![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, May 2, 2024, 10:52 PM IST
ಯಲ್ಲಾಪುರ: ಲೋಕಸಭಾ ಚುನಾವಣೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಸಿಬಂದಿಗಳಿಗೆ ಯಲ್ಲಾಪುರ ತಾಲೂಕಿನ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಊಟೋಪಚಾರದಲ್ಲಿ ಅವ್ಯವಸ್ಥೆಯ ಆಗರವಾಗಿ ಗೊಂದಲವೇರ್ಪಟ್ಟು ಗದ್ದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.
ಸುಮಾರು ಒಂದುವರೆ ಸಾವಿರದಷ್ಟು ಸಿಬಂದಿಗಳಿಗೆ ಇಲ್ಲಿ ತರಬೇತಿ ವ್ಯವಸ್ಥೆಗೊಳಿಸಲಾಗಿತ್ತು. ಬೆಳಗ್ಗೆ ನೀಡಿದ ರವಾ ಉಪ್ಪಿಟ್ಟು ಕೂಡಾ ಸರಿಯಾಗಿರಲಿಲ್ಲವಾದರೂ ಸುಮ್ಮನಿದ್ದರು.ಆದರೆ ಮಧ್ಯಾಹ್ನದ ಊಟವೂ ಕಳಪೆಯಾಗಿತ್ತು.ಅಲ್ಲದೇ ಊಟ ಅರ್ಧಕ್ಕೆ ಕಡಿಮೆ ಬಿದ್ದು ಕೋಲಾಹಲವೇರ್ಪಟ್ಟಿತು.ಸುಡುಬಿಸಿಲು ಸೆಕೆಯ ಬೇಗೆ ಒಂದು ಕಡೆ,ಹಸಿವು ಇನ್ನೊಂದು ಕಡೆ.ಜತೆಗೆ ತಾಟು ಹಿಡಿದು ಬಂದವನಿಗೆ ಅನ್ನಖಾಲಿಯಾಗಿ ಗೋಗೆರೆಯುವಂತಾಯ್ತು.
ಅನ್ನ ತಯಾರಿ ಆಗಿ ಬರುವಷ್ಟು ಹೊತ್ತು ನಿಂತುಕೊಳ್ಳುವಷ್ಡು ತಾಳ್ಮೆ ಕೂಡಾ ಹೊರಟುಹೋಗಿತ್ತು.ಗದ್ದಲ ತಾರಕಕ್ಕೇರಿದಾಗ ಸಿಬಂದಿಗಳನ್ನು ಬಸ್ಸಿನ ಮೂಲಕ ವಿವಿಧ ಹೊಟೇಲುಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಿದರು.ಆಗಲೆ ಎರಡೂವರೆ ಮೂರು ಗಂಟೆಯಾಗಿ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಮಗಾದ ತೊಂದರೆಯನ್ನು ಅಲ್ಲೇ ಪರಸ್ಪರ ತಮ್ಮವರಲ್ಲಿ ಹೇಳಿಕೊಂಡರು.ತರಬೇತಿಗೆ ಬರುವವರ ಸಂಖ್ಯೆ ನಿಶ್ಚಿತವಾಗಿ ಸಿಗುವಾಗ ಈ ತರಹನಾಗಿ ಊಟ ಕಡಿಮೆ ಬೀಳುವಂತಾದದ್ದು ಸಖೇಧಾಶ್ಚರ್ಯ ಸಂಗತಿ.ಅಂತೂ ತರಬೇತಿಗೆ ಬಂದ ಕೆಲ ಸಿಬಂದಿಗಳ ಮುಖ ಬಾಡಿ ಸಪ್ಪೆಯಾಗಿತ್ತು.ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಸ್ಥಳದಲ್ಲಿ ಇದ್ದು ಈ ಪರಿಸ್ಥಿತಿ ನಿಯಂತ್ರಣವಾಗಿದೆ. ಸಿಬ್ಬಂದಿಗಳ ಹಿಡಿಶಾಪ ಮಾತ್ರ ಮುಂದುವರೆದಿತ್ತು.
ಸ್ಥಳಕ್ಕೆ ಬಂದ ಸಿಬಂದಿಗೆ ಊಟೋಪಚಾರ ಅಲ್ಪೋಪಹಾರದ ವ್ಯವಸ್ಥೆಯನ್ನು ಚುನಾವಣ ಅಯೋಗದ ಅಧಿಕಾರಿಗಳು ನಿರ್ವಹಿಸಿದ್ದರು.ಜಿಲ್ಲಾಧಿಕಾರಿ ಹಂತದಲ್ಲಿ ಇದನ್ನು ಟೆಂಡರ್ ಕರೆಯಲಾಗಿತ್ತು. ಕುಂದಾಪುರದವರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.