ನಗರೋತ್ಥಾನ ಸಮರ್ಪಕ ಬಳಕೆ

1.70 ಕೋಟಿ ರೂ.ದಲ್ಲಿ ಕುಡಿಯುವ ನೀರು-ರಸ್ತೆ ಕೆಲಸ

Team Udayavani, Mar 11, 2020, 4:13 PM IST

11-March-19

ಸಿದ್ದಾಪುರ: ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಈ ಮೊದಲಿನ ನಗರೋತ್ಥಾನ- ಹಂತ 3ರಲ್ಲಿ ಒಟ್ಟೂ 1.70 ಕೋಟಿ ರೂ.ಗಳ ಮಂಜೂರಾತಿ ದೊರಕಿದ್ದು 2 ಕುಡಿಯುವ ನೀರಿನ ಕಾಮಗಾರಿಗಳು, 4 ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳು ಅನುಷ್ಠಾನಗೊಂಡಿವೆ.

ಕೊಂಡ್ಲಿ ಭೂ ಮಟ್ಟದ ಜಲಗಾರದಿಂದ ಹಾಳತಕಟ್ಟಾ ವಾಜಪೇಯಿ ವಸತಿ ನಿವೇಶನಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಪೈಪ್‌ಲೈನ್‌ ಅಳವಡಿಕೆಗೆ 25 ಲಕ್ಷ ರೂ., ಅರೆಂದೂರು ಜಲಾಗಾರದ ಜಾಕ್‌ವೆಲ್‌ ಬಳಿ ನಿರ್ಮಿಸಿರುವ ಪಿಕ್‌ಅಪ್‌ ಡ್ಯಾಂ ಸುಧಾರಣೆಗೆ 25 ಲಕ್ಷ ರೂ., ಪರಿಶಿಷ್ಟರು ವಾಸಿಸುವ ಕಾಳಿದಾಸ ಗಲ್ಲಿ ರಸ್ತೆ ಕಾಂಕ್ರೀಟಕರಣಕ್ಕೆ 30 ಲಕ್ಷ ರೂ., ಹೊಸೂರು ಕಾನಕೇರಿ ರಸ್ತೆ ಡಾಂಬರೀಕರಣ, ಹೊಸೂರು ಎಲ್‌.ಬಿ. ನಗರದಲ್ಲಿ ರಸ್ತೆ ಡಾಂಬರೀಕರಣಗಳಿಗೆ ಒಟ್ಟೂ 30 ಲಕ್ಷ ರೂ., ರವೀಂದ್ರನಗರದ ಕೆಳಭಾಗದ ಹೊನ್ನೆಗುಂಡಿ ರಸ್ತೆ ಡಾಂಬರೀಕರಣ, ಹೊನ್ನೆಗುಂಡಿ ವಾಸ್ತವ್ಯದ ಮನೆಗಳ ಹಿಂಭಾಗದಲ್ಲಿ ಮಣ್ಣಿನ ಮುಖ್ಯ ಕಾಲುವೆಗೆ ಆರ್‌ ಸಿಸಿ ಗಟಾರ ನಿರ್ಮಾಣ ಕಾಮಗಾರಿಗೆ 30 ಲಕ್ಷ ರೂ., ಸೊರಬ ಮುಖ್ಯ ರಸ್ತೆಯ ಹಾಳತಕಟ್ಟಾ ನಾಕಾದಿಂದ ಬಿಡಿಓ ಕ್ವಾರ್ಟರ್ಸ್‌ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ 30 ಲಕ್ಷ ರೂ.ನಂತೆ ಕಾಮಗಾರಿಗಳನ್ನು ಎತ್ತಿಕೊಂಡಿದ್ದು ಅವೆಲ್ಲವೂ ಪೂರ್ಣಗೊಂಡಿವೆ.

ನಗರೋತ್ಥಾನ ಕಾಮಗಾರಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಅರೆಬರೆಯಾಗಿಲ್ಲ. ಈ ಪಪಂನಲ್ಲಿ ಈ ಯೋಜನೆ ಮಾತ್ರವಲ್ಲ, ಬಹುತೇಕ ಎಲ್ಲ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳುವುದು ಇಲ್ಲಿನ ವೈಶಿಷ್ಟ್ಯತೆ. ಈ ಸಣ್ಣ ಪಪಂ ಆಗಿರುವ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ದೊರೆಯುವುದು ಕಡಿಮೆಯಾಗಿರುವುದಕ್ಕೆ ದೊರೆತ ಅನುದಾನದ ಸದ್ಬಳಕೆ ಮಾಡಿಕೊಳ್ಳುವುದು ಒಂದು ಕಾರಣವಾದರೆ ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಅರಿತ ಸದಸ್ಯರು ಕಾಮಗಾರಿಗಳ ಕುರಿತು ನಿಗಾ ವಹಿಸುವುದು ದೊರೆತ ಅನುದಾನ ವಾಪಸ್‌ ಆಗದಿರುವುದಕ್ಕೆ ಇನ್ನೊಂದು ಕಾರಣ. ಈ ಕಾಮಗಾರಿಗಳು ಗುಣಮಟ್ಟದ ದೃಷ್ಟಿಯಿಂದ ಸಾಕಷ್ಟು ಉತ್ತಮವಾಗಿವೆ.

ನಗರೋತ್ಥಾನ ಕಾಮಗಾರಿಗಳ ಅನುದಾನ ದೊರೆತಿರುವುದು ಈ ಪಪಂಗೆ ಸಾಕಷ್ಟು ಅನುಕೂಲವಾಗಿದೆ. ಆಡಳಿತದ ದೃಷ್ಟಿಯಿಂದ ಹೇಳುವದಾದರೆ ಪಟ್ಟಣದ ಎಲ್ಲ ವಾರ್ಡ್‌ಗಳ ಮೂಲಸೌಕರ್ಯ ಒದಗಿಸುವಲ್ಲಿ ಎದುರಾಗಬಹುದಾದ ಅನುದಾನದ ಕೊರತೆಯನ್ನು ನಗರೋತ್ಥಾನ ಕಾಮಗಾರಿಯ ಅನುದಾನ ಸ್ವಲ್ಪಮಟ್ಟಿಗೆ ನಿವಾರಿಸಿದೆ. ಅಲ್ಲದೇ ಆಯಾ ಸ್ಥಳದಲ್ಲಿನ ಸ್ಥಿತಿ ಅರಿತ ಅಧಿಕಾರಿಗಳು, ಸದಸ್ಯರು ಅಲ್ಲಿಗೆ ಹೊಂದುವ ರೀತಿಯಲ್ಲಿ ಕಾಮಗಾರಿಗಳನ್ನು ಸಂಯೋಜಿಸುವದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಇದರಿಂದ ಮಾಡುವ ಕೆಲಸ ಸಾಕಷ್ಟು ಗುಣಮಟ್ಟದ್ದು ಆಗಿದೆ.

ನಗರೋತ್ಥಾನ-ಹಂತ 3ರ ಕಾಮಗಾರಿ ಅನುಷ್ಠಾನಗೊಂಡು ಸುಮಾರು 3-4 ವರ್ಷಗಳು ಕಳೆಯುತ್ತ ಬಂದಿವೆ. ಇನ್ನು ಹಂತ 4ನೇಯದು ಮಂಜೂರಾಗಬೇಕಿದೆ. ಕಾಲಕಾಲಕ್ಕೆ ವ್ಯವಸ್ಥಿತವಾದ ರೀತಿಯಲ್ಲಿ ಅನುದಾನ ದೊರೆತರೆ ಪಟ್ಟಣದ ಮೂಲ ಸೌಕರ್ಯವನ್ನು ಬಹುಮಟ್ಟಿಗೆ ಒದಗಿಸಲು ಸಾಧ್ಯ.

ನಗರೋತ್ಥಾನ-ಹಂತ 3 ಕಾರ್ಯಗತಗೊಳ್ಳುವಾಗ ಪಟ್ಟಣ ವ್ಯಾಪ್ತಿಯಲ್ಲಿ 12 ವಾರ್ಡ್‌ಗಳಿದ್ದವು. ಅವು ಈಗ 13ಕ್ಕೆ ಏರಿದೆ. ಇದರಿಂದ ಅನುದಾನದ ಮೊತ್ತವೂ ಹೆಚ್ಚಾಗಬೇಕಾಗುತ್ತದೆ ಎನ್ನುವುದು ಬಹುತೇಕ ನಗರವಾಸಿಗಳ ಅಭಿಪ್ರಾಯ.

ಟಾಪ್ ನ್ಯೂಸ್

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!

5-yellapur

Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ

4-dandeli

Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್

Dinesh-gundurao

Vaccine: ಇನ್ನೆರಡು ವರ್ಷದೊಳಗೆ ಕೆಎಫ್‌ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್‌

8-sirsi

Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ACT

Kinnigoli: ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ವಶಕ್ಕೆ

accident

Shirva: ಬೈಕ್‌ ಢಿಕ್ಕಿ; ಮಹಿಳೆಗೆ ಗಂಭೀರ ಗಾಯ

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

byndoor

Kundapura: ಕಾರು ಢಿಕ್ಕಿಯಾಗಿ ದನ ಸಾವು; ಕಾರು ಜಖಂ

1

Fire Accident: ಕುಂಬ್ರದಲ್ಲಿ ಗುಡಿಸಲು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.