![Basavaraj-horatti](https://www.udayavani.com/wp-content/uploads/2024/12/Basavaraj-horatti-3-415x249.jpg)
ಜಿಟಿ ಜಿಟಿ ಮಳೆ: ಮೀನುಗಾರರ ಪರದಾಟ
ಕೃಷಿಯಲ್ಲಿ ಕೊಯ್ಲಿಗೆ ಬಂದ ಭತ್ತವನ್ನು ರಕ್ಷಿಸಿಕೊಳ್ಳಲಾಗದೆ ರೈತರು ಸಂಕಷ್ಟ ಪಡುತ್ತಿದ್ದಾರೆ.
Team Udayavani, Nov 20, 2021, 6:31 PM IST
![ಜಿಟಿ ಜಿಟಿ ಮಳೆ: ಮೀನುಗಾರರ ಪರದಾಟ](https://www.udayavani.com/wp-content/uploads/2021/11/Boat-1-620x255.jpg)
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸೋಮವಾರದಿಂದ ಮಳೆ ಸುರಿದಿದೆ. ಶುಕ್ರವಾರವೂ ಮೋಡ ಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಕರಾವಳಿಯಲ್ಲಿ ಸುರಿದಿದೆ. ಘಟ್ಟದ ಮೇಲೆ ಒಂದೆರಡು ಸಲ ಮಳೆ ಬಿದ್ದಿದೆ. ಸಮುದ್ರ ಅಬ್ಬರಿಸುತ್ತಿರುವ ಕಾರಣ ದೋಣಿಗಳು ಕಡಲಲ್ಲಿ ಹಾಗೂ ಬಂದರಿನಲ್ಲಿ ಲಂಗುರ ಹಾಕಿವೆ. ಮೀನುಗಾರಿಕೆ ಅಸ್ತವ್ಯಸ್ತವಾಗಿದೆ.
ಕೃಷಿಯಲ್ಲಿ ಕೊಯ್ಲಿಗೆ ಬಂದ ಭತ್ತವನ್ನು ರಕ್ಷಿಸಿಕೊಳ್ಳಲಾಗದೆ ರೈತರು ಸಂಕಷ್ಟ ಪಡುತ್ತಿದ್ದಾರೆ. ಗದ್ದೆಯಲ್ಲಿ ಕೊಯ್ದ ಭತ್ತ ಮಳೆ ನೀರಿನ ಪಾಲಾಗಿದೆ. ಮೋಡ ಕವಿದ ವಾತಾವರಣ ಕಾರಣ ಜನರಲ್ಲಿ ನಿರುತ್ಸಾಹ ಕಾಣುತ್ತಿದೆ. ಜನರು ಮನೆಯಿಂದ ಅಷ್ಟಾಗಿ ಹೊರಗೆ ಬೀಳದ ಕಾರಣ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಇನ್ನು ಮೂರು ದಿನ ಮಳೆಯ ಕಾರಣ ಜನರು ಇನ್ನು ಮಳೆಗಾಲ ಮುಗಿಯಲಿಲ್ಲ. ನವೆಂಬರ್ ಮುಗಿಯುತ್ತಾ ಬಂದರೂ ಮಳೆ ನಿಲ್ಲುವುದಿಲ್ಲ ಎಂದು ಬೇಸರ
ವ್ಯಕ್ತಪಡಿಸುವುದು ಕೇಳಿ ಬರುತ್ತಿತ್ತು. ಶುಕ್ರವಾರದ ಬೆಳಗಿನ 8 ಗಂಟೆಯತನಕ ಕಳೆದ 24 ತಾಸಿನಲ್ಲಿ ಅಂಕೋಲಾದಲ್ಲಿ 2.5. ಮಿಮೀ ಮಳೆಯಾಗಿದೆ.
ಹಳಿಯಾಳದಲ್ಲಿ 1.2, ಹೊನ್ನಾವರದಲ್ಲಿ 0.3, ಕಾರವಾರದಲ್ಲಿ 1.4, ಕುಮಟಾದಲ್ಲಿ 3.6, ಮುಂಡಗೋಡದಲ್ಲಿ 1.2, ಸಿದ್ದಾಪುರದಲ್ಲಿ 2.4, ಶಿರಸಿಯಲ್ಲಿ 14.5, ಯಲ್ಲಾಪುರದಲ್ಲಿ 4.6 ಮಿಮೀ ಮಳೆ ಸುರಿದಿದೆ. 31.7 ಮಿಮೀ ಮಳೆ ಬಿದ್ದಿದೆ. ಮೋಡಕವಿದ ವಾತಾವರಣ ಮುಂದುವರಿದಿದೆ. ನ.18 ರಂದು 76.2, ನ.17 ರಂದು 384.4, ನ.16 ರಂದು 170.8, ನ.15 ರಂದು 100.6 ಮಿಮೀ ಮಳೆ ಜಿಲ್ಲೆಯಲ್ಲಿ ಸುರಿದಿದೆ. 900 ಹೆಕ್ಟೇರ್ ಭತ್ತದ ಬೆಳೆಗೆ ಹಾನಿಯಾಗಿದೆ. ಅಡಕೆ ಮತ್ತು ಜೋಳದ ಬೆಳೆಗೂ ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.
ಇನ್ನು ಮೂರು ದಿನ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಯಾವುದೇ ಕ್ಷಣ ಮಳೆ ಸುರಿಯಬಹುದಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಅಧಿಕ ಮಳೆಯ ಪಟ್ಟಿಯಲ್ಲಿ ಉತ್ತರ ಕನ್ನಡ ಸಹ ಇದ್ದು, ತಾಲೂಕು ಆಡಳಿತಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
![Basavaraj-horatti](https://www.udayavani.com/wp-content/uploads/2024/12/Basavaraj-horatti-3-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ](https://www.udayavani.com/wp-content/uploads/2024/12/Agrij-150x96.jpg)
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
![Sathish-sail–court](https://www.udayavani.com/wp-content/uploads/2024/12/Sathish-sail-court-150x90.jpg)
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
![ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ](https://www.udayavani.com/wp-content/uploads/2024/12/lorry1-150x81.jpg)
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
![Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ](https://www.udayavani.com/wp-content/uploads/2024/12/car-d-1-150x100.jpg)
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
![Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ](https://www.udayavani.com/wp-content/uploads/2024/12/sirsi-150x82.jpg)
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Basavaraj-horatti](https://www.udayavani.com/wp-content/uploads/2024/12/Basavaraj-horatti-3-150x90.jpg)
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
![BGV-Gandhi-bharatha](https://www.udayavani.com/wp-content/uploads/2024/12/BGV-Gandhi-bharatha-150x90.jpg)
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
![1-horoscope](https://www.udayavani.com/wp-content/uploads/2024/12/1-horoscope-9-150x90.jpg)
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
![Munirathna](https://www.udayavani.com/wp-content/uploads/2024/12/Munirathna-150x90.jpg)
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
![Darshan12](https://www.udayavani.com/wp-content/uploads/2024/12/Darshan12-150x90.jpg)
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.