![Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ](https://www.udayavani.com/wp-content/uploads/2024/07/raichur-415x241.jpg)
ಯಕ್ಷಗಾನ ಹಿರಿಯ ಕಲಾವಿದ ಸತ್ಯ ಹೆಗಡೆ ಇನ್ನಿಲ್ಲ
Team Udayavani, Mar 2, 2018, 8:20 AM IST
![26.jpg](https://www.udayavani.com/wp-content/uploads/2018/03/2/26.jpg)
ಹೊನ್ನಾವರ: ತಾಲೂಕಿನ ಹಡಿನಬಾಳದ ಯಕ್ಷಗಾನ ಹಿರಿಯ ಕಲಾವಿದ ಸತ್ಯ ಹೆಗಡೆ (88) ಗುರುವಾರ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದರಾಗಿ,
ಸಂಘಟಕರಾಗಿ, ಗುಂಡಬಾಳ ಮೇಳದ ಯಜಮಾನರಾಗಿ 55 ವರ್ಷ ಸೇವೆ ಸಲ್ಲಿಸಿದ್ದರು. ಪಾತ್ರದ ಔಚಿತ್ಯಕ್ಕೆ ತಕ್ಕ ಅಭಿನಯ, ಪ್ರಬುದ್ಧ ಮಾತುಗಾರಿಕೆ, ದಕ್ಷ ಆಡಳಿತ, ಕಟ್ಟುನಿಟ್ಟು, ಅಚ್ಚುಕಟ್ಟುತನದ ಮೂಲಕ ಪ್ರಸಿದ್ಧರಾಗಿದ್ದರು.
ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕರಾವಳಿ ಯಕ್ಷಗಾನ ಸಮ್ಮೇಳನದ ಗೌರವ ಸೇರಿ ಅನೇಕ ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿದ್ದರು. ಅವರ ಕುರಿತು ಸತ್ಯ ಹೆಗಡೆ ಅಭಿನಂದನಾ ಗ್ರಂಥ, ಆತ್ಮಚರಿತ್ರೆ ಪುಸ್ತಕಗಳು ಪ್ರಕಟಗೊಂಡಿವೆ. ಯಕ್ಷಗಾನ ಕಲೆಯ ಖ್ಯಾತ ಹಿರಿಯ ಕಲಾವಿದ ಹಾಗೂ ಸಂಘಟಕರಾದ ಸತ್ಯ ಹೆಗಡೆ ಹಡಿನಬಾಳ ಅವರ ನಿಧನಕ್ಕೆ ಶಾಸಕ ಮಂಕಾಳ ವೈದ್ಯ, ಕೆರೆಮನೆ ಇಡಗುಂಜಿ ಯಕ್ಷಗಾನ ಮೇಳದ ಶಿವಾನಂದ ಹೆಗಡೆ ಸೇರಿ ಗಣ್ಯರು, ಅಪಾರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
![Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ](https://www.udayavani.com/wp-content/uploads/2024/07/raichur-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![3-kushtagi](https://www.udayavani.com/wp-content/uploads/2024/07/3-kushtagi-150x90.jpg)
Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ
![Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ](https://www.udayavani.com/wp-content/uploads/2024/07/raichur-150x87.jpg)
Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ
![Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ](https://www.udayavani.com/wp-content/uploads/2024/07/RAHUL-5-150x104.jpg)
Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ
![Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು](https://www.udayavani.com/wp-content/uploads/2024/07/bidanur-150x85.jpg)
Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು
![2-kushtagi](https://www.udayavani.com/wp-content/uploads/2024/07/2-kushtagi-150x90.jpg)
ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.