Yellapur: ಜಲಪಾತ ವೀಕ್ಷಿಸಲೆಂದು ಬಂದ ವ್ಯಕ್ತಿ ಈಜಲು ಹೋಗಿ ಮುಳುಗಿ ಸಾವು
Team Udayavani, Jun 19, 2024, 8:35 AM IST
ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತ ವೀಕ್ಷಿಸಲೆಂದು ಬಂದಿದ್ದ ಪ್ರವಾಸಿಗನೊಬ್ಬ ಜಲಪಾತದ ಎದುರಿರುವ ಆಳದ ನೀರಿನ ಪ್ರದೇಶದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ.
ಹಸನ್ ಮದಾರಸಾಬ್ ಕಾಲೆಮದರ್ (34) ಮೌಲಾಲಾ ದರ್ಗಾ ಹತ್ತಿರ ಹುಬ್ಬಳ್ಳಿ ಮೃತ ದುರ್ದೈವಿ.
ಮಂಗಳವಾರ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಮಲ್ಲಿಕ್ ಬಸೀರ್ ಅಹಮದ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಈತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೋಜು ಮಸ್ತಿಯಲ್ಲಿ ತೆರಳಿದ್ದರು:
ಮಂಗಳವಾರ ಸಾತೊಡ್ಡಿ ಜಲಪಾತದ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿತ್ತು. ದ್ವಿ ಚಕ್ರ ವಾಹನದಲ್ಲಿ 2-3 ಜನ, ಟಂ-ಟಂ ಗಾಡಿಯಲ್ಲಿ ಕಿಕ್ಕಿರಿದು ಜೋತುಕೊಂಡು ಪ್ರವಾಸಿಗರು ಹೋಗಿದ್ದರು. ಅಲ್ಲದೇ ರಸ್ತೆ ಪಕ್ಕದ ಅಂಗಡಿಗಳ ಎದುರು ವಾಹನ ನಿಲ್ಲಿಸಿ ಗುಂಪಾಗಿದ್ದುಕೊಂಡು ನಿತ್ಯ ಸಂಚಾರಿಗರು ಹಾದು ಹೋಗಲು ಪರದಾಡುವಂತೆ ಆಗಿತ್ತು. ಇವರ ವರ್ತನೆಗೆ ಸಾರ್ವಜನಿಕರು ಹಿಡಿಶಾಪ ಹಾಕಿ ತೆರಳಿದ್ದರು. ಸಾರ್ವಜನಿಕರು ಇವರ ದುರ್ವರ್ತನೆ ಬಗ್ಗೆ ಪೊಲೀಸರ ಗಮನಕ್ಕೆ ತಂದರು.
ಸಂಜೆ ವೇಳೆ ದೇಹಳ್ಳಿ ಆನಗೋಡ ರಸ್ತೆಗಳಲ್ಲಿ ಪ್ರವಾಸಿಗರದ್ದೇ ಜನಜಂಗುಳಿ. ಪ್ರವಾಸಕ್ಕೆ ಬಂದವರಲ್ಲಿ ಬೈಕ್ ಸವಾರರು ಚಿಕ್ಕವರು. ಲೈಸನ್ಸ್ ಇಲ್ಲ, ಹೆಲ್ಮೆಟ್ ಇಲ್ಲ. ಪೊಲೀಸರ ಕಣ್ತಪ್ಪಿಸಲು ಯಾವ್ಯಾವುದೋ ರಸ್ತೆ ಹುಡುಕಾಡಿದರು. ಹಳ್ಳಿಯೊಳಗಿನ ಜನರೂ ಈ ಹೊಸಬರನ್ನು ನೋಡಿ ಕಂಗಾಲಾದರು. ಸಂಜೆ ಕೆಲಹೊತ್ತು ಪ್ರವಾಸಿಗರು ಈ ಪ್ರದೇಶದಲ್ಲಿ ಆವಾಂತರಗಳನ್ನು ಸೃಷ್ಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee Schemes: ಸಿರಿವಂತರು ಉಚಿತ ಯೋಜನೆ ಬಳಸುವುದು ಸೂಕ್ತವಲ್ಲ-ಆರ್.ವಿ.ದೇಶಪಾಂಡೆ
America ಸೌಂದರ್ಯ ಸ್ಪರ್ಧೆ: ಶಿರಸಿ ಮೂಲದ ಡಾ|ಶ್ರುತಿಗೆ ಕಿರೀಟ
15 ದಿನದಲ್ಲಿ ಸಮಸ್ಯೆಗೆ ಸ್ಪಂದಿಸಿ.. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಭೀಮಣ್ಣ ನಾಯ್ಕ
ಶಿರಸಿಯ ಅದ್ವೈತನಿಗೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್
MUST WATCH
ಹೊಸ ಸೇರ್ಪಡೆ
Arrested: ನಕಲಿ ಎ.ಕೆ.47 ಗನ್ ಬಳಸಿದ್ದ ರೀಲ್ ಶೋಕಿಲಾಲ ಬಂಧನ
ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್
Golden Star Ganesh: ಕ್ಷಮಿಸಿ, ಮುಂದಿನ ಸಲ ಸಿಗೋಣ..
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
Horoscope: ಅಕಸ್ಮಾತ್ ಧನಾಗಮ ಯೋಗ ನಿಮ್ಮದಾಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.