![AB-Vajapaee](https://www.udayavani.com/wp-content/uploads/2024/12/AB-Vajapaee-415x249.jpg)
ಪತಂಜಲಿಯಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆ
ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ನೌಕಾನೆಲೆ ಆಸತ್ರೆಯಲ್ಲೂ ಸಕಲ ಸಿದ್ಧತೆ
Team Udayavani, May 1, 2021, 6:06 PM IST
![hjgftyryr](https://www.udayavani.com/wp-content/uploads/2021/05/hjgftyryr-620x372.jpg)
ಕಾರವಾರ: ಕೋವಿಡ್- 19 ಎರಡನೇ ಅಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲವೆಡೆ ಬೆಡ್ ಗಳು ಸಿಗದೇ ಸೋಂಕಿತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣದಿಂದಾಗಿ ವೆಸ್ಟರ್ನ್ ನೇವಲ್ ಕಮಾಂಡ್ಗೆ ಒಳಪಡುವ ಗೋವಾದ ಐಎನ್ಎಚ್ಎಸ್ ಜೀವಂತಿ, ಕಾರವಾರದ ಐಎನ್ ಎಚ್ಎಸ್ ಪತಂಜಲಿ ಮತ್ತು ಮುಂಬೈನ ಐಎನ್ ಎಚ್ಎಸ್ ಸಂಧಾನಿಯಲ್ಲಿ ನಾಗರಿಕ ಆಡಳಿತ ಬಳಸಿಕೊಳ್ಳಲು ಆಕ್ಸಿಜನ್ ಸಹಿತ ಬೆಡ್ಗಳನ್ನು ಸಿದ್ಧಮಾಡಿದ್ದು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಕಾರವಾರದ ನೌಕಾ ಅಧಿಕಾರಿಗಳು ಸುಮಾರು 1500 ವಲಸೆ ಕಾರ್ಮಿಕರಿಗಾಗುವಷ್ಟು ಅಗತ್ಯ ವಸ್ತುಗಳು, ಪಡಿತರ ಮತ್ತು ಮೂಲ ಆರೋಗ್ಯ ಸೇವೆ ಒದಗಿಸಲು ವ್ಯವಸ್ಥೆ ಮಾಡಿದ್ದಾರೆ. ಸಶಸ್ತ್ರ ಪಡೆಗಳ ಆಸ್ಪತ್ರೆಗಳಲ್ಲೇ ಮೊದಲು ಎಂಬಂತೆ ಕಳೆದ ವರ್ಷ ಇಲ್ಲಿನ ಐಎನ್ಎಚ್ಎಸ್ ಪತಂಜಲಿಯಲ್ಲಿ ನಾಗರಿಕ ಕೋವಿಡ್- 19 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿತ್ತು. ಈ ಬಾರಿ ಕೂಡ ಅವಶ್ಯಕತೆ ಇದ್ದರೆ ಕೋವಿಡ್ ರೋಗಿಗಳನ್ನು ಉಪಚರಿಸಲು ತುದಿಗಾಲಲ್ಲಿ ನಿಂತಿದೆ.
ಗೋವಾದ ನೌಕಾ ತಂಡಗಳು ಕೋವಿಡ್-19ರ ಮೊದಲ ಅಲೆಯಲ್ಲಿ ಸಮುದಾಯ ಅಡುಗೆ ಮನೆಗಳನ್ನು ತೆರೆದು ಸಹಕಾರ ನೀಡಿತ್ತು. ಈ ಬಾರಿ ಕೂಡ ಅಗತ್ಯವಿದ್ದರೆ ಅದೇ ರೀತಿಯ ಸಹಾಯ ನೀಡಲು ಸಿದ್ಧವಾಗಿವೆ. ಐಎನ್ಎಚ್ಎಸ್ ಜೀವಂತಿಯಲ್ಲಿ ನಾಗರಿಕರಿಗಾಗಿ ಕೆಲವು ಆಕ್ಸಿಜನ್ ಸಹಿತ ಬೆಡ್ಗಳನ್ನು ಮೀಸಲಿಟ್ಟಿದೆ. ನಗರ ಆಡಳಿತದಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಒದಗಿಸಲು ಕೋರಿದರೆ ಗೋವಾ ನೇವಲ್ ಏರಿಯಾ ಹೆಡ್ಕ್ವಾಟ್ರಸ್ ಅದನ್ನು ಒದಗಿಸಲು ಕೂಡ ಸಜ್ಜಾಗಿದೆ. ಮುಂಬೈನಲ್ಲಿ, ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುವುದನ್ನು ತಡೆಯಲು ನೌಕಾನೆಲೆ ಆವರಣದೊಳಗೆ ಮೂಲಭೂತ ಸೌಕರ್ಯಗಳನ್ನು, ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ.
ನೌಕಾ ಅಧಿಕಾರಿಗಳು ಸಹ ನಾಗರಿಕ ಆಡಳಿತದೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದು, ಅವರು ವಿನಂತಿಸಿದರೆ ಯಾವುದೇ ಕೋವಿಡ್ಗೆ ಸಂಬಂಧಿಸಿ ತುರ್ತು ಸಹಾಯ ನೀಡಲು ಎಲ್ಲಾ ಪೂರ್ವ ಸಿದ್ಧತಾ ಕ್ರಮ ಹೆಚ್ಚಿಸಲಾಗಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗುತ್ತಿರುವ ಆಸ್ಪತ್ರೆಗಳಿಗೆ ಯುದ್ಧಭೂಮಿ ನರ್ಸಿಂಗ್ ಸಹಾಯಕರಾಗಿ ತರಬೇತಿ ಪಡೆದ ವೈದ್ಯಕೀಯ ಮತ್ತು ವೈದ್ಯಕೀಯೇತರರು ಸೇರಿದಂತೆ ಸಣ್ಣಪುಟ್ಟ ಕರ್ತವ್ಯಕ್ಕೆ ನಿಯೋಜನೆಗಾಗಿ ಸಂಯೋಜಿತ ತಂಡಗಳನ್ನು ಮುಂಬೈನ ಐಎನ್ ಎಚ್ಎಸ್ ಅಶ್ವಿನಿಯಲ್ಲಿ ತಯಾರು ಮಾಡಲಾಗಿದೆ.
ಕೋವಿಡ್ ಪೀಡಿತ ಪ್ರದೇಶಗಳಿಗೆ ಅತ್ಯವಶ್ಯ ವೈದ್ಯಕೀಯ ಮಳಿಗೆಗಳು/ ಸಲಕರಣೆಗಳನ್ನು ಸಾಗಿಸಲು, ಬಡವರಿಗೆ ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಲು ಮತ್ತು ಅಗತ್ಯವಿರುವ ಇತರ ತಾಂತ್ರಿಕ ಸಹಾಯಕ್ಕಾಗಿ ಗುಜರಾತ್ ನೌಕಾ ಪ್ರದೇಶವು ನಾಗರಿಕ ಆಡಳಿತಕ್ಕೆ ಬೆಂಬಲ ನೀಡಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
![AB-Vajapaee](https://www.udayavani.com/wp-content/uploads/2024/12/AB-Vajapaee-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Sathish-sail–court](https://www.udayavani.com/wp-content/uploads/2024/12/Sathish-sail-court-150x90.jpg)
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
![ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ](https://www.udayavani.com/wp-content/uploads/2024/12/lorry1-150x81.jpg)
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
![Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ](https://www.udayavani.com/wp-content/uploads/2024/12/car-d-1-150x100.jpg)
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
![Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ](https://www.udayavani.com/wp-content/uploads/2024/12/sirsi-150x82.jpg)
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
![ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ](https://www.udayavani.com/wp-content/uploads/2024/12/beer-150x95.jpg)
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![AB-Vajapaee](https://www.udayavani.com/wp-content/uploads/2024/12/AB-Vajapaee-150x90.jpg)
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
![ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ](https://www.udayavani.com/wp-content/uploads/2024/12/Election-Commission-150x99.jpg)
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
![electricity](https://www.udayavani.com/wp-content/uploads/2024/12/electricity-150x90.jpg)
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
![Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್ಗಷ್ಟೇ ಅವಕಾಶ!](https://www.udayavani.com/wp-content/uploads/2024/12/bag-150x91.jpg)
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್ಗಷ್ಟೇ ಅವಕಾಶ!
![CT-Ravi-BJP](https://www.udayavani.com/wp-content/uploads/2024/12/CT-Ravi-BJP-1-150x90.jpg)
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.