ಶಂಕರ ಹೊಂಡಕ್ಕೆ ಪುನಶ್ಚೇತನ ಕಾರ್ಯ

•ನಗರಸಭೆಗೆ ಸೆಡ್ಡು: ಕುಸಿದು ಬಿದ್ದ ಗೋಡೆ ಮತ್ತೆ ನಿರ್ಮಿಸಿದ ಜೀವಜಲ ಕಾರ್ಯಪಡೆ!

Team Udayavani, Jul 13, 2019, 11:47 AM IST

uk-tdy-2..

ಶಿರಸಿ: ಪವಿತ್ರ ಅಘನಾಶಿನಿ ನದಿಯ ಉಗಮ ಸ್ಥಳ ಶಂಕರ ಹೊಂಡ ಗಲೀಜನ್ನು ನೋಡಲಾರದೇ ಅದರ ಅಭಿವೃದ್ಧಿಗೆ ಟೊಂಕ ಕಟ್ಟಿದ್ದ ಇಲ್ಲಿನ ಜೀವಜಲ ಕಾರ್ಯಪಡೆ ಕುಸಿದು ಬಿದ್ದಿದ್ದ ಗೋಡೆಯನ್ನೂ ಪುನಃ ನಿರ್ಮಾಣ ಮಾಡಿದೆ.

ಕಳೆದೆರಡು ವರ್ಷಗಳ ಹಿಂದೆ ನಗರಸಭೆ ಬಳಿ ಶಂಕರ ಹೊಂಡಕ್ಕೆ ಏನಾದರೂ ಮಾಡಿ, ಅಭಿವೃದ್ಧಿ ಮಾಡಿ ಎಂದು ಜೀವಜಲ ಕಾರ್ಯಪಡೆ ಮನವಿ ಮಾಡಿದಾಗ ನಮ್ಮ ಬಳಿ ಇದು ಆಗದು ಎಂದು ಕೈಚೆಲ್ಲಿತ್ತು. ಅಲ್ಲದೇ ಕಾರ್ಯಪಡೆಗೆ ಪತ್ರವನ್ನೂ ಕೊಟ್ಟಿತ್ತು.

ಅಲ್ಲಿಂದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ಶಂಕರ ಹೊಂಡದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಕೊಳಚೆ ಗುಂಡಿಯಂತಾಗಿದ್ದ ಪವಿತ್ರ ಶಂಕರ ಹೊಂಡ ಅಭಿವೃದ್ಧಿಗೆ ಪಣ ತೊಟ್ಟಿತು. ಹೊಂಡದ ಹೂಳೆತ್ತಿಸಿ ಸ್ವಚ್ಛಗೊಳಿಸಿ ಸುತ್ತಲಿನ ಸ್ನಾನಗೃಹ, ಶೌಚಗೃಹ ನಿರ್ಮಾಣ ಮಾಡಿ ಮಾರಿಕಾಂಬಾ ದೇವಿ ಜಾತ್ರೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿತ್ತು. ರೋಟರಿ ನೆರವಿನಿಂದ ವ್ಯಾಯಾಮ ಅಂಗಳ, ಕಾರ್ಯಪಡೆಯಿಂದ ದೋಣಿ ವಿಹಾರ, ಈಚೆಗೆ ಚೆಂದದ ಕಾರಂಜಿಯನ್ನೂ ನಿರ್ಮಿಸಿತ್ತು.

ಜೀವಜಲ ಕಾರ್ಯಪಡೆ ಕಾರ್ಯಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಶಂಕರ ಹೊಂಡ ಮಾದರಿಯಲ್ಲಿ ಹಲವಡೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತವು. ಮಂತ್ರಾಲಯದ ಸ್ವಾಮೀಜಿ ವೀಕ್ಷಿಸಿ ತಮ್ಮಲ್ಲೂ ಇದೇ ಮಾದರಿಗೆ ಮುಂದಾಗುವ ಇಂಗಿತ ವ್ಯಕ್ತಪಡಿಸಿದ್ದರು.

ಅಘನಾಶಿನಿ ನದಿಯ ಮೂಲಕ್ಕೂ ಶೋಭೆ ಬಂದಿತ್ತು. ಸಂಜೆ ಬೆಳಗ್ಗೆ ವಾಕಿಂಗ್‌ ಪಾಯಂಟ್ ಕೂಡ ಆಯಿತು.

ಇಷ್ಟಾದ ಬಳಿಕ ಇದರ ನಿರ್ವಹಣೆಗೆ ಸ್ವತಃ ಜನರನ್ನು ಕೊಡಿ ಎಂದು ನಗರಸಭೆಗೆ ಕೇಳಿದಾಗ ಕಾನೂನು ತೊಡಕಿನ ಪ್ರಶ್ನೆ ಇಟ್ಟರು. ಕಾರ್ಯಪಡೆ ಸಿಬಂದಿಗಳನ್ನೂ ನೇಮಕ ಮಾಡಿ ನಡೆಸುತ್ತಿದೆ.

ಈ ಎಲ್ಲ ವಿದ್ಯಮಾನಗಳ ಜೊತೆಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಜಯನಗರದ ಕಡೆ ತೆರಳುವ ರಸ್ತೆ ಪಕ್ಕದ ಗೋಡೆ ಕುಸಿದು ಬಿದ್ದಿತ್ತು. ಇದನ್ನು ದುರಸ್ತಿ ಮಾಡುವಂತೆ ಸ್ವತಃ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತೆ ಅಶ್ವಿ‌ನಿ ಅವರಲ್ಲಿ ಮನವಿ ಮಾಡಿಕೊಂಡರು. ನಗರಸಭೆ ಸದಸ್ಯರಿಗೆ ಅಧಿಕಾರವಿಲ್ಲ, ಪೌರಾಯುಕ್ತರಲ್ಲಿ ಕೇಳಿದರೆ ಹಣವಿಲ್ಲ ಎಂಬ ಉತ್ತರ ಬಂತು. ಮತ್ತೆ ಕುಸಿದು ಬಿದ್ದಿದ್ದ ಸುಮಾರು 75 ಅಡಿ ಉದ್ದನೆಯ ಹತ್ತಾರು ಅಡಿ ಎತ್ತರದ ಗೋಡೆ ನಿರ್ಮಾಣ ಕಾರ್ಯಪಡೆ ಹೆಗಲಿಗೆ ಬಿತ್ತು.

ಮಳೆಗಾಲದ ಬಳಿಕ ಸತತ ಕಾರ್ಯ ಮಾಡಿಸಿ ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, 75 ಅಡಿ ಉದ್ದನೆಯ ಗೋಡೆ ಮತ್ತೆ ಸದೃಢವಾಗಿ ಎದ್ದು ನಿಂತಿದೆ. ಸುಮಾರು 7 ಲ.ರೂ. ಗಳಷ್ಟು ಖರ್ಚು ಹೆಚ್ಚುವರಿಯಾಗಿ ಕಾರ್ಯಪಡೆಗೆ ಬಿದ್ದಿದೆ. ಇನ್ನೂ ಗ್ರಿಲ್ಸ್, ಪ್ಲೇವರ್ಸ ಅಳವಡಿಕೆ ಕೂಡ ಮಾಡುವದಿದೆ ಎನ್ನುತ್ತಾರೆ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ.

 

•ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.