್ಲವೆನ್ನುತ್ತಾರೆ ರಾಮಚಂದ್ರ ಭಟ್ಟ. ಬೇಸಿಗೆಯಲ್ಲಿ ಮೂರು ವರ್ಷಗಳವರೆಗೆ ಗಿಡಗಳಿಗೆ ನೀರು ಕೊಡಬೇಕಾಗುತ್ತದೆ. 3 ವರ್ಷ ಕಳೆದ ನಂತರ ನೀರು ಕೊಡುವ ಅವಶ್ಯಕತೆಯಿಲ್ಲ.

ಎರಡುಕಾಲು ಎಕರೆ ಜಮೀನಿನಲ್ಲಿ ಅರಣ್ಯದಲ್ಲಿ ಬೆಳೆಯುವ ಮುರುಗಲು, ಮುತ್ತುಗಲ, ಅಂಡಮುರುಗಲು, ಸಿವಣೆ, ಸಾಗವಾನಿ, ಚರಣಿಗೆ, ನಂದಿ, ಹೆಬ್ಬಲಸು ವಾಣೆ, ಮತ್ತಿ, ಬೀಟೆ, ಕೆಂದಾಳ, ಬೆನ್ನುಹೊನ್ನೆ, ಸುರಹೊನ್ನೆ, ಹೊಳೆಮತ್ತಿ, ನೇರಲು, ಗುಳಮಾವು, ಕಾಸಗ, ಸಪ್ಪುಗೊದ್ದಲು, ಹೊಳೆಪಂಸ, ಬಿಲ್ಲಕಂಬಿ, ಬಿಲ್ಲ ಹ್ಯಾಗ ಹಾಗೂ ಔಷಧಿ ಸಸ್ಯಗಳಾದ ಅಂಕೋಲೆ, ಮಾಪ, ಏಕನಾಯಕ, ಅಶೋಕಾ ರಕ್ತಚಂದನ, ಆಪತ್ತಿ ಹಾಗೂ ಸ್ವತಃ ಕಸಿ ಮಾಡಿ ಬೆಳೆಸಿದ ಚಿಕ್ಕು, ಮಾವು ಗೇರು ಸಸಿಗಳನ್ನು ಬೆಳೆಸಲಾಗಿದ್ದು ಕೆಲವು ಹಣ್ಣಿನ ಗಿಡಗಳು ಫಲ ನೀಡುತ್ತಿವೆ.

ನಾವು ಗಿಡ ನೆಟ್ಟು ಬೆಳೆಸಿದರೆ ಮುಂದೆ ಅದೇ ಗಿಡಗಳು ನಮ್ಮನ್ನು ಪೊರೆಯುತ್ತವೆ. ಸಿಗುವ ಹಣ್ಣು ಹಂಪಲುಗಳು ಆರ್ಥಿಕತೆಗೆ ಶಕ್ತಿ ನೀಡುತ್ತವೆ. ಜೊತೆಗೆ ಬೇಸಿಗೆಯಲ್ಲಿ ಸಿಗುವ ದೆರಕೆಲೆಗಳು ತೋಟಕ್ಕೆ ಗೊಬ್ಬರವಾಗುತ್ತದೆ. ಪ್ರತೀದಿನ 2 ತಾಸುಗಳನ್ನು ಈ ಗುಡ್ಡದಂತಹ ಸ್ಥಳದಲ್ಲಿ ಗಿಡಗಳ ಆರೈಕೆಗೆಯಲ್ಲಿ ಕಳೆಯುವದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯವೂ ದೊರೆಯುತ್ತಿದೆ ಎಂದು ನುಡಿಯುವ ರಾಮಚಂದ್ರ ಭಟ್ಟರು ಸೆಲ್ಕೋ ಸೋಲಾರ್‌ ಕಂಪನಿಯಲ್ಲಿ ಇನ್ನುಳಿದ ಸಮಯದಲ್ಲಿ ಉದ್ಯೋಗವನ್ನೂ ಮಾಡುತ್ತಾರೆ.

ಅರಣ್ಯ ಇಲಾಖೆ ಗಿಡಗಳನ್ನು ಒದಗಿಸುವ ಜೊತೆಗೆ ಮೂರು ವರ್ಷಗಳವರೆಗೆ ಗಿಡ ಬೆಳೆಸಲು ಸ್ವಲ್ಪಮಟ್ಟಿನ ಅನುದಾನವನ್ನೂ ನೀಡುತ್ತದೆ. ಹೀಗೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಈ ರೀತಿಯ ಸಸಿಗಳನ್ನು ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಕಾಡಿನಲ್ಲಿ ಬೆಳೆಯುವ ಮರಗಳ ಹಾಗೂ ದಿನನಿತ್ಯ ಬೇಕಾಗುವ ಔಷಧಿ ಸಸ್ಯಗಳನ್ನು ಕಾಯ್ದಿರಿಸುವಿಕೆಯಿಂದ ಆರ್ಥಿಕ ಸದೃಢತೆ ಪಡೆಯುವದರ ಜೊತೆಗೆ ಮುಂದಿನ ಸಮಾಜಕ್ಕೆ ನಮ್ಮ ಕೊಡುಗೆಯನ್ನೂ ನೀಡಿದಂತಾಗುತ್ತದೆ.

ಮುಂದಿನ ಪೀಳಿಗೆಗೆ ಹಲವು ಔಷಧ ಸಸ್ಯಗಳು ಮತ್ತು ಕೆಲವು ವಿಶೇಷ ಜಾತಿಯ ಮರಗಳು ಕಾಣಲೂ ಸಿಗಲಾರದು. ಅದಕ್ಕಾಗಿ ನಾನು ಹಲವು ವಿಶೇಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಚನೆ ಮಾಡಿದ್ದೇನೆ. ಹಲವು ಪ್ರಬೇಧದ ಗಿಡಗಳು ಮತ್ತು ಅವುಗಳ ಪ್ರಯೋಜನವನ್ನು ಗೊತ್ತಿಲ್ಲದವರಿಗೆ ತಿಳಿಸುವ ಉದ್ದೇಶದಿಂದ ನನ್ನ ಮಾಲಕಿ ಜಮೀನಿನಲ್ಲಿಯೇ ಅರಣ್ಯ ಬೆಳೆಸಿದ್ದೇನೆ. ಇದಕ್ಕೆ ಅರಣ್ಯ ಇಲಾಖೆಯೂ ಉತ್ತಮವಾಗಿ ಸ್ಪಂದಿಸಿದೆ.
•ರಾಮಚಂದ್ರ ಭಟ್ಟ, ಹೆಬ್ಳೇಕೇರಿ

•ಕೆ. ದಿನೇಶ ಗಾಂವ್ಕರ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.