![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 24, 2019, 12:27 PM IST
ಬಂಟ್ವಾಳ: ಸುಮಾರು 60 ದಿನಗಳ ಕಾಲ ಮಂಗಳೂರು ನಗರಕ್ಕೆ ನೀರು ಪೂರೈಸುವ ಸಲುವಾಗಿ ತುಂಬೆ ಆಣೆಕಟ್ಟಿಗೆ ಶಂಭೂರು ಎಎಂಆರ್ ಅಣೆಕಟ್ಟಿನಿಂದ ನೀರು ಹರಿಸಲಾಗಿದೆ.
ನೇತ್ರಾವತಿ ನದಿಯ ಒಳಹರಿವು ಕುಸಿತದ ಹಿನ್ನೆಲೆಯಲ್ಲಿ ತುಂಬೆ ಅಣೆಕಟ್ಟಿನಲ್ಲೂ ನೀರಿನ ಸಂಗ್ರಹ ಪ್ರಮಾಣ ಐದು ಮೀಟರ್ಗೆ ಕುಸಿದಿತ್ತು. ಶಂಭೂರು ಡ್ಯಾಂನಿಂದ ನೀರಿ ಹರಿಸಿದ ಪರಿಣಾಮ ಶನಿವಾರ ಮುಂಜಾನೆ 6 ಮೀಟರ್ಗೆ ಏರಿಕೆಯಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಮಾ. 21ರಂದು ಸಂಜೆ 6 ಗಂಟೆಗೆ ಅಣೆಕಟ್ಟಿನ ಒಂದು ಬಾಗಿಲನ್ನು ತೆರೆದು ನೀರು ಹರಿಸಲಾಗಿದ್ದು, ಮಾ. 22ರಂದು ರಾತ್ರಿ 8 ಗಂಟೆಗೆ ಸ್ಥಗಿತ ಗೊಳಿಸಲಾಯಿತು. ಪ್ರಸ್ತುತ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ 4 ಮೀ.ಗೆ ಇಳಿದಿದೆ. ಇದರಲ್ಲಿ ತಳಮಟ್ಟದಿಂದ 1.5 ಮೀ ನೀರು ಬಳಸುವಂತಿಲ್ಲ. ಹಾಗಾಗಿ ಬಳಕೆಗೆ 2.5 ಮೀ ನೀರು ಮಾತ್ರ ಲಭ್ಯವಾಗಲಿದೆ.
ಉರಿಬಿಸಿಲಿನ ಝಳಕ್ಕೆ ನೇತ್ರಾವತಿ ನದಿಯ ನೀರು ಆವಿಯಾಗುತ್ತಿದ್ದು, ನದಿ ಮೇಲ್ಗಡೆ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೂ ನೀರು ಅಗತ್ಯವಿದೆ. ಮುಂದಿನ 10 ದಿನಗಳ ಕಾಲ ಇದೇ ಮಟ್ಟವನ್ನು ಕಾಯ್ದುಕೊಳ್ಳಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಮುಂದಿನ 60 ದಿನಗಳ ಕಾಲ ಕುಡಿಯುವ ನೀರಿನ ಬೇಡಿಕೆಯನ್ನು ಪಡಿತರ ಮಾಡುವ ಮೂಲಕ ನಿಭಾಯಿಸಬೇಕಾದ ಅನಿವಾರ್ಯತೆ ಮಂಗಳೂರು ಮಹಾನಗರಪಾಲಿಕೆಗೆ ಎದು ರಾಗುವ ಸಂಭವವಿದೆ.
You seem to have an Ad Blocker on.
To continue reading, please turn it off or whitelist Udayavani.