ಜೀವಜಲ ರಕ್ಷಣೆಗೂ ಸೈ ಮತದಾನ ಜಾಗೃತಿಗೂ ಜೈ!

ನಾನು ಸೇವೆ ಸಲ್ಲಿಸುತ್ತೇನೆ ಎಂಬುದೇ ಅನ್ವರ್ಥ ಸಾಮಾಜಿಕ ಬದ್ಧತೆಗೆ ಅಣಿಯಾದ ವಿದ್ಯಾರ್ಥಿಗಳು

Team Udayavani, Mar 27, 2019, 4:56 PM IST

27-March-21
ಶಿರಸಿ: ಎನ್ನೆಸ್ಸೆಸ್‌ ಯೋಜನೆ. ಆದರೆ, ಜಿಲ್ಲಾ ಎನ್ನೆಸ್ಸೆಸ್‌ ಸೂಚನೆ ಮೇರೆಗೆ ವಿವಿಧ ಕಾಲೇಜುಗಳ ಘಟಕಗಳು ನಾನು ಸೇವೆ ಸಲ್ಲಿಸತ್ತೇನೆ ಎಂಬ ವಿನಯದ ಕಾರ್ಯಕ್ಕೆ ಮುಂದಾಗಿದೆ. ಕೆರೆ ಜಲ ಸಂರಕ್ಷಣೆ ಜಾಗೃತಿಗೂ, ಮತದಾನದ ಕುರಿತು ಅರಿವು ಮೂಡಿಸಲೂ ಹೆಜ್ಜೆ ಇಟ್ಟಿವೆ. ಒಣಗುತ್ತಿರುವ ಭೂಮಿಯಲ್ಲಿ ಹಸಿರು ಫಸಲು ಮೂಡಿಸಲು ಮುಂದಾಗಿವೆ.
ಜಿಲ್ಲೆಯಲ್ಲಿ 41 ಎನ್ನೆಸ್ಸೆಸ್‌ ಘಟಕಗಳು ವಿವಿಧ ಪಿಯು ಹಾಗೂ ಕಾಲೇಜು ವಿಭಾಗದಲ್ಲಿ ಕಾರ್ಯ
ಮಾಡುತ್ತಿವೆ. ಒಂದೊಂದೂ ಘಟಕಗಳು ನೆಲ ಜಲ ಸಂರಕ್ಷಣೆ ಹೆಸರಿನಲ್ಲಿ ಫಣತೊಟ್ಟು ತಲಾ ಒಂದೊಂದು ಕೆರೆಯ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವಲ್ಲಿ ಸಕ್ರೀಯವಾಗಿವೆ. ಮುಚ್ಚಿಹೋದ ಕಲ್ಯಾಣಿ, ಕೆರೆ, ಸ್ವಚ್ಛಗೊಳಿಸಿ, ಕೆಲವು ಕೆರೆಗಳ ಹೂಳನ್ನೂ ತೆಗೆದು ಯುವ ಶಕ್ತಿ ಮೂಲಕ ಮಾದರಿ ಮೇಲ್ಪಂಕ್ತಿ ಹಾಕಿವೆ. ನೀರಿನ ಮೂಲ ಹರಿಯುವಂತೆ ಮಾಡಿದಲ್ಲಿ ಇಡೀ ಜಿಲ್ಲೆಯ ಸುಮಾರು ಮೂರು ಸಾವಿರ ವಿದ್ಯಾರ್ಥಿ‌ಳ ಕರಗಳು ಈ ಕಾರ್ಯಕ್ಕೆ ಕಂಕಣ ಕಟ್ಟಿವೆ. ಎನ್ನೆಸ್ಸೆಸ್‌ ಜಿಲ್ಲಾ ನೋಡೆಲ್‌ ಅಧಿ ಕಾರಿ ಜಿ.ಟಿ. ಭಟ್ಟ ಈ ಹಿಂದಿನ ಶಕ್ತಿ ಆಗಿದ್ದಾರೆ. ಏನಾದರೂ ಹೊಸತನ ಮಾಡಬೇಕು ಎಂಬ ತುಡಿತದಲ್ಲಿರುವ ಇಲ್ಲಿನ ಎಂಇಎಸ್‌ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕ ಜಿ.ಟಿ. ಭಟ್ಟ ತಂಡ ಯುವ ಶಕ್ತಿಗೆ ಹೊಸ ಉಮೇದು ಕೊಟ್ಟಿದೆ.
ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಸ್ತಾವನೆ ನೋಡಿದ ಧಾರವಾಡ ವಿವಿ ಕುಲಪತಿಗಳು ಧಾರವಾಡ, ಹಾವೇರಿ, ಗದಗ ಒಳಗೊಂಡ ಧಾವರಾಡ ವಿವಿಗೆ ಇದೇ ಜೀವಜಲ ಸಂರಕ್ಷಣೆ ಎನ್ನೆಸ್ಸೆಸ್‌ ಹೊಣೆ ಎಂದು ಘೋಷಿಸಿ ಕಾರ್ಯ ಮಾಡಿಸುತ್ತಿದ್ದಾರೆ. ಈ ಕಾರಣದಿಂದ 211 ಎನ್ನೆಸ್ಸೆಸ್‌ ಘಟಕಗಳು, 10 ಸಾವಿರ ವಿದ್ಯಾರ್ಥಿಗಳ ಪಡೆ ಹೊಸ ಶಕ್ತಿಯಾಗಿ ಪರಿಣಮಿಸಿದೆ. ಕಳೆದ ವರ್ಷ ಸ್ವಚ್ಛ ಭಾರತ ಅಭಿಯಾನದಲ್ಲೂ ಮುಂಚೂಣಿಯಲ್ಲಿತ್ತು ಎಂಬುದು ಉಲ್ಲೇಖನೀಯ.
ಮತದಾನ ಜಾಗೃತಿಗೂ ಜೈ:ಮತದಾರರು ತಪ್ಪದೇ ಮತದಾನದಲ್ಲಿ ಪಾಲ್ಗೊಂಡು ಭಾರತವನ್ನು ಸದೃಢಗೊಳಿಸುವಂತಾಗಬೇಕು ಎಂಬುದು ಎಲ್ಲರ ಒಲವು. ಇದಕ್ಕಾಗಿ ಮತದಾನ ಕಡ್ಡಾಯವಾಗಬೇಕು. ಈ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ ಕೂಡ ಆಗಬೇಕು. ಇದಕ್ಕಾಗಿ ಜಿಲ್ಲೆಯ ಪದವಿ ಕಾಲೇಜುಗಳ ಎನ್ನೆಸ್ಸೆಸ್‌ ಘಟಕಗಳು ಸಹ ಗ್ರಾಮೀಣ ಭಾಗದಲ್ಲಿ ಮತದಾರರಲ್ಲಿ ಅರಿವು ಮೂಡಿಸಲು ಮುಂದಾಗಿವೆ.
ಸುಶಿಕ್ಷಿತರ ಪ್ರಮಾಣ ಹೆಚ್ಚಾದರೂ ಸಹ ಚುನಾವಣೆಗಳಲ್ಲಿ ಮತದಾನ ಪ್ರಮಾಣ ನಿರೀಕ್ಷೆಯಷ್ಟು ಸಾಧ್ಯವಾಗುತ್ತಿಲ್ಲ ಎಂಬ ಬೇಸರದ ಮಧ್ಯೆ ಹೊಸ ಮತದಾರರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರುಂಟೇ? ಹಳಬರು ಮತದಾನ ಮಾಡದೇ ಇರಬೇಡಿ ಎಂಬ ಕಳಕಳಿಯ ಕಾರ್ಯಕ್ಕೂ ಮುಂದಾಗಿವೆ. ಕಳೆದ ವಿಧಾನ ಸಭೆ ಹಾಗೂ ಈ ವರ್ಷದ ಲೋಕಸಭಾ ಚುನಾವಣೆಯಲ್ಲೂ ಪದವಿ ಕಾಲೇಜುಗಳ ಎನ್ನೆಸ್ಸೆಸ್‌ ಘಟಕಗಳು ಕಾರ್ಯೋನ್ಮುಖವಾಗಿರುವುದು ವಿಶೇಷವಾಗಿದೆ.
ಹೀಗಾಗಿ ಮತ ಪ್ರಮಾಣ ಹೆಚ್ಚಿಸಲು ಮತದಾರರೇ ಮತಗಟ್ಟೆಗೆ ಬನ್ನಿ… ನಿಮ್ಮ ಹಕ್ಕು ಚಲಾಯಿಸಿ ಎಂದು ಮತದಾರರಲ್ಲಿ ಅರಿವು ಮೂಡಿಸಲು ಚುನಾವಣಾ ಆಯೋಗ ಜಿಲ್ಲಾ ಸ್ವೀಪ್‌ ಸಮಿತಿ ಮೂಲಕ ಜಾಗೃತಿ ಕೈಗೊಂಡಿದ್ದು ಇನ್ನೊಂದು ನಡೆಯಾಗಿದೆ.
ಜಿಲ್ಲೆಯ ಅನುದಾನಿತ ಹಾಗೂ ಸರಕಾರಿ ಪದವಿ ಕಾಲೇಜುಗಳು, ಬಿಎಡ್‌ ಕಾಲೇಜುಗಳಲ್ಲಿ ಒಟ್ಟು
41ಎನ್ನೆಸ್ಸೆಸ್‌ ಘಟಕಗಳಿವೆ. ಒಟ್ಟು 2500 ಸ್ವಯಂ ಸೇವಕರನ್ನು ಒಳಗೊಂಡಿದೆ. ಎನ್ನೆಸ್ಸೆಸ್‌ ಘಟಕಗಳು ಜಿಲ್ಲಾ ಸ್ವೀಪ್‌ ಸಮಿತಿ ಸಹಯೋಗದಲ್ಲಿ ಜಾಗೃತಿಗೆ ಅಣಿಯಾಗುವ ಮೊದಲು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿವೆ. ಆ ಗ್ರಾಮಗಳಲ್ಲಿ ಮತದಾರರಲ್ಲಿ ಅರಿವಿನ ಕಾರ್ಯಕ್ಕೆ ಸಂಚಾರ ನಡೆಸಿವೆ.
ಪ್ರೊ| ಜಿ.ಟಿ. ಭಟ್ಟ
ಎನ್ನೆಸ್ಸೆಸ್‌ ಜಿಲ್ಲಾ ನೋಡಲ್‌ ಅಧಿಕಾರಿ.
ರಾಘವೇಂದ್ರ ಬೆಟ್ಟಕೊಪ್ಪ 

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Sirsi: ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಚಾಲಕ ಮೃತ್ಯು

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

Dandeli: ಮಾರುತಿ ನಗರದಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳಿಂದ ದಾಳಿ

Buffellow

Kumata: ಅಕ್ರಮವಾಗಿ ಸಾಗಿಸುತ್ತಿದ್ದ 27 ಎಮ್ಮೆಗಳ ರಕ್ಷಣೆ; ನಾಲ್ವರ ಬಂಧನ

19-sirsi

Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

Dandeli: ಬೀದಿನಾಯಿ ದಾಳಿ.. ಬಾಲಕನಿಗೆ ಗಾಯ: ಬೀದಿನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಆಗ್ರಹ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.