Dandeli: ಮೂರುವರೆ ವರ್ಷಕ್ಕೆ India Book of Records ನಲ್ಲಿ ಹೆಸರು ದಾಖಲಿಸಿಕೊಂಡ ಪೋರ


Team Udayavani, Jun 7, 2024, 2:36 PM IST

Dandeli: ಮೂರುವರೆ ವರ್ಷಕ್ಕೆ India Book of Records ನಲ್ಲಿ ಹೆಸರು ದಾಖಲಿಸಿಕೊಂಡ ಪೋರ

ದಾಂಡೇಲಿ : ಸಾಧನೆ ಅಂದರೆ ಇದು ಕಣ್ರೀ, ಈ ಸಮಾಜದ ಬಗ್ಗೆ ಏನೆಂದು ಅರಿಯದ ಮುಗ್ಧ ಪುಟಾಣಿ ಎಂದು ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಇದೆಯಲ್ಲ, ಇದು ಸಾಮಾನ್ಯ ಸಾಧನೆಯಲ್ಲ, ಇದೊಂದು ಅಸಮಾನ್ಯವಾದ ದೈತ್ಯ ಸಾಧನೆ ಎಂದರೆ ಅತಿಶಯೋಕ್ತಿ ಎನಿಸದು.

ಇಂತಹ ಅಪರೂಪದ ಅಪೂರ್ವ ಸಾಧನೆಗೆದ ನಮ್ಮ ದಾಂಡೇಲಿಯ ಹೆಮ್ಮೆಯ ಪುಟಾಣಿ ಅನೋಷ್ ರೋಹಿತ್ ಸ್ವಾಮಿ. ಅಂದಹಾಗೆ ಈ ಪುಟಾಣಿಯ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಯಾಕೆ ದಾಖಲಾಯಿತು ಅಂದುಕೊಂಡೀರಾ, ಹಾಗಾದ್ರೆ ಇಲ್ಲಿ ಸ್ವಲ್ಪ ಕೇಳಿ, ಅದರ ಮುಂಚೆ ಈ ಪುಟಾಣಿಯ ಸಂಕ್ಷಿಪ್ತ ಪರಿಚಯ ಮಾಡೋಣ ಬನ್ನಿ.

ದಾಂಡೇಲಿ ನಗರದ ವಿಜಯನಗರದ ನಿವಾಸಿ ರೋಹಿತ್ ಸ್ವಾಮಿ ಹಾಗೂ ಮರ್ಲಿನ್ ಸ್ವಾಮಿ ದಂಪತಿಗಳ ಮುದ್ದಿನ ಸುಪುತ್ರ ಈ ಮೂರೂವರೆ ವರ್ಷ ಪ್ರಾಯದ ಅನೋಷ್ ರೋಹಿತ್ ಸ್ವಾಮಿ.

ರೋಹಿತ್ ಸ್ವಾಮಿ ದಂಪತಿ ದಾಂಡೇಲಿಯ ನಿವಾಸಿಗಳಾಗಿದ್ದರೂ ಸದ್ಯ ಹುಬ್ಬಳ್ಳಿಯಲ್ಲಿ ಉದ್ಯೋಗದಲ್ಲಿ ಇರುವುದರಿಂದ ಹುಬ್ಬಳ್ಳಿಯಲ್ಲಿ ವಾಸ್ತವ್ಯವನ್ನು ಹೂಡಿದ್ದಾರೆ. ಒಂದು ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ತಂದೆ ತಾಯಿಗಳ ಪಾತ್ರ ಅತಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎನ್ನುವುದಕ್ಕೆ ಅನೋಷ್ ರೋಹಿತ್ ಸ್ವಾಮಿ ನೈಜ ಉದಾಹರಣೆಯಾಗಿದ್ದಾನೆ.

ಅನೋಷ್ ಹುಟ್ಟಿ ಒಂದುವರೆ ವರ್ಷ ಆಗುತ್ತಿರುವಾಗಲೇ ಅವನಲ್ಲಿರುವ ಕ್ರಿಯಾಶೀಲತೆಯನ್ನು ಬಹಳ ಸೂಕ್ಷ್ಮ ಮನಸ್ಸಿನಿಂದ ಆತನ ತಾಯಿ ಮರ್ಲಿನ್ ಸ್ವಾಮಿ ಅರಿತುಕೊಂಡರು. ಒಂದು ಸಲ ಹೇಳಿದ್ದನ್ನು ಹಾಗೇನೇ ನೆನಪಿಟ್ಟುಕೊಳ್ಖುವ ಜಾಣ್ಮೆಯನ್ನು ಗಮನಿಸಿದ ಮರ್ಲಿನ್ ಅವರು ಪುಟಾಣಿಯ ಕ್ರಿಯಾಶೀಲತೆಗೆ ಅನುಗುಣವಾಗಿ ಮುಂದೆ ಮೂರು ವರ್ಷ ಆಗುತ್ತಿದ್ದಂತೆಯೇ, ಅವನಿಗೆ ಸಾಧ್ಯವಾದಷ್ಟು ತರಬೇತಿಯನ್ನು ನೀಡಿದರು. ಹೀಗೆ ಬೆಳೆದ ಈ ಪುಟಾಣಿ ವಾರದ ಹೆಸರು, ತಿಂಗಳ ಹೆಸರು, ಚಿತ್ರ ನೋಡಿ ವಿವಿಧ ಪ್ರಾಣಿಗಳ ಹೆಸರು, ಚಿತ್ರ ನೋಡಿ ವಿವಿಧ ಪಕ್ಷಿಗಳ ಹೆಸರು, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ, ರೈಮ್ಸ್, ವಿವಿಧ ವೃತ್ತಿಗಳ ಬಗ್ಗೆ ಅಭಿನಯದ ಮೂಲಕ ತೋರಿಸಿದಾಗ ಆಯಾಯ ವೃತ್ತಿಯನ್ನು ಹೇಳುವುದು, ಪ್ರಸಕ್ತ ಸನ್ನಿವೇಶದ ಬಗ್ಗೆ ಉತ್ತರಿಸುವುದು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿಯವರ ಹೆಸರನ್ನು ಹೇಳುವುದು, ರಾಜ್ಯ ಜಿಲ್ಲೆಯ ತಾಲೂಕಿನ ಹೆಸರನ್ನು ಹೇಳುವುದನ್ನು ಕರಗತ ಮಾಡಿಕೊಂಡು ಸಾಧನೆಯ ಸಾಧಕನಾಗುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾನೆ ಅನೋಷ್.

ಪುಟಾಣಿಯ ಸಾಧನೆಗೆ ಸರಿಯಾದ ಸಮಯದಲ್ಲಿ ಪರಿಪಕ್ವವಾಗಿ ಬೆಳೆಯುವ ಮತ್ತು ಬೆಳೆಸುವ ನಿಟ್ಟಿನಲ್ಲಿ ರೋಹಿತ್ ಮತ್ತು ಮರ್ಲಿನ್ ಅವರಿಬ್ಬರು ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಅನೋಷ್ ನ ಸಾಧನೆ ಎಂದು ಜಗದಗಲಕ್ಕೆ ಪಸರಿಸಿದೆ. ಸಾಧನೆಗೆ ಮತ್ತಷ್ಟು ಕೀರ್ತಿ ಎಂಬಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅನೋಷ್ ರೋಹಿತ್ ಸ್ವಾಮಿಯ ಹೆಸರು ದಾಖಲಾಗಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಮೂರುವರೆ ವರ್ಷದ ಪುಟಾಣಿಯ ಹೆಸರು ದಾಖಲಾಗುವುದು ಪುಟ್ಟ ಪುಟಾಣಿಯ ಬಹುದೊಡ್ಡ ಸಾಧನೆಯೆ ಆಗಿದೆ. ಪುಟಾಣಿ ಅನೋಷ್ ರೋಹಿತ್ ಸ್ವಾಮಿಯ ಸಾಧನೆ ಕೇವಲ ಆತನ ಕುಟುಂಬಕ್ಕೆ ಗೌರವದ ಜೊತೆಜೊತೆಯಲ್ಲಿ ನಮ್ಮ ಹೆಮ್ಮೆಯ ಕರ್ಮ ಭೂಮಿ ದಾಂಡೇಲಿಗೂ ಬಹುದೊಡ್ಡ ಹೆಮ್ಮೆ ಮತ್ತು ಗೌರವವನ್ನು ತಂದುಕೊಟ್ಟಿದೆ.

ಅನೋಷ್ ರೋಹಿತ್ ಸ್ವಾಮಿಯ ಈ ಸಾಧನೆಗೆ ಪ್ರೇರಣಾದಾಯಿಗಳಾಗಿ ರೋಹಿತ್ ಸ್ವಾಮಿ ಮತ್ತು ಮರ್ಲಿನ್ ಸ್ವಾಮಿ ಅವರು ಹಾಗೂ ಈ ಪುಟಾಣಿಯ ಚೈತನ್ಯದಾಯಕ ಕ್ರಿಯಾಶೀಲತೆಗೆ ಅಜ್ಜ ಅಜ್ಜಿಗಳಾದ ವಿಜಯನಗರದ ಸಿದ್ದರಾಮ, ಸ್ವಾಮಿ, ಸುಶೀಲ ಮತ್ತು ಅಜ್ಜಿ ಸುಭಾಷ್ ನಗರದ ಸವಿತಾ ದಂಡಗಿ ಅವರುಗಳ ಅಕ್ಕರೆಯ ಆಶೀರ್ವಾದ ಮತ್ತು ಕುಟುಂಬಸ್ಥರ ಪ್ರೀತಿಯ ಪ್ರೋತ್ಸಾಹವು ಬಹುಮೂಲ್ಯ ಕೊಡುಗೆಯಾಗಿದೆ.

ಈ ಪುಟಾಣಿಯ ಸಾಧನೆಗೆ ಆಶೀರ್ವದಿಸಿ. ಈ ಪುಟಾಣಿ ನಮ್ಮೂರ ಹೆಮ್ಮೆ, ನಮ್ಮೂರ ಗೌರವ, ನಮ್ಮೂರ ಕೀರ್ತಿ. ವಿಶ್ ಯು ಆಲ್ ದಿ ಬೆಸ್ಟ್ ಅನೋಷ್
–  ಸಂದೇಶ್.ಎಸ್.ಜೈನ್

ಟಾಪ್ ನ್ಯೂಸ್

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Belagavi; Letter to CM on division of Belgaum district after Dussehra: Hebbalkar

Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Belagavi; Letter to CM on division of Belgaum district after Dussehra: Hebbalkar

Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್

Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

Shimoga; ಸಿದ್ದರಾಮಯ್ಯಗೆ ನ್ಯಾಯಾಧೀಶರ ಮೇಲೂ ನಂಬಿಕೆ ಇಲ್ಲ: ಶಾಸಕ ಚನ್ನಬಸಪ್ಪ

Andhra-Kalyan–Khandre

Significant Agreement: ವನ-ವನ್ಯಜೀವಿ ಸಂರಕ್ಷಣೆಗೆ ಯತ್ನ: ಸಚಿವ ಈಶ್ವರ ಖಂಡ್ರೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.