Sirsi: ಮುಡಾ ಹಗರಣದ ಮೂಲಕ ಸಿದ್ರಾಮಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ: ಕಾಗೇರಿ ಲೇವಡಿ
Team Udayavani, Oct 21, 2024, 12:36 PM IST
ಶಿರಸಿ: ಹಿಂದೆಲ್ಲ ಇದ್ದ ಕಾಂಗ್ರೆಸ್ ಭ್ರಷ್ಟಾಚಾರ ಹಗರಣ ಮುರಿದು ಸಿದ್ದರಾಮಯ್ಯ ಅವರು ಮುಡಾ ಹಗರಣದ ಮೂಲಕ ಹೊಸ ದಾಖಲೆ ಮಾಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದ್ದಾರೆ.
ಸೋಮವಾರ ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮೈಸೂರಿನ ಮುಡಾ ಹಗರಣದಲ್ಲಿ ಇಡಿ ಸಾಕಷ್ಟು ದಾಖಲೆ ಪಡೆದಿದೆ. ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟು ಕೊಟ್ಟಿದೆ. ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ, ಇಡಿ ತನಿಖೆಗೆ ರಾಜ್ಯ ಸರಕಾರದ ಅಧಿಕಾರಿಗಳು ಸಹಕಾರ ಕೊಡಬೇಕು. ಹಾಗೂ ಇದರ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದಲ್ಲಿ ಇದ್ದಾಗ ಮಾಡಿದ ಆರೋಪ ಈಗ ಸತ್ಯ ಅನ್ನಿಸೋದಿಲ್ಲವಾ ಎಂದು ಕೇಳಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಜನಕ ಆಗಿದೆ. ಇದರಿಂದ ಸಿದ್ದರಾಯಮಯ್ಯ ಅವರು ಸ್ವತಃ ರಾಜೀನಾಮೆ ಕೊಡಲು ಮನಸ್ಸಿದ್ದರೂ ಹೈಕಮಾಂಡ್ ಕಾರಣದಿಂದ ರಾಜೀನಾಮೆ ಕೊಡಲಾಗದ ಸ್ಥಿತಿ ಇರಬೇಕು ಎಂದೂ ಲೇವಡಿ ಮಾಡಿದರು.
ಮರ್ಯಾದೆಗೆಟ್ಟ ಸರಕಾರ, ಸಿದ್ದರಾಮಯ್ಯ ಅವರು ವಾಪಸ್ ಕೊಟ್ಟ ಬಳಿಕ ಹಗರಣ ಮುಗಿದು ಹೋಗುತ್ತಾ? ರಾಜ್ಯದ ಜನರಲ್ಲಿ ಭ್ರಮೆ ಸೃಷ್ಟಿಸುವುದು ಬಿಡಬೇಕು. ಕಾಂಗ್ರೆಸ್ ಸ್ಥಿತಿ ಹತಾಶ ಸ್ಥಿತಿ ಆಗಿದೆ. ದ್ವೇಷ ರಾಜಕಾರಣ, ಎಫ್ಐಆರ್, ನ್ಯಾಯಾಲಯದಲ್ಲಿ ಇದೆ. ಕೇಂದ್ರ ಸಚಿವರ ಮೇಲೆ ಕಾಂಗ್ರೆಸ್ ಬೇಜವಬ್ದಾರಿಯಾಗಿ ಮಾತನಾಡುವುದನ್ನು, ಬಿಜೆಪಿ ನಾಯಕರ ಮೇಲೆ ಮಸಿ ಬಳಿಯುವುದನ್ನು ಖಂಡಿಸುತ್ತೇವೆ ಎಂದರು.
ಜನ ವಿರೋಧಿ ಸರಕಾರ ಎನ್ನಲು ಹಾಪ್ಕಾಮ್ಸ್ ಮಳಿಗೆ ಬಂದ್ ಆಗಿದ್ದೂ ಉದಾಹರಣೆ. ರಾಜ್ಯದಲ್ಲಿ ನೂರಾರು ಬಂದ್ ಆಗಿದೆ ಇದಕ್ಕೆ ಸರಕಾರ ಏನು ಹೇಳುತ್ತದೆ ಎಂದೂ ಕೇಳಿದರು.
ಪ್ರಮುಖರಾದ ಗುರುಪ್ರಸಾದ ಹೆಗಡೆ, ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್ಟ, ಗಣಪತಿ ನಾಯ್ಕ, ನಂದನ ಸಾಗರ, ನಾಗರಾಜ್ ನಾಯ್ಕ, ಆರ್.ವಿ.ಹೆಗಡೆ, ರವಿಕಾಂತ ಶೆಟ್ಟಿ ಇತರರು ಇದ್ದರು.
ಸಿದ್ದರಾಮಯ್ಯ ಅವರ ಮುಡಾ ಹಗರಣದ ನಿಷ್ಪಕ್ಷಪಾತ ತನಿಖೆಗೆ ರಾಜೀನಾಮೆ ನೀಡಬೇಕಾಗಿದೆ. ಕಾಂಗ್ರೆಸ್ ನಲ್ಲಿ ಪರ್ಯಾಯ ಸಿಎಂ ಮಾಡಿಕೊಳ್ಳಲಿ.
– ಕಾಗೇರಿ, ಸಂಸದ
ಇದನ್ನೂ ಓದಿ: New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Co-Operation: ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ನಿರ್ಧಾರ: ಸಿದ್ದರಾಮಯ್ಯ
Chikkamagaluru; ಭಾರೀ ಮಳೆ ಸಾಧ್ಯತೆ: ಸಾರ್ವಜನಿಕರು, ಪ್ರವಾಸಿಗರಿಗೆ ಎಚ್ಚರಿಕೆ
D. K. Shivakumar ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಗೆದ್ದೇ ಗೆಲ್ಲುವೆ: ಯತ್ನಾಳ್
ByPolls; ಕಾಂಗ್ರೆಸ್ಸಿಗರು ನನ್ನನ್ನು ಸಂಪರ್ಕಿಸಿಲ್ಲ. ನಾಳೆ ಏನೋ ಗೊತ್ತಿಲ್ಲ..: ಯೋಗೇಶ್ವರ್
C. P. Yogeshwar: ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೈನಿಕ; ಪಕ್ಷೇತರನಾಗಿ ಕಣಕ್ಕೆ
MUST WATCH
ಹೊಸ ಸೇರ್ಪಡೆ
Co-Operation: ರಾಜ್ಯದಲ್ಲಿ 100 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ನಿರ್ಧಾರ: ಸಿದ್ದರಾಮಯ್ಯ
Taken-for-granted ಸಂಬಂಧಗಳಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ಪ್ರಧಾನಿ ಮೋದಿ
ODI Match: ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾಕ್ಕೆ ಜಯ
Udupi; ಕೆಮ್ಮಣ್ಣು ಗಣಪತಿ ಸಹಕಾರಿ ವ್ಯಾವಸಾಯಿಕ ಸಂಘ : ಅ. 27 ರಂದು ಶತಾಭಿವಂದನಂ’ ಸಮಾರೋಪ
BAN vs SA: ಢಾಕಾ ಟೆಸ್ಟ್; ಮೊದಲ ದಿನವೇ 16 ವಿಕೆಟ್ ಪತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.