ಗ್ರಾಮೀಣ ರಸ್ತೆ ಆಗ್ತಿದೆ ಕಸದ ತೊಟ್ಟಿ

•ಚಿಪಗಿ ಬನವಾಸಿ ರಸ್ತೆಯಲ್ಲಿ ತ್ಯಾಜ್ಯ ಹಾಕುವವರಿಗೆ ಎಚ್ಚರಿಕೆ

Team Udayavani, Jul 1, 2019, 2:42 PM IST

uk-tdy-4..

ಬಾಟಲಿಗಳ ರಾಶಿ

ಶಿರಸಿ: ಚಿಪಗಿ ಬನವಾಸಿ ರಸ್ತೆಯಲ್ಲಿ ಹದ್ದಿನ ಕಣ್ಣು ತ್ಯಾಜ್ಯ ಹಾಕುವವರ ಬಗ್ಗೆ ಇದ್ದಂತೆ ಇನ್ನೊಂದೆಡೆ ಶಿರಸಿಯಿಂದ ಕುಮಟಾ ಹಾಗೂ ಸಿದ್ದಾಪುರಕ್ಕೆ ತೆರಳುವ ಗ್ರಾಮೀಣ ಭಾಗದ ರಸ್ತೆಗಳು ಕಸದ ತೊಟ್ಟಿಗಳಾಗುತ್ತಿವೆ.

ಜೀವಜಲ ಕಾರ್ಯಪಡೆ ಮುಖ್ಯಸ್ಥ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ಬಹುಕಾಲದಿಂದ ಬೇಕಾಬಿಟ್ಟಿಯಾಗಿ ತ್ಯಾಜ್ಯ ಚೆಲ್ಲುತ್ತಿದ್ದ ಚಿಪಗಿ ರಸ್ತೆ, ಜಿಲ್ಲಾ ಕ್ರೀಡಾಂಗಣ ಸಮೀಪವನ್ನು ಸ್ವತಃ ಸ್ವಚ್ಛಗೊಳಿಸಿದ್ದರು. ಬನವಾಸಿ ಮಾರ್ಗದಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಸಿದ್ದರು. ಒಮ್ಮೆ ಸ್ವಚ್ಛಗೊಳಿಸಿದ್ದು ಮಾತ್ರ ಅಲ್ಲದೇ ಯಾರೇ ಕಸ ಚೆಲ್ಲಲು ಬಂದರೂ ತಡೆಯುತ್ತಿದ್ದರು. ಈಗ ಈ ಭಾಗದಲ್ಲಿ ಕಸ ಚೆಲ್ಲುವವರಿಗೆ ಆತಂಕ ಸೃಷ್ಟಿಯಾಗಿದೆ.

ಈ ಮಧ್ಯೆ ತ್ಯಾಜ್ಯವನ್ನು ಬೇಕಾಬಿಟ್ಟಿ ಚೆಲ್ಲುವ ಮನಸ್ಥಿತಿಯವರು ಸ್ಥಳ ಬದಲಾಯಿಸಿಕೊಂಡಂತೆ ಇದೆ. ಕುಮಟಾ ರಸ್ತೆಯ ಹೀಪನಳ್ಳಿ, ಮೆಣಸಿಕೇರಿ, ಶಿರಸಿಮಕ್ಕಿ ಕತ್ರಿಗಳ ತನಕವೂ ನಡು ರಾತ್ರಿ ಕಸ ಚೆಲ್ಲುತ್ತಿದ್ದಾರೆ.

ಇನ್ನೊಂದೆಡೆ ಸಿದ್ದಾಪುರ ಮಾರ್ಗದ ಅಬ್ರಿಮನೆ ಕತ್ತರಿ, ಗಿಡಮಾವಿನಕಟ್ಟೆ, ಸಣ್ಣಕೇರಿ, ಬೆಳ್ಳೆಕೇರಿ, ಕಾಗೇರಿ, ಯಡಹಳ್ಳಿ ತನಕವೂ ಕಸ ಚೆಲ್ಲುತ್ತಿದ್ದಾರೆ. ಅಬ್ರಿಮನೆ ಕತ್ರಿ ಬಳಿ ಇರುವ ಮೋರಿ ಕಟ್ಟೆ ಕೂಡ ಬಾರ್‌ ಕಟ್ಟೆ ಆಗಿದೆ. ಇದೂ ಅಲ್ಲದೇ ಸಾವಿರಕ್ಕೂ ಅಧಿಕ ಬಾಟಲಿಗಳು ಮೋರಿ ಕಟ್ಟೆ ಕೆಳಗೆ ಬಿದ್ದಿವೆ. ಕಂಪ್ಯೂಟರ್‌ಗಳು, ಫ್ರಿಜ್‌ ಐಟಂಗಳು, ಮನೆಯ ತ್ಯಾಜ್ಯಗಳೂ ಗಟಾರದಲ್ಲಿ ಬೀಳುತ್ತಿವೆ.

ಈ ಮಧ್ಯೆ ಹೀಪನಳ್ಳಿ ಭಾಗದ ನಾಗರಿಕರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಕೂಡ ಮನವಿ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಈ ತ್ಯಾಜ್ಯಗಳು ತೋಟ ಪಟ್ಟಿ, ನದಿಗಳನ್ನೂ ತಲುಪಿ ಅನೇಕ ಅಧ್ವಾನ ಮಾಡುತ್ತಿವೆ ಎಂಬುದೂ ಗ್ರಾಮಸ್ಥರ ಆಗ್ರಹವಾಗಿದೆ.

ಗಸ್ತಿಗೂ ಚಿಂತನೆ:

ಈ ಭಾಗದಲ್ಲಿ ರಾತ್ರಿ ರಸ್ತೆ ಪಕ್ಕ ಪಾರ್ಟಿ ಮಾಡುವವರೂ ಹೆಚ್ಚಿದ್ದಾರೆ. ಈ ಬಗ್ಗೆ ರಾತ್ರಿ ಗಸ್ತು ತಿರುಗುವುದಕ್ಕೂ ಯೋಜಿಸಿದ್ದೇವೆ.•ಭಾಸ್ಕರ ಹೆಗಡೆ ಸ್ಥಳೀಯ ಪ್ರಮುಖ
ರಕ್ಷಕ ಹಳ್ಳಿಗೂ ಬರಲಿ:

ಹಿಂದೆ ರಕ್ಷಕ ವಾಹನಗಳು ಹಳ್ಳಿಗೆ ಬರುತ್ತಿದ್ದವು. ಇನ್ನು ಮುಂದೆ ಕೂಡ ರಾತ್ರಿ ವೇಳೆ ಬಾರ್‌ ಕಟ್ಟೆ ತಪ್ಪಿಸಲು ಪೊಲೀಸರ ವಾಹನ ಕೂಡ ಓಡಾಟ ಮಾಡಬೇಕು.•ರಾಜು ನಾಯ್ಕ, ಸ್ಥಳೀಯ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.